ನವದೆಹಲಿ: ಸೇನೆಗೆ 4 ವರ್ಷ ಮಟ್ಟಿಗೆ ಅರೆಕಾಲಿಕ ಸೇವೆ ಸಲ್ಲಿಸಲು ಸೈನಿಕರ ನೇಮಿಸಿಕೊಳ್ಳುವ ‘ಅಗ್ನಿವೀರ’ ಯೋಜನೆ ವಿರುದ್ಧ ಕಾಂಗ್ರೆಸ್ ಪಕ್ಷ ಬುಧವಾರದಿಂದ ಆಂದೋಲನ ಆರಂಭಿಸಿದೆ.
ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಹಾರದಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ.
2019-22ರ ಅವಧಿಯಲ್ಲಿ 1.5 ಲಕ್ಷ ಯುವಕರು ಸೇನೆಯ ಕಾಯಂ ಹುದ್ದೆಗೆ ಆಯ್ಕೆಯಾಗಿದ್ದರು.
ಆದರೆ 2022ರಲ್ಲಿ ಅಗ್ನಿವೀರ ಯೋಜನೆ ಆರಂಭಿಸಿದ ನಂತರ ಇವರಿಗೆ ನೇಮಕ ಪತ್ರವನ್ನೇ ನೀಡಲಿಲ್ಲ ಎಂದು ರಾಹುಲ್ ಕಿಡಿಕಾರಿದ್ದಾರೆ.