ನಾರಾಯಣಪುರ ಜಲಾಶಯದ ಎಲ್ಲ ಗೇಟುಗಳು ಮುಚ್ಚಿ ಕುರಿಗಳ ರಕ್ಷಣೆ !

KannadaprabhaNewsNetwork |  
Published : Sep 01, 2025, 01:03 AM IST
ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ತಾಲೂಕಿನ ಮೇಲಿನಗಡ್ಡಿ ಹಾಗೂ ಜಂಗಿನಗಡ್ಡಿ ಗ್ರಾಮದ ರೈತರ 31 ಕುರಿಗಳನ್ನು ರಕ್ಷಿಸಲಾಗಿದೆ. | Kannada Prabha

ಸಾರಾಂಶ

ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ತಾಲೂಕಿನ ಮೇಲಿನಗಡ್ಡಿ ಹಾಗೂ ಜಂಗಿನಗಡ್ಡಿ ಗ್ರಾಮದ ರೈತರ 31 ಕುರಿಗಳನ್ನು ರಕ್ಷಿಸಲಾಗಿದೆ. ಕಳೆದ 15 ದಿನಗಳ ಹಿಂದೆ ಕುರಿಗಳ ಮೇಯಿಸಲು ತೆರಳಿದ್ದ ಕುರಿಗಾಹಿಗಳು, ಇತ್ತೀಚಿನ ಪ್ರವಾಹ ಪರಿಸ್ಥಿತಿಯಿಂದ ಕುರಿಗಳನ್ನು ಅಲ್ಲಿಯೇ ಬಿಟ್ಟು ವಾಪಸ್ಸಾಗಿದ್ದರು.  

ಹುಣಸಗಿ (ಯಾದಗಿರಿ ಜಿಲ್ಲೆ): ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ತಾಲೂಕಿನ ಮೇಲಿನಗಡ್ಡಿ ಹಾಗೂ ಜಂಗಿನಗಡ್ಡಿ ಗ್ರಾಮದ ರೈತರ 31 ಕುರಿಗಳನ್ನು ರಕ್ಷಿಸಲಾಗಿದೆ. ಕಳೆದ 15 ದಿನಗಳ ಹಿಂದೆ ಕುರಿಗಳ ಮೇಯಿಸಲು ತೆರಳಿದ್ದ ಕುರಿಗಾಹಿಗಳು, ಇತ್ತೀಚಿನ ಪ್ರವಾಹ ಪರಿಸ್ಥಿತಿಯಿಂದ ಕುರಿಗಳನ್ನು ಅಲ್ಲಿಯೇ ಬಿಟ್ಟು ವಾಪಸ್ಸಾಗಿದ್ದರು. ಕುರಿಗಳ ಬಗ್ಗೆ ಆತಂಕಗೊಂಡ ಕುರಿಗಾಹಿಗಳು ತಹಸೀಲ್ದಾರರಿಗೆ ಮನವಿ ಮಾಡಿ, ರಕ್ಷಣಾ ಕಾರ್ಯಕ್ಕೆ ಕೋರಿದ್ದರು. ನಾರಾಯಣಪುರ ಜಲಾಶಯದಿಂದ ಹೊರಹರಿವು ಹೆಚ್ಚಿದ್ದರಿಂದ ಕಾರ್ಯಾಚರಣೆ ಆಗ ಸಾಧ್ಯವಾಗಿರಲಿಲ್ಲ.

ಈಗ, ಹರಿವು ಕಮ್ಮಿಯಾಗುತ್ತಲೇ ತೆಪ್ಪದ ಮೂಲಕ ಕುರಿಗಳನ್ನು ರಕ್ಷಣೆ ಮಾಡಲಾಗಿದೆ. ಇದಕ್ಕಾಗಿ ಜಲಾಶಯದ ಗೇಟುಗಳ ಮುಚ್ಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

 ನಡುಗಡ್ಡೆಯಲ್ಲಿ ಸಿಲುಕಿದ್ದ ಒಟ್ಟು 218 ಕುರಿಗಳ ಪೈಕಿ 187 ಕುರಿಗಳು ಮೃತಪಟ್ಟಿದ್ದು, ಇನ್ನೂ 31 ಕುರಿಗಳನ್ನು ಮೀನುಗಾರರ ಸಹಾಯದಿಂದ ಹಾಗೂ ಇದೇ ನಡುಗಡ್ಡೆಯ ಇನ್ನೊಂದು ಸ್ಥಳದಲ್ಲಿ 81 ಕುರಿಗಳು ಇರುವುದನ್ನು ಖಚಿತಪಡಿಸಿಕೊಂಡ ಕಂದಾಯ ಇಲಾಖೆ ಹಾಗೂ ಪಶು ಇಲಾಖೆ ಅಧಿಕಾರಿಗಳು ಹುಣಸಗಿ ತಹಶೀಲ್ದಾರ್‌ ಹಾಗೂ ಅಪಾರ ಜಿಲ್ಲಾಧಿಕಾರಿ ಅವರ ಮಾರ್ಗದರ್ಶನದಲ್ಲಿ ನಾರಾಯಣಪುರ ಬಸವಸಾಗರ ಜಲಾಶಯದ ಎಲ್ಲಾ ಗೇಟ್‌ಗಳನ್ನು ಬಂದ್ ಮಾಡಿ ಕುರಿಗಳನ್ನು ರಕ್ಷಿಸಲಾಗಿದೆ ಎಂದು ಉಪ ತಹಸೀಲ್ದಾರ ಕಲ್ಲಪ್ಪ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಪಶು ಇಲಾಖೆಯ ಡಾ.ರಾಜಶೇಖರ ದೇಶಪಾಂಡೆ, ಪಶುವೈದ್ಯಾಧಿಕಾರಿ ಡಾ.ಮೆಹಬೂಬ್‌ ಕಾಜಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಶಿವಶಂಕರ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ