ಅಗ್ನಿವೀರ ವಿರುದ್ಧ ಕಾಂಗ್ರೆಸ್‌ ಜೈ ಜವಾನ್‌ ಆಂದೋಲನ

KannadaprabhaNewsNetwork |  
Published : Feb 01, 2024, 02:03 AM ISTUpdated : Feb 01, 2024, 11:20 AM IST
ಭಾರತೀಯ ಸೇನೆ | Kannada Prabha

ಸಾರಾಂಶ

ಅಗ್ನಿವೀರ ನೇಮಕಾತಿಗೆ ಚಾಲನೆ ನೀಡಿದ ನಂತರ ಸೇನೆಗೆ ಕಾಯಂ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗಿದ್ದ 1.5 ಲಕ್ಷ ಮಂದಿಗೆ ನೇಮಕಾತಿ ಪತ್ರ ನೀಡದ ವಿರುದ್ಧ ರಾಹುಲ್‌ ಗಾಂಧಿ ಆಂದೋಲನ ಆರಂಭಿಸಿದ್ದಾರೆ.

ನವದೆಹಲಿ: ಸೇನೆಗೆ 4 ವರ್ಷ ಮಟ್ಟಿಗೆ ಅರೆಕಾಲಿಕ ಸೇವೆ ಸಲ್ಲಿಸಲು ಸೈನಿಕರ ನೇಮಿಸಿಕೊಳ್ಳುವ ‘ಅಗ್ನಿವೀರ’ ಯೋಜನೆ ವಿರುದ್ಧ ಕಾಂಗ್ರೆಸ್‌ ಪಕ್ಷ ಬುಧವಾರದಿಂದ ಆಂದೋಲನ ಆರಂಭಿಸಿದೆ.

ಭಾರತ್‌ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಿಹಾರದಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ.

2019-22ರ ಅವಧಿಯಲ್ಲಿ 1.5 ಲಕ್ಷ ಯುವಕರು ಸೇನೆಯ ಕಾಯಂ ಹುದ್ದೆಗೆ ಆಯ್ಕೆಯಾಗಿದ್ದರು.

ಆದರೆ 2022ರಲ್ಲಿ ಅಗ್ನಿವೀರ ಯೋಜನೆ ಆರಂಭಿಸಿದ ನಂತರ ಇವರಿಗೆ ನೇಮಕ ಪತ್ರವನ್ನೇ ನೀಡಲಿಲ್ಲ ಎಂದು ರಾಹುಲ್‌ ಕಿಡಿಕಾರಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

‘ನಾವಿಕ್‌’ ದಿಕ್ಸೂಚಿ ವ್ಯವಸ್ಥೆಯಲ್ಲಿ ಭಾರೀ ಸಮಸ್ಯೆ
ಇರಾನ್‌ ಮೇಲೆ ಭೂದಾಳಿಗೆ ಅಮೆರಿಕ ಸಿದ್ಧತೆ?