ಬಂಟ್ವಾಳ: ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜನಶಿಕ್ಷಣ ಟ್ರಸ್ಟ್ ಸಾಂತ್ವನ ಕೇಂದ್ರ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ಯೋಗ ಧ್ಯೇಯದೊಂದಿಗೆ ಯೋಗ ದಿನಾಚರಣೆ ಹಾಗೂ ಮನೆಗೊಂದು ಔಷಧಿ ಗಿಡ ಬೆಳೆಸುವ ಅಭಿಯಾನ ಕಾರ್ಯಕ್ರಮವು ಬಿ.ಸಿ.ರೋಡಿನ ಸ್ತ್ರೀಶಕ್ತಿ ಭವನದಲ್ಲಿ ನಡೆಯಿತು.
ತಹಸೀಲ್ದಾರ್ ಅರ್ಚನಾ ಭಟ್ ಮಾತನಾಡಿ, ಸ್ವಚ್ಛತೆಯ ವಿಚಾರವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಿಡಿಪಿಒ ಮುಮ್ತಾಜ್, ಉಪವಲಯ ಅರಣ್ಯಾಧಿಕಾರಿ ಅನಿಲ್ ಕೆ, ಜನಶಿಕ್ಷಣ ಟ್ರಸ್ಟ್ ಸಹ ನಿರ್ದೇಶಕ ಕೃಷ್ಣ ಮೂಲ್ಯ, ಕಾನೂನು ಸಲಹೆಗಾರ ಶ್ರೀಧರ್ ಪೈ, ನಿವೃತ್ತ ಸಿಡಿಪಿಒ ಸುಧಾ ಜೋಶಿ, ಯೋಗ ತರಬೇತುದಾರೆ ಸರಸ್ವತಿ, ನಿವೃತ್ತ ಸಂರಕ್ಷಣಾಧಿಕಾರಿ ಭಾರತಿ, ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿಯರಾದ ವಿದ್ಯಾ ಕೆ, ನಿಶಾಪ್ರಿಯಾ ಕೆ, ಸುಗ್ರಾಮ ತಾಲೂಕು ಸಂಯೋಜಕರಾದ ಚೇತನ್, ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.