96ರ ಸ್ವಾತಂತ್ರ್ಯ ವೀರನಿಗೆ40 ವರ್ಷ ಪಿಂಚಣಿವಿಳಂಬ: ಕೇಂದ್ರಕ್ಕೆ ದಂಡ

KannadaprabhaNewsNetwork |  
Published : Nov 05, 2023, 01:15 AM IST

ಸಾರಾಂಶ

96 ವರ್ಷದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಕಳೆದ 40 ವರ್ಷಗಳಿಂದ ಪಿಂಚಣಿ ನೀಡದೆ ವಿಳಂಬ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ದೆಹಲಿ ಹೈಕೋರ್ಟ್, ಸರ್ಕಾರಕ್ಕೆ 20,000 ರು. ದಂಡ ವಿಧಿಸಿದೆ.

ನವದೆಹಲಿ: 96 ವರ್ಷದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಕಳೆದ 40 ವರ್ಷಗಳಿಂದ ಪಿಂಚಣಿ ನೀಡದೆ ವಿಳಂಬ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ದೆಹಲಿ ಹೈಕೋರ್ಟ್, ಸರ್ಕಾರಕ್ಕೆ 20,000 ರು. ದಂಡ ವಿಧಿಸಿದೆ. ಅಲ್ಲದೇ 1980ರಿಂದ ಅರ್ಜಿದಾರರಿಗೆ ನೀಡದೇ ಇರುವ ‘ಸ್ವತಂತ್ರತಾ ಸೈನಿಕ್‌ ಸಮ್ಮಾನ್‌’ ಅಡಿಯ ಪಿಂಚಣಿಯನ್ನು ವಾರ್ಷಿಕ ಶೇ.6ರಷ್ಟು ಬಡ್ಡಿಯೊಂದಿಗೆ 6 ವಾರಗಳಲ್ಲಿ ಪೂರ್ತಿ ಪಾವತಿ ಮಾಡಬೇಕು ಎಂದು ಆದೇಶಿಸಿದೆ. 01.01.1927ರಂದು ಜನಿಸಿರುವ ವ್ಯಕ್ತಿ ಕ್ವಿಟ್‌ ಇಂಡಿಯಾ ಸೇರಿದಂತೆ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ