ಬಸ್‌ ನಿಲ್ದಾಣದಲ್ಲಿ ವೃದ್ಧನಿಗೆ ಮೂರ್ಚೆ: ನಿರ್ಲಕ್ಷಿಸಿದ್ದಕ್ಕೆ ಬಿಎಂಟಿಸಿ ಮೇಲೆ ಕೇಸ್

Published : Sep 07, 2026, 06:49 AM IST
BMTC

ಸಾರಾಂಶ

ಶಿವಾಜಿ ನಗರದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಮೂರ್ಚೆ ರೋಗದಿಂದ ಬಳಲಿದ ಹಿರಿಯ ನಾಗರಿಕರಿಗೆ ವೈದ್ಯಕೀಯ ನೆರವು ನೀಡದ ಘಟನೆ ಸಂಬಂಧ ಲೋಕಾಯುಕ್ತದಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

ಬೆಂಗಳೂರು : ಶಿವಾಜಿನಗರದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಮೂರ್ಚೆ ರೋಗದಿಂದ ಬಳಲಿದ ಹಿರಿಯ ನಾಗರಿಕರಿಗೆ ವೈದ್ಯಕೀಯ ನೆರವು ನೀಡದ ಘಟನೆ ಸಂಬಂಧ ಲೋಕಾಯುಕ್ತದಿಂದ ಸ್ವಯಂ ಪ್ರೇರಿತ ದೂರು ದಾಖಲಾಗಿದೆ.

ಶಿವಾಜಿನಗರಕ್ಕೆ ಟಿಕೆಟ್‌ ಪಡೆದಿದ್ದರು

ಕಳೆದ ಭಾನುವಾರ ಹಿರಿಯ ನಾಗರಿಕರೊಬ್ಬರು ರಾಮಮೂರ್ತಿನಗರದಲ್ಲಿ ಬಿಎಂಟಿಸಿ ಬಸ್‌ ಹತ್ತಿ ಶಿವಾಜಿನಗರಕ್ಕೆ ಟಿಕೆಟ್‌ ಪಡೆದಿದ್ದರು. ಬಸ್‌ ಶಿವಾಜಿನಗರದ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದು, ಎಲ್ಲ ಪ್ರಯಾಣಿಕರು ಬಸ್‌ ಇಳಿದಿದ್ದರು. ಆದರೆ, ಈ ಹಿರಿಯ ನಾಗರಿಕ ಮೂರ್ಚೆ ರೋಗದಿಂದ ಅಸ್ವಸ್ಥರಾಗಿದ್ದರು. ಈ ವೇಳೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಬಿಎಂಟಿಸಿ ಸಿಬ್ಬಂದಿ ಪರದಾಡಿದರು.

ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ.

ಈ ಘಟನೆ ಸಂಬಂಧ ಶಿವಾಜಿನಗರ ಬಿಎಂಟಿಸಿ ಬಸ್‌ ನಿಲ್ದಾಣದ ಸಹಾಯಕ ಸಂಚಾರ ವ್ಯವಸ್ಥಾಪಕಿ ಚಂದ್ರಕಲಾ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ. ಬಿಎಂಟಿಸಿಯ ಎಲ್ಲ ಬಸ್‌ ನಿಲ್ದಾಣಗಳಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಹೋರಾಟ ಮಾಡುವೆ, ಆದರೆ, ಚುನಾವಣೆಯಲ್ಲಿ ಮಾತ್ರ ನಿಲ್ಲುವುದಿಲ್ಲ : ಸಿದ್ದರಾಮಯ್ಯ
‘ಹಣ ಬೇಡ, ಕಿಡ್ನಿ ಕೊಡ್ತೀನಿ, ಅನುಮತಿ ಕೊಡಿ!’ ಅಪರೂಪದ ಮನವಿ ಹೈಕೋರ್ಟ್‌ ಗೆ