ಸಾರಾಂಶ
ಅನಕ್ಷರಸ್ಥರು ಅನ್ನ ಮತ್ತು ಅಕ್ಷರ ಅಗತ್ಯತೆಯನ್ನು ಅರಿಯಬೇಕು. ದೇಶದ ಅಭಿವೃದ್ಧಿಗೆ ದುಡಿಮೆದಾರರ ಕೊಡುಗೆ ದೊಡ್ಡದು, ಡಾ.ಬಿ.ಆರ್ ಅಂಬೇಡ್ಕರ್ ಸರ್ವ ಜನಾಂಗದ ಸಾಮಾಜಿಕ ಸಮಾನತೆಗಾಗಿ ಹೋರಾಡಿದವರು ಎಂದು ಸಾಹಿತಿ ಜಯಾನಂದ ಮಾದರ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಅನಕ್ಷರಸ್ಥರು ಅನ್ನ ಮತ್ತು ಅಕ್ಷರ ಅಗತ್ಯತೆಯನ್ನು ಅರಿಯಬೇಕು. ದೇಶದ ಅಭಿವೃದ್ಧಿಗೆ ದುಡಿಮೆದಾರರ ಕೊಡುಗೆ ದೊಡ್ಡದು, ಡಾ.ಬಿ.ಆರ್ ಅಂಬೇಡ್ಕರ್ ಸರ್ವ ಜನಾಂಗದ ಸಾಮಾಜಿಕ ಸಮಾನತೆಗಾಗಿ ಹೋರಾಡಿದವರು ಎಂದು ಸಾಹಿತಿ ಜಯಾನಂದ ಮಾದರ ಹೇಳಿದರು.ತಾಲೂಕಿನ ಫುಲಗಡ್ಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಉತ್ಸವ ನಿಮಿತ್ತ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಪ್ರಗತಿಗೆ ಸರ್ವರೂ ಕೈಜೋಡಿಸಬೇಕು. ಶೈಕ್ಷಣಿಕ ಅಭಿವೃದ್ಧಿಯಿಂದ ಕೆಳವರ್ಗದ ಜನಾಂಗದ ಸಾಮಾಜಿಕ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು.ಕರ್ನಾಟಕ ದಲಿತ ಸಂರ್ಘ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯಿಂದ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮೂಲಕ ಜಾಗೃತಿ ಹಮ್ಮಿಕೊಳ್ಳಲಾಗಿತ್ತು. ದಲಿತ ಮುಖಂಡರಾದ ಯಮನಪ್ಪ ಮಾದರ, ವಡೇರಹಟ್ಟಿ ಗ್ರಾಪಂ ಸದಸ್ಯ ಯಮನಪ್ಪ ಸಣ್ಣಕ್ಕಿ, ಯಲ್ಲಪ್ಪ ಅಕ್ಕಿ ಸಾಗರ, ಸಂತೋಷ ಮಾದರ, ಬಸವರಾಜ ಮಾದರ, ಅಶೋಕ್ ಅಕ್ಕಿ ಸಾಗರ, ಕಾಶಪ್ಪ ತಳವಾರ, ಮಹಾಂತೇಶ ತಳವಾರ, ಕಾಶಪ್ಪ ದಾಸರ, ದುರುಗಪ್ಪ ಸಣ್ಣಕ್ಕಿ , ತಿಪ್ಪಣ್ಣ ಮಾದರ ಮುಂತಾದವರು ಉಪಸ್ಥಿತರಿದ್ದರು.