ವ್ಯಾಸ, ವಾಲ್ಮೀಕಿಯರನ್ನು ಹೊಗಳದ ಕವಿಗಳೇ ಇಲ್ಲ

KannadaprabhaNewsNetwork |  
Published : Mar 30, 2026, 12:15 AM IST
38 | Kannada Prabha

ಸಾರಾಂಶ

ಇಂದಿನ ಪ್ರಪಂಚಕ್ಕೆ ಅನ್ವಯವಾಗುವಂತಹ ಅನೇಕ ಪ್ರಸಂಗಗಳು ರಾಮಾಯಣ ಮಹಾಭಾರತಗಳಲ್ಲಿ ದೊರೆಯುತ್ತವೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಪಂಚದಲ್ಲಿರುವ ಬಹುತೇಕ ಕವಿಗಳೆಲ್ಲರೂ ವೇದ ವ್ಯಾಸರು ಹಾಗು ವಾಲ್ಮೀಕಿಯನ್ನು ಹೊಗಳಿಯೇ ಇರುತ್ತಾರೆ ಎಂದು ವಿದ್ವಾನ್ ಡಾ.ಎಚ್.ವಿ. ನಾಗರಾಜರಾವ್ ಅಭಿಪ್ರಾಯಪಟ್ಟರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ ವತಿಯಿಂದ ನಗರದ ವಿಜಯ ವಿಠಲ ಕಾಲೇಜು ಆವರಣದಲ್ಲಿ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಈ ವಿಷಯ ತಿಳಿಸಿದರು.

ಇಂದಿನ ಪ್ರಪಂಚಕ್ಕೆ ಅನ್ವಯವಾಗುವಂತಹ ಅನೇಕ ಪ್ರಸಂಗಗಳು ರಾಮಾಯಣ ಮಹಾಭಾರತಗಳಲ್ಲಿ ದೊರೆಯುತ್ತವೆ. ಉಪನಿಷತ್ತುಗಳು ವೇದಗಳ ಕೊನೆಯ ಭಾಗವಾಗಿವೆ. ಸತ್ಯಮೇವ ಜಯತೆಯನ್ನು ಮಂಡೂಕೋಪನಿಷತ್ತಿನಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಮುತ್ತಿನಂತಹ ಮಾತೇ ಮುಕ್ತಕ. ಒಬ್ಬರಿಗೆ ಮಾತ್ರ ಅನ್ವಯಿಸದೇ ಸರ್ವರಿಗೂ ಅನ್ವಯವಾಗುವಂತಿರುವುದೇ ಮುಕ್ತಕದ ವಿಶೇಷತೆ. ಈ ಸಂದರ್ಭದಲ್ಲಿ ನಂಜನಗೂಡು ಸತ್ಯನಾರಾಯಣ ಅವರ ನಂಜನಗೂಡು ತಿರುಮಲಾಂಬ, ಪ್ರಾಚೀನ ವಿಜ್ಞಾನಿಗಳು ಹಾಗು ವೇದಗಳಲ್ಲಿ ವಿಜ್ಞಾನ ಎಂಬ ಮೂರು ಪುಸ್ತಕಗಳನ್ನು ಅವರು ಲೋಕಾರ್ಪಣೆಗೊಳಿಸಿದರು.

ಮಹಿಳಾ ಘಟಕದ ಸದಸ್ಯರು ಯುಗಾದಿ ಗೀತೆಗಳನ್ನು ಹಾಡಿದರು. ನಂತರ ಎಲ್ಲರಿಗೂ ಬೇವು ಬೆಲ್ಲ ವಿತರಿಸಲಾಯಿತು.

ಸಮಾರಂಭದಲ್ಲಿ ಲೇಖಕರಾದ ನಂಜನಗೂಡು ಸತ್ಯನಾರಾಯಣ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಲಯ ಪ್ರಮುಖ್ ಡಾ.ವಿ. ರಂಗನಾಥ್, ಕಾರ್ಯಕ್ರಮ ಅನುವರ್ತಿ ರಘುಶೆಟ್ಟಿ, ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ ಹಾಗು ಜಿಲ್ಲಾ ಕಾರ್ಯದರ್ಶಿ ಸು. ಸುಬ್ರಹ್ಮಣ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒತ್ತಡರಹಿತ ಜೀವನಕ್ಕಾಗಿ ದೈಹಿಕ ಚಟುವಟಿಕೆ ಅಗತ್ಯ: ಡಾ.ಮೇಘನಾ
ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗಿಂತ ಮಹಿಳೆಯರ ಸಾಧನೆ ಉತ್ತಮ: ಶಾಸಕ ಜಿ.ಎಚ್. ಶ್ರೀನಿವಾಸ್