ನವದೆಹಲಿ: ಚುನಾವಣೆಗಳಲ್ಲಿ ರಾಜ್ಯ, ದೇಶದ ಅಭಿವೃದ್ಧಿಗಳ ಜೊತೆಗೆ ಸ್ತ್ರೀ ಸಬಲೀಕರಣ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ಮತ ಕೇಳುವುದು ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲೊಂದು ರಾಜಕೀಯ ಪಕ್ಷ, ಪುರುಷ ಹಕ್ಕುಗಳಿಗಾಗಿ ಹೋರಾಡುತ್ತಿದೆ. ಅದು ಕೂಡ ವರದಕ್ಷಿಣೆ ಸೇರಿದಂತೆ ಬೇರೆ ಬೇರೆ ಕೌಟುಂಬಿಕ ದೌರ್ಜನ್ಯ ಸಂತ್ರಸ್ತ ಪುರುಷರಿಗಾಗಿ.
ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿಯೂ ಪುರುಷ ಹಕ್ಕುಗಳನ್ನೇ ಉಲ್ಲೇಖಿಸಿರುವ ಎಂಎಆರ್ಡಿ, ಪುರುಷ ಕಲ್ಯಾಣ ಸಚಿವಾಲಯ, ಪುರುಷ ಸುರಕ್ಷತಾ ಮಸೂದೆ, ಪುರುಷರಿಗಾಗಿ ರಾಷ್ಟ್ರೀಯ ಆಯೋಗ ಸ್ಥಾಪನೆಯಂತಹ ಆಶ್ವಾಸನೆ ನೀಡಿದೆ. ಮಾತ್ರವಲ್ಲದೇ ತಮ್ಮ ಬ್ಯಾನರ್ಗಳಲ್ಲಿ ಮರ್ದ್ ಕೋ ದರ್ದ್ ಹೋತಾ ಹೈ( ಪುರುಷರು ನೋವನ್ನು ಅನುಭವಿಸುತ್ತಾರೆ) ಎಂದು ಪ್ರಚಾರ ಮಾಡುವ ಮೂಲಕ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಪಕ್ಷದ ಸ್ಥಾಪಕರಾದ ಕಪಿಲ್ ಅವರು 1999 ರಿಂದ ಇತ್ಯರ್ಥವಾಗದ ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ.