ಪೆನ್ಡ್ರೈವ್ ಪ್ರಕರಣದಲ್ಲಿ ನನ್ನ ಮೇಲೆ ದಾಖಲೆ ಇದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ಅಷ್ಟೇ ಹೊರತು ಮಾನಸಿಕ ಸಮಸ್ಯೆ ಎದುರಿಸುತ್ತಿರುವ ದೇವರಾಜೇಗೌಡನಂತಹ ಮೆಂಟಲ್ ಗಿರಾಕಿಗಳಿಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. `
ಚುನಾವಣೆ ಗೆಲ್ಲುವ ಸಲುವಾಗಿ ರಾಜ್ಯಗಳಲ್ಲಿ ಜಾರಿಗೆ ತರಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಯೋಜನೆಗಳು ಪ್ರಗತಿಗೆ ಮಾರಕ. ಅದರಿಂದ ಆರ್ಥಿಕ ಪ್ರಗತಿ ಕುಂಠಿತ ವಾಗುತ್ತದೆ. ಇಂಥ ಯೋಜನೆಗಳು ಅಡ್ಡಪರಿಣಾಮಗಳನ್ನು ಹೊಂದಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ನಿವಾಸದಲ್ಲಿ ತಮಗೆ ಹಲ್ಲೆಯಾಗಿರುವ ಕುರಿತು ದೂರು ದಾಖಲಿಸಿರುವ ತಮ್ಮದೇ ಸಂಸದೆ ಸ್ವಾತಿ ಮಲಿವಾಲ್ಗೆ ಆಮ್ ಆದ್ಮಿ ಪಕ್ಷ ತಿರುಗೇಟು ನೀಡಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್ರ ಚಾರಿತ್ರ್ಯಕ್ಕೆ ಮಸಿ ಬಳಿಯಲೆಂದೇ ಸ್ವಾತಿ ಸಂಚು ರೂಪಿಸಿದ್ದಾರೆ ಎಂದಿದೆ.