ಕೆಲಸ ಮಾಡಿದ್ದ ಮನೆಯಲ್ಲೇ 8ಗ್ರಾಂ ಚಿನ್ನದ ಬ್ರೇಸ್ ಲೈಟ್ ಕದ್ದ

KannadaprabhaNewsNetwork |  
Published : Sep 26, 2024, 10:18 AM IST
ಆರೋಪಿ ರವಿ | Kannada Prabha

ಸಾರಾಂಶ

ಅನ್ನ ಹಾಕಿದ ಮನೆ ಮಾಲಿಕನ ಮನೆಗೆ ಕನ್ನ ಹಾಕಿ ಕಳ್ಳನೊಬ್ಬ ಮಾಲಿಕನ ಮನೆಯ ಬೀರುವಿನಲ್ಲಿದ್ದ ಚಿನ್ನದ ಬ್ರೇಸ್ ಲೈಟ್ ಕಳವು ಮಾಡಿ, ಬಾಳೆಹೊನ್ನೂರು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕೊಪ್ಪ

ಅನ್ನ ಹಾಕಿದ ಮನೆ ಮಾಲಿಕನ ಮನೆಗೆ ಕನ್ನ ಹಾಕಿ ಕಳ್ಳನೊಬ್ಬ ಮಾಲಿಕನ ಮನೆಯ ಬೀರುವಿನಲ್ಲಿದ್ದ ಚಿನ್ನದ ಬ್ರೇಸ್ ಲೈಟ್ ಕಳವು ಮಾಡಿ, ಬಾಳೆಹೊನ್ನೂರು ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ.ಸಾಗರ ತಾಲೂಕಿನ ಕುಂಸಿ ಮೂಲದ ರವಿ ಬಿನ್ ತಿಮ್ಮಪ್ಪ ಎಂಬಾತ ಚಿನ್ನದ ಬ್ರೇಸ್ ಲೈಟ್ ಕಳವು ಮಾಡಿರುವ ಆರೋಪಿ. ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಬ್ಳಿಯ ತಿಮ್ಮಪ್ಪಗೌಡ ಎಂಬುವವರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಸುಮಾರು 8 ಗ್ರಾಂ ತೂಕದ ಚಿನ್ನದ ಬ್ರೇಸ್ ಲೈಟ್ ಕಳವು ಮಾಡಿ ಬಚ್ಚಿಟ್ಟಿದ್ದ.

ಆರೋಪಿಯ ನಡತೆಯಿಂದ ಅನುಮಾನಗೊಂಡ ಮಾಲಿಕ ತಿಮ್ಮಪ್ಪಗೌಡ ಬಾಳೆಹೊನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಬಾಳೆಹೊನ್ನೂರು ಪಿಎಸ್‌ಐ ರವೀಶ್ ಹಾಗೂ ಕ್ರೈಂ ಎಸ್‌ಐ ಅಭಿಷೇಕ್ ಆರೋಪಿಯನ್ನು ಬಂಧಿಸಿ ತಡರಾತ್ರಿ 2 ಗಂಟೆಯವರೆಗೆ ವಿಚಾರಣೆ ನಡೆಸಿದಾಗ ಮಾಲಿಕರ ಮನೆಯ ಹಿಂಭಾಗದ ಕೊಟ್ಟಿಗೆಯ ಮಣ್ಣಿನ ಇಟ್ಟಿಗೆಗಳ ನಡುವೆ 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಅನ್ನು ಬಚ್ಚಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಅದನ್ನು ಪೋಲಿಸರು ವಶ ಪಡಿಸಿಕೊಂಡಿದ್ದಾರೆ.

ಆರೋಪಿ ರವಿ ತಡ ರಾತ್ರಿಯವರೆಗೂ ಕಳ್ಳತನ ಮಾಡಿರುವುದನ್ನು ಮುಚ್ಚಿಟ್ಟು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಪ್ರಯತ್ನಿಸಿದ್ದರೂ, ಮಧ್ಯ ರಾತ್ರಿ 2 ಗಂಟೆಯವರೆಗೂ ಛಲಬಿಡದೆ ವಿಚಾರಣೆ ನಡೆಸಿದ ಪಿಎಸ್‌ಐ ರವೀಶ್, ಕ್ರೈಂ ಎಸ್‌ಐ ಅಭಿಷೇಕ್ ಹಾಗೂ ಸಿಬ್ಬಂದಿ ಶಂಕರ್ ಹಾಗೂ ಇತರ ಸಿಬ್ಬಂದಿಗಳಿದ್ದ ತಂಡ ಕಳ್ಳತನ ನಡೆದ 10 ಗಂಟೆಯೊಳಗೆ ಆರೋಪಿಯನ್ನು ಕದ್ದ ಮಾಲಿನ ಸಮೇತ ಹೆಡೆ ಮುರಿ ಕಟ್ಟಿದ್ದಕ್ಕೆ ಜನಮೆಚ್ಚುಗೆಗೆ ಪಾತ್ರವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!