ನವದೆಹಲಿ: ಯುರೋಪಿನ ಮಾನವ ಹಕ್ಕುಗಳ ಕೋರ್ಟ್ನಲ್ಲಿ ಗಡೀಪಾರು ವಿರುದ್ಧದ ಕಾನೂನು ಹೋರಾಟದಲ್ಲಿ ದೇಶಭ್ರಷ್ಟ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಹಿನ್ನಡೆ ಆಗಿದೆ. ಹೀಗಾಗಿ ಭಾರತಕ್ಕೆ ಆತನ ಅವರ ಗಡೀಪಾರು ಸನ್ನಿಹಿತವಾದಂತಾಗಿದೆ ಎನ್ನಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬಹುಕೋಟಿ ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಉದ್ಯಮಿ ನೀರವ್ ಮೋದಿ, ದೇಶಬಿಟ್ಟು ಬ್ರಿಟನ್ಗೆ ಪರಾರಿಯಾಗಿದ್ದಾರೆ. ಅವರನ್ನು ಗಡೀಪಾರು ಮಾಡುವ ಪ್ರಯತ್ನಗಳು ಹಲವು ವರ್ಷಗಳಿಂದ ನಡೆಯುತ್ತಿದ್ದು, ಏಪ್ರಿಲ್, 2026ರಲ್ಲಿ ಇದನ್ನು ಪ್ರಶ್ನಿಸಿ ನೀರವ್ ಮೋದಿ ಯುರೋಪಿನ ಮಾನವ ಹಕ್ಕುಗಳ ನ್ಯಾಯಾಲಯದ ಮುಂದೆ ಹೋಗಿದ್ದರು. ಆದರೆ, ಈ ಬಗ್ಗೆ ನ್ಯಾಯಾಲಯದಿಂದ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಅವರ ಮುಂದಿದ್ದ ಎಲ್ಲ ಕಾನೂನು ಆಯ್ಕೆಗಳೂ ಮುಗಿದಿವೆ ಎನ್ನಲಾಗಿದೆ.
ಹೀಗಾಗಿ ನೀರವ್ ಮೋದಿ ಅವರನ್ನು ಬ್ರಿಟನ್ ಗಡೀಪಾರು ಮಾಡಲು ಮುಂದಾಗಿದ್ದು, ಕೇವಲ ಆಡಳಿತಾತ್ಮಕ ಪ್ರಕ್ರಿಯೆ ಅಷ್ಟೇ ಬಾಕಿ ಇದೆ. ರಾಜತಾಂತ್ರಿಕ ಮೂಲಗಳ ಪ್ರಕಾರ ನೀರವ್ ಮೋದಿ ಅವರನ್ನು ಹಸ್ತಾಂತರಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಯಾವಾಗ ಬೇಕಿದ್ದರೂ ಅವರು ಗಡೀಪಾರು ಆಗಬಹುದಾಗಿದೆ.