ಸಾರಾಂಶ
ರಾಜ್ಯ ಬಿಜೆಪಿಯ ಬಾಕಿ ಉಳಿದಿದ್ದ ಹತ್ತು ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕವಾಗಿದೆ. ಇದರೊಂದಿಗೆ ರಾಜ್ಯ ಬಿಜೆಪಿಯ ಎಲ್ಲ ಜಿಲ್ಲೆಗಳ ಸಂಘಟನಾತ್ಮಕ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಂಡಂತಾಗಿದ್ದು, ರಾಜ್ಯಾಧ್ಯಕ್ಷರ ನೇಮಕಕ್ಕೆ ಹಾದಿ ಮತ್ತಷ್ಟು ಸುಗಮವಾಗಿದೆ.
ಬೆಂಗಳೂರು : ರಾಜ್ಯ ಬಿಜೆಪಿಯ ಬಾಕಿ ಉಳಿದಿದ್ದ ಹತ್ತು ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕವಾಗಿದೆ. ಇದರೊಂದಿಗೆ ರಾಜ್ಯ ಬಿಜೆಪಿಯ ಎಲ್ಲ ಜಿಲ್ಲೆಗಳ ಸಂಘಟನಾತ್ಮಕ ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಪೂರ್ಣಗೊಂಡಂತಾಗಿದ್ದು, ರಾಜ್ಯಾಧ್ಯಕ್ಷರ ನೇಮಕಕ್ಕೆ ಹಾದಿ ಮತ್ತಷ್ಟು ಸುಗಮವಾಗಿದೆ.
ಸಂಘಟನಾತ್ಮಕ ಜಿಲ್ಲೆಗಳು ಮತ್ತು ಅಧ್ಯಕ್ಷರ ವಿವರ ಹೀಗಿದೆ:
ಮೈಸೂರು ಗ್ರಾಮಾಂತರ- ಕೆ.ಎನ್.ಸುಬ್ಬಣ್ಣ, ಹಾಸನ- ಸಿದ್ದೇಶ್ ನಾಗೇಂದ್ರ, ಕೊಡಗು- ರವಿ ಕಾಳಪ್ಪ, ಉಡುಪಿ- ಕುತ್ಯಾರು ನವೀನ್ ಶೆಟ್ಟಿ, ಹಾವೇರಿ- ವಿರೂಪಾಕ್ಷಪ್ಪ ಬಳ್ಳಾರಿ, ದಾವಣಗೆರೆ- ಎನ್.ರಾಜಶೇಖರ, ಚಿತ್ರದುರ್ಗ- ಕೆ.ಟಿ.ಕುಮಾರಸ್ವಾಮಿ, ತುಮಕೂರು- ಎಚ್.ಎಸ್.ರವಿಶಂಕರ್ (ಹೆಬ್ಬಾಕ), ಮಧುಗಿರಿ- ಚಿದಾನಂದಗೌಡ ಮತ್ತು ಚಿಕ್ಕಬಳ್ಳಾಪುರ- ಎಸ್.ವಿ.ರಾಮಚಂದ್ರಗೌಡ (ಸೀಕಲ್).