ಲಕ್ಷ್ಮೇಶ್ವರ: ಬ್ರಾಹ್ಮಣರು ಸಮಾಜದಲ್ಲಿನ ಎಲ್ಲ ವರ್ಗಗಳ ಜನರಿಗೂ ಒಳಿತನ್ನು ಬಯಸುವವರಾಗಿದ್ದು, ಯಾವುದೇ ರೀತಿಯ ಸಮಾಜದ್ರೋಹಿ ಕಾರ್ಯಗಳನ್ನು ಮಾಡದೆ ಎಲ್ಲ ಹಿತವನ್ನು ಬಯಸುವ ಸಮಾಜವಾಗಿದೆ ಎಂದು ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ತಿಳಿಸಿದರು.
ಸಮಾಜದಲ್ಲಿ ನಡೆಯುತ್ತಿರುವ ಲವ್ ಜಿಹಾದ್, ಮತಾಂತರ ಇತ್ಯಾದಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದವರ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಿಂದೂ ಸಮಾಜವನ್ನು ದೇಶದಲ್ಲಿ ಉಳಿಯುವಂತೆ ಮಾಡಿದ್ದು ಆದಿ ಶಂಕರರಾಚಾರ್ಯರು. ಅವರಿಂದಲೆ ಹಿಂದೂ ಧರ್ಮ ಬೆಳಗುವಂತಾಯಿತು ಎಂದು ಹೇಳಿದ ಅವರು, ಸಮಾಜದವರು ಒಗ್ಗಟ್ಟಾಗಿ ಸಾಗಿದಾಗ ಎಂತಹುದೆ ಕಠಿಣ ಪರಿಸ್ಥಿತಿ ಬಂದರೂ ಎದುರಿಸಬಹುದಾಗಿದೆ ಎಂದರು.ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನಿಸ್, ಸಮಾಜದ ಹಿರಿಯರಾದ ನಾರಾಯಣಭಟ್ ಪುರಾಣಿಕ, ಪ್ರಹ್ಲಾದ್ರಾವ್ ಕುಲಕರ್ಣಿ, ಕೆ.ಎಸ್. ಕುಲಕರ್ಣಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ, ಎಸ್.ಜಿ. ಹೊಂಬಳ, ಅರವಿಂದ ದೇಶಪಾಂಡೆ, ಅನಿಲ ಕುಲಕರ್ಣಿ, ರಾಘವೇಂದ್ರ ಪೂಜಾರ, ಡಿ.ಎಂ. ಪೂಜಾರ, ಡಾ. ಪ್ರಸನ್ನ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಅನಂತಭಟ್ ಪೂಜಾರ ಸೇರಿದಂತೆ ಅನೇಕರಿದ್ದರು.