ಟಿಪ್ಪರ್ ಬೈಕ್ ನಡುವೆ ಅಪಘಾತ: ಸ್ಥಳದಲ್ಲೆ ಇಬ್ಬರ ಸಾವು

KannadaprabhaNewsNetwork |  
Published : Sep 01, 2026, 02:45 AM IST
31 ರೋಣ 1,1 ಎ. ಇಟಗಿ ಕ್ರಾಸ್ ಬಳಿ  ಬೈಕ್ - ಟಿಪ್ಪರ ನಡುವೆ  ಅಪಘಾತ. | Kannada Prabha

ಸಾರಾಂಶ

ರೋಣದಿಂದ ಗಜೇಂದ್ರಗಡ ಕಡೆಗೆ ಹೊರಟ್ಟಿದ್ದ ಟಿಪ್ಪರ್ ಮತ್ತು ಇಟಗಿ ಕ್ರಾಸ್‌ನಿಂದ ಹೊಸಳ್ಳಿ(ರೋಣ ರಸ್ತೆ) ಹೊರಟ್ಟಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬೈಕ್‌ನಲ್ಲಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ರೋಣ: ತಾಲೂಕಿನ ಇಟಗಿ ಗ್ರಾಮದ ಕ್ರಾಸ್(ಕಮಾನ್) ಬಳಿ ಟಿಪ್ಪರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ, ಸ್ಥಳದಲ್ಲಿಯೇ ಬೈಕ್ ಸವಾರರಿಬ್ಬರು ಸಾವಿಗೀಡಾದ ಘಟನೆ ಸೋಮವಾರ ನಡೆದಿದೆ.

ರೋಣದಿಂದ ಗಜೇಂದ್ರಗಡ ಕಡೆಗೆ ಹೊರಟ್ಟಿದ್ದ ಟಿಪ್ಪರ್ ಮತ್ತು ಇಟಗಿ ಕ್ರಾಸ್‌ನಿಂದ ಹೊಸಳ್ಳಿ(ರೋಣ ರಸ್ತೆ) ಹೊರಟ್ಟಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬೈಕ್‌ನಲ್ಲಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಾವಿಗೀಡಾದವರು ರೋಣ ತಾಲೂಕಿನ ಹೊಸಳ್ಳಿ ಗ್ರಾಮದ ಶರಣಪ್ಪ ಜಾಲಿಹಾಳ(65), ಸುರೇಶ ತಳವಾರ(59). ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊಳಚೆ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿ

ರೋಣ: ಸ್ಲಂ ಕಾಯ್ದೆ 1973ರ ಪ್ರಕಾರ ಘೋಷಿತ ಹಾಗೂ ಅಘೋಷಿತ ಕೊಳಚೆ ಪ್ರದೇಶ ನಿವಾಸಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿ ಭೂಮಿ ಹಕ್ಕು ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸ್ಲಂ ಮುಖಂಡರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಘೋಷಿತ ಹಾಗೂ 80ಕ್ಕೂ ಅಧಿಕ ಗುರುತಿಸಲಾದ ಸ್ಲಂಗಳಿದ್ದು, ಅನುದಾನ ದುರ್ಬಳಕೆಯಿಂದಾಗಿ ಜನರಿಗೆ ಕನಿಷ್ಠ ಮೂಲ ಸೌಕರ್ಯಗಳೂ ಸಿಗುತ್ತಿಲ್ಲ. ಕೊಳಚೆ ಪ್ರದೇಶಗಳ ಹಕ್ಕಿಗಾಗಿ ಜಿಲ್ಲಾದ್ಯಂತ ಹೋರಾಟ ರೂಪಿಸಲಾಗುವುದು ಎಂದರು.ಇದೇ ವೇಳೆ ರೋಣ ತಾಲೂಕು ಘಟಕವನ್ನು ರಚಿಸಲಾಯಿತು. ವಕೀಲ ಎಂ.ಬಿ. ನದಾಫ್, ಜಿಲ್ಲಾ ಮಹಿಳಾ ಸಂಚಾಲಕಿ ಪರವೀನ್‌ಬಾನು ಹವಾಲ್ದಾರ್, ಮುಖಂಡರಾದ ಮೌಲಾಸಾಬ ಗಚ್ಚಿ, ಬಸವರಾಜ ಕುರಿ, ರಹಿಮಾನಬಿ ಕೊಲಕಾರ, ಹುಸೇನಬಿ ಸರಖವಾಸ, ಭಾಗ್ಯ ಗೊಲ್ಲರ, ಶಂಕ್ರಪ್ಪ ಮುಂಡರಗಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಗಿರಿಯಲ್ಲಿ ವಿವಾದಿತ ಸಮಾಧಿಗೆ ಮಂಟಪ ಇಟ್ಟು ಪೂಜೆ
ಗಂಗಾವತಿಯಲ್ಲಿ ಮತ್ತೆ ಮೊಬೈಲ್ ಟವರ್ ಏರಿದ ಭಗ್ನಪ್ರೇಮಿ