ತೋಳ ದಾಳಿಗೆ 38 ಕುರಿಗಳ ಸಾವು

KannadaprabhaNewsNetwork |  
Published : May 09, 2026, 02:15 AM IST
ಪೊಟೋ-ಸಮೀಪದ ಗೊಜನೂರ ಗ್ರಾಮದಲ್ಲಿ ಕುರಿಗಳ ಮೇಲೆ ದಾಳಿ ಮಾಡಿ ಕೊಂದು ಹಾಕಿರುವುದು.  | Kannada Prabha

ಸಾರಾಂಶ

ಶುಕ್ರವಾರ ಮಧ್ಯಾಹ್ನ ಮರಿ ಹಾಗೂ ಹಲವು ದೊಡ್ಡ ಕುರಿಗಳನ್ನು ಕೂಡಿ ಹಾಕಿ ಉಳಿದ ಕುರಿಗಳನ್ನು ಮೇಯಿಸಲು ಹೋದಾಗ ಏಕಾಏಕಿ 4- 5 ತೋಳಗಳು ಬಲೆಯಲ್ಲಿ ಹಾಕಿದ್ದ ಕುರಿ ಹಿಂಡಿನ ಮೇಲೆ ಮನಸೋ ಇಚ್ಛೆ ದಾಳಿ ಮಾಡಿ ಕಚ್ಚಿ ತಿಂದು ಕೊಂದು ಹಾಕಿರುವ ಘಟನೆ ನಡೆದಿದೆ.

ಲಕ್ಷ್ಮೇಶ್ವರ: ಸಮೀಪದ ಗೊಜನೂರು ಗ್ರಾಮದ ಜಮೀನೊಂದರಲ್ಲಿ ಕುರಿ ದೊಡ್ಡಿಯ ಮೇಲೆ 4- 5 ತೋಳಗಳು ಭೀಕರ ದಾಳಿ ನಡೆಸಿ 30 ಕುರಿ ಮರಿಗಳು ಹಾಗೂ 8 ದೊಡ್ಡ ಕುರಿಗಳು ಸಾವಿಗೀಡಾಗಿರುವ ಘಟನೆ ಶುಕ್ರವಾರ ನಡೆದಿದೆ.

ಸಮೀಪದ ಗೊಜನೂರ ಗ್ರಾಮದ ಜಮೀನೊಂದರಲ್ಲಿ ಬೀಡುಬಿಟ್ಟಿದ್ದ ಕುರಿಗಾಹಿಗಳಾದ ಬೀರಪ್ಪ ಪೂಜಾರ, ಯಲ್ಲಪ್ಪ ಸಾವಿರಕುರಿ, ಸಿದ್ದಪ್ಪ ಉಳ್ಳಟ್ಟಿ ಹಾಗೂ ಗಾಳೆಪ್ಪ ಪೂಜಾರ ಎಂಬವರಿಗೆ ಸೇರಿದ ಕುರಿಗಳಾಗಿದ್ದು, ಶುಕ್ರವಾರ ಮಧ್ಯಾಹ್ನ ಮರಿ ಹಾಗೂ ಹಲವು ದೊಡ್ಡ ಕುರಿಗಳನ್ನು ಕೂಡಿ ಹಾಕಿ ಉಳಿದ ಕುರಿಗಳನ್ನು ಮೇಯಿಸಲು ಹೋದಾಗ ಏಕಾಏಕಿ 4- 5 ತೋಳಗಳು ಬಲೆಯಲ್ಲಿ ಹಾಕಿದ್ದ ಕುರಿ ಹಿಂಡಿನ ಮೇಲೆ ಮನಸೋ ಇಚ್ಛೆ ದಾಳಿ ಮಾಡಿ ಕಚ್ಚಿ ತಿಂದು ಕೊಂದು ಹಾಕಿರುವ ಘಟನೆ ನಡೆದಿದೆ. ಕುರಿಗಾಹಿಗಳು ವಾಪಸ್ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತೋಳಗಳ ದಾಳಿಗೆ ಬಲಿಯಾದ ಕುರಿ ಹಾಗೂ ಮರಿಗಳನ್ನು ಕಳೆದುಕೊಂಡ ಕುರಿಗಾಹಿಗಳು ಕಣ್ಣೀರು ಹಾಕಿದ್ದಾರೆ.ಮಣ್ಣನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ

ರೋಣ: ನಮ್ಮ ದೇಹವನ್ನು ಹೇಗೆ ಕಾಪಾಡಿಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಹೊಲದಲ್ಲಿನ ಮಣ್ಣನ್ನು ಕಾಪಾಡಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.

ಗಜೇಂದ್ರಗಡ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ವಿಶ್ವ ಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ಹಮ್ಮಿಕೊಂಡಿದ್ದ ಭೂ ಸಂಪನ್ಮೂಲ ಸಮೀಕ್ಷೆ ಸಾಕ್ಷರತಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಮಣ್ಣು ಬಹಳ ಶ್ರೇಷ್ಠವಾಗಿದೆ. ಫಲವತ್ತಾದ ಮಣ್ಣು ಎಷ್ಟೋ ವರ್ಷಗಳಿಂದ ರೂಪುಗೊಂಡಿದ್ದು, ಅಂತಹ ಮಣ್ಣನ್ನು ಪರೀಕ್ಷಿಸಿ ಎಲ್‌ಆರ್‌ಐ ಕಾರ್ಡ್ ತಯಾರಿಸಲಾಗಿದೆ. ಕಾರ್ಡಿನಲ್ಲಿರುವ ಮಾಹಿತಿ ರೈತರಿಗೆ ಉಪಯುಕ್ತವಾಗಿದೆ. ಸಾವಯವ ಗೊಬ್ಬರಗಳನ್ನೇ ಉಪಯೋಗಿಸಿ ಮಣ್ಣನ್ನು ಕಾಪಾಡಬೇಕು ಎಂದರು.ಉಪ ಕೃಷಿ ನಿರ್ದೇಶಕ ಪಾಲಾಕ್ಷಗೌಡ ಮಾತನಾಡಿ, ರಿವಾರ್ಡ್ ಯೋಜನೆ ಬಹಳಷ್ಟು ವೈಜ್ಞಾನಿಕ ಹಾಗೂ ಉಪಯುಕ್ತ ಮಾಹಿತಿ ರೈತರಿಗೆ ನೀಡುತ್ತಿದೆ. ಈ ಮಾಹಿತಿಯನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಸಹಾಯಕ ಕೃಷಿ ನಿರ್ದೇಶಕ ಶೌಕತ್ ಅಲಿ ತಹಶೀಲ್ದಾರ್ ಮಾತನಾಡಿ, ಭೂ ಸಂಪನ್ಮೂಲ ಮಾಹಿತಿಯನ್ನು ಈಗಾಗಲೇ ರೈತರಿಗೆ ತರಬೇತಿ ಮೂಲಕ ನೀಡಲಾಗಿದ್ದು, ಕಾರ್ಡುಗಳನ್ನು ವಿತರಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ನೀಡಲು ಈಗ ಸಾಕ್ಷರತಾ ಅಭಿಯಾನ ಮಾಡಲಾಗುತ್ತಿದೆ. ರೈತರು ಅಭಿಯಾನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.ಅಬ್ಬಿಗೇರಿ ಗ್ರಾಮದ ಪ್ರಗತಿಪರ ರೈತರು, ಮುಖಂಡರು ಹಾಗೂ ಇಲಾಖೆಯ ಸಿಬ್ಬಂದಿ ಇದ್ದರು. ಕೃಷಿ ಅಧಿಕಾರಿ ಬಸವರಾಜ ಗದಗಿನ ಸ್ವಾಗತಿಸಿದರು. ವಿಜಯಲಕ್ಷ್ಮಿ ಜೋಗಿ ನಿರೂಪಿಸಿದರು. ಅನ್ನಪೂರ್ಣ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೆಡ್ ಕ್ರಾಸ್ ಮಾನವೀಯ ಸೇವೆಯ ಪ್ರತೀಕ
ಮುರುಡೇಶ್ವರದಲ್ಲಿ ಕಾರು ಅಪಘಾತ: ಒಬ್ಬ ಸಾವು, ಮೂವರಿಗೆ ಗಾಯ