ಸಾರಾಂಶ
ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ತನ್ನ ಹಣ ಬಲ ಬಳಸಿಕೊಂಡು ಜನರಿಗೆ ಸುಳ್ಳು ಸುದ್ದಿ ಹರಡುವ ಕೆಲಸ ಮಾಡುತ್ತಿದೆ ಎಂದು ಸಬೀತಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೊಸಳೆ ಕಣ್ಣೀರು ಹಾಕುವುದನ್ನು ನಿಲ್ಲಿಸಲಿ’ ಎಂದಿದ್ದಾರೆ
ಬೋಲ್ಪುರ: ಸಂದೇಶ್ಖಾಲಿಯಲ್ಲಿ ಮಹಿಳೆಯರ ಮೇಲೆ ಟಿಎಂಸಿ ನಾಯಕರಿಂದ ಅತ್ಯಾಚಾರ ನಡೆದಿದೆ ಎಂದು ಸುಳ್ಳು ಸುದ್ದಿ ಸೃಷ್ಟಿಸಿದ್ದು ಬಿಜೆಪಿ ನಾಯಕ ಸುವೇಂದು ಅಧಿಕಾರಿಯೇ ಎನ್ನುವ ಸ್ಟಿಂಗ್ ವಿಡಿಯೋವೊಂದು ಇತ್ತೀಚಿಗಷ್ಟೇ ಹೊರ ಬಿದ್ದಿತ್ತು.
ಇದಕ್ಕೆ ಕಿಡಿಕಾರಿರುವ ಟಿಎಂಸಿ ನಾಯಕಿ ಹಾಗೂ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ತನ್ನ ಹಣ ಬಲ ಬಳಸಿಕೊಂಡು ಜನರಿಗೆ ಸುಳ್ಳು ಸುದ್ದಿ ಹರಡುವ ಕೆಲಸ ಮಾಡುತ್ತಿದೆ ಎಂದು ಸಬೀತಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೊಸಳೆ ಕಣ್ಣೀರು ಹಾಕುವುದನ್ನು ನಿಲ್ಲಿಸಲಿ’ ಎಂದಿದ್ದಾರೆ.
ಭಾನುವಾರ ಮಾತನಾಡಿದ ಅವರು ‘ಇದೇ ವೇಳೆ‘ ಸಂದೇಶ್ಖಾಲಿ ಬಗ್ಗೆ ಅಪಪ್ರಚಾರ ಮಾಡುವಷ್ಟು ಬಿಜೆಪಿ ಕೆಳಮಟ್ಟಕ್ಕೆ ಇಳಿಯುತ್ತದೆ ಎಂದು ಯಾರಾದರೂ ಊಹಿಸಿದ್ದೀರಾ? ಇಂತಹ ಹೇಯ ಕೃತ್ಯಗಳನ್ನು ಮಾಡುವ ಮೂಲಕ ಪಶ್ಚಿಮ ಬಂಗಾಳದ ತಾಯಂದಿರನ್ನು ಅವಮಾನಿಸಬೇಡಿ. ಹಣ ನೀಡುವ ಮೂಲಕ ರಾಜ್ಯದ ಮಹಿಳೆಯರ ಮೇಲೆ ಅಗೌರವ ತೋರುವ ಧೈರ್ಯ ಮಾಡಬೇಡಿ’ ಎಂದು ಬಿಜೆಪಿ ವಿರುದ್ಧ ದೀದಿ ಕಿಡಿಕಾರಿದರು.