ಪುಲ್ವಾಮಾ ದಾಳಿ ಪುಲ್ವಾಮಾದಲ್ಲಿ 2019ರಲ್ಲಿ ಜೈಷ್ ನಡೆಸಿದ್ದ ದಾಳಿ ಹಿಂದೆ ಈತನ ಕೈವಾಡವಿತ್ತು. ಜೈಷ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಎಂಬಾತ ಸ್ಫೋಟಕ ತುಂಬಿದ್ದ ವಾಹನವನ್ನು ಸಿಆರ್ಪಿಎಫ್ ಯೋಧರ ವಾಹನಕ್ಕೆ ಡಿಕ್ಕಿ ಹೊಡೆಸಿ ಆತ್ಮಾಹುತಿ ದಾಳಿ ನಡೆಸಿದ್ದ. ಈ ಭೀಕರ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಹಿಂದಿನ ಪ್ರಮುಖ ಸಂಚುಕೋರರಲ್ಲಿ ಹಮ್ಜಾ ಬುರ್ಹಾನ್ ಕೂಡ ಒಬ್ಬನಾಗಿದ್ದ. ಇದಾದ ನಂತರ ಭಾರತವು ಪಾಕ್ ಮೇಲೆ ಸರ್ಜಿಕಲ್ ದಾಳಿ ನಡೆಸಿತ್ತು.==
- ಹಮ್ಜಾ ಬುರ್ಹಾನ್ ಕಾಶ್ಮೀರದ ಪುಲ್ವಾಮಾ ಮೂಲದ ವ್ಯಕ್ತಿ
- ವಿದ್ಯಾಭ್ಯಾಸಕ್ಕೆ ಪಾಕ್ಗೆ ತೆರಳಿದ್ದ ವೇಳೆ ಉಗ್ರರ ನಂಟು- ಅಲ್ಲಿಂದಲೇ ಕಾಶ್ಮೀರದಲ್ಲಿ ಉಗ್ರವಾದದ ಕೃತ್ಯಕ್ಕೆ ಬೆಂಬಲ
ಪಾಕಿಸ್ತಾನ ಮುಜಫ್ಫರಾಬಾದ್ನಲ್ಲಿ ಅನಾಮಿಕರು ಈತನ ಮೇಲೆ ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ಹೇಳಿವೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದವನ್ನು ಬೆಂಬಲಿಸುತ್ತಿದ್ದವರಿಗೆ ಆದ ಅತಿದೊಡ್ಡ ಹಿನ್ನಡೆ.
ಈತ ಪುಲ್ವಾಮಾ ನಿವಾಸಿ ಅರ್ಜುಮಂದ್ ಗುಲ್ಜಾರ್ ದಾರ್ ಅಲಿಯಾಸ್ ಹಮ್ಜಾ ಬುರ್ಹಾನ್. ‘ಡಾಕ್ಟರ್’ ಎಂದೇ ತನ್ನ ಸ್ನೇಹಿತರಲ್ಲಿ ಜನಪ್ರಿಯ ಆಗಿದ್ದ. ಉನ್ನತ ಶಿಕ್ಷಣ ಪಡೆಯುವ ನೆಪದಲ್ಲಿ 2017ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ. ಆದರೆ, ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್-ಬದ್ರ್ ಸೇರಿಕೊಂಡು ಕಮಾಂಡರ್ ಹುದ್ದೆಗೇರಿದ್ದ. ಆ ಬಳಿಕ ಕಾಶ್ಮೀರಕ್ಕೆ ಮರಳಿ ಇಲ್ಲಿನ ಯುವಕರನ್ನು ಉಗ್ರ ಸಂಘಟನೆಗೆ ಸೇರಲು ಪ್ರೋತ್ಸಾಹಿಸುತ್ತಿದ್ದ.
ನಿಗೂಢ ಹತ್ಯೆಗಳ ಸರಣಿ: