ವಾರಕ್ಕೊಮ್ಮೆ ನೀರಿನ ಮೂಲ ಸ್ವಚ್ಛಗೊಳಿಸಿ

KannadaprabhaNewsNetwork |  
Published : Feb 05, 2026, 02:45 AM IST
ಪೋಟೊ4ಕೆಎಸಟಿ1: ಕುಷ್ಟಗಿ ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಾತ್ಯಕ್ಷಿಕ ತರಬೇತಿಯ ಕಾರ್ಯಾಗಾರ ನಡೆಯಿತು. | Kannada Prabha

ಸಾರಾಂಶ

ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ನೀರಿನ ಮೂಲಗಳ ಸುತ್ತ ಚರಂಡಿ ಕಪ್ಪು ನೀರು ಸಂಗ್ರಹ ಆಗುವ ತಿಪ್ಪೆ ಗುಂಡಿಗಳು ಮತ್ತು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ನಂತಹ ವಸ್ತುಗಳು ಸಂಗ್ರಹಗೊಂಡು ನೀರಿನ ಮೂಲಗಳಿಂದ ಅಂತರ್ಜಲ ಸೇರಿಕೊಂಡು ಕಲುಷಿತ ನೀರು ಸಿಗುವಂತಾಗಿದ್ದು,

ಕುಷ್ಟಗಿ: ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡುವ ವಾಟರ್ ಮ್ಯಾನ್ ಪ್ರತಿ ವಾರಕ್ಕೊಮ್ಮೆ ನೀರಿನ ಮೂಲ ಸ್ವಚ್ಛಗೊಳಿಸಬೇಕು, ತಿಂಗಳಿಗೊಮ್ಮೆ ನೀರಿನ ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದು ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪನವರು ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ನೀರು ಪರೀಕ್ಷಾ ಪ್ರಯೋಗಾಲಯದಿಂದ ನಡೆದ ಎಫ್.ಟಿಕೆ ಕಿಟ್ (ಫಿಲ್ಡ್ ಟೆಸ್ಟ ಕಿಟ್ ) ರಾಸಾಯನಿಕ ಪರಿಕರಗಳ ಮೂಲಕ ಗ್ರಾಪಂ ನೀರುಗಂಟಿ, ಅಂಗನವಾಡಿ ಆಶಾ ಕಾರ್ಯಕರ್ತರಿಗೆ ನೀರಿನ ಗುಣಮಟ್ಟ ಪರೀಕ್ಷೆಯ ಪ್ರಾತ್ಯಕ್ಷಿಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿರುವ ನೀರಿನ ಮೂಲಗಳ ಸುತ್ತ ಚರಂಡಿ ಕಪ್ಪು ನೀರು ಸಂಗ್ರಹ ಆಗುವ ತಿಪ್ಪೆ ಗುಂಡಿಗಳು ಮತ್ತು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ನಂತಹ ವಸ್ತುಗಳು ಸಂಗ್ರಹಗೊಂಡು ನೀರಿನ ಮೂಲಗಳಿಂದ ಅಂತರ್ಜಲ ಸೇರಿಕೊಂಡು ಕಲುಷಿತ ನೀರು ಸಿಗುವಂತಾಗಿದ್ದು, ವಾಟರ್ ಮ್ಯಾನ್‌ ನೀರಿನ ಮೂಲಗಳ ಬಗ್ಗೆ ಗಮನ ವಹಿಸಬೇಕು ಎಂದರು.

ಪ್ರಾಥಮಿಕ ಹಂತದಲ್ಲಿ ಇರುವ ನೀರಿನ ವಾಟರ್ ಮ್ಯಾನ್ ಗಳು ತಮ್ಮ ಗ್ರಾಮದ ನೀರಿನ ಮೂಲಗಳ ಸುತ್ತಲು ಚರಂಡಿ ನೀರಿನಂತ ಕಲುಷಿತ ನೀರು ನಿಲ್ಲದಂತೆ ನೋಡಿಕೊಂಡು ಪ್ರತಿ ವಾರಕ್ಕೊಮ್ಮೆ ನೀರಿನ ತೊಟ್ಟಿ ಸ್ವಚ್ಛಗೊಳಿಸುವುದರ ಮೂಲಕ ತಿಂಗಳಿಗೊಮ್ಮೆ ರಸಾಯನಿಕ ಪರಿಕರಗಳ ಬಳಕೆಯಿಂದ ನೀರಿನ ಗುಣಮಟ್ಟ ಪರೀಕ್ಷೆ ಮಾಡಿ, ಉತ್ತಮ ನೀರು ಎಂಬುದನ್ನ ಖಚಿತಪಡಿಕೊಂಡು ಜನರಿಗೆ ನೀರು ಕೊಡುವ ಕಾರ್ಯ ಮಾಡಬೇಕಿದ್ದು, ಅತ್ಯಂತ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ನೀರು ಪರಿಕ್ಷಾ ಪ್ರಯೋಗಾಲಯದ ರಸಾಯನಿಕ ತಜ್ಞ ಮಾರುತೇಶ, ಬಸವರಾಜ ಹೂಗಾರ ಹಾಗೂ ಆದಪ್ಪ ಕಬ್ಬಿಣದ ಪಾಲ್ಗೊಂಡು ಪ್ರಾತ್ಯಕ್ಷಿಕೆಯಾಗಿ ಎಫ್ ಟಿಕೆ ಕಿಟ್ ಗಳ ಮೂಲಕ ನೀರಿನ ಗುಣಮಟ್ಟ ಪರಿಶೀಲನೆ ಮಾಡಿ ನೀರಿನಲ್ಲಿರುವ ಫ್ಲೋರೈಡ್, ಕ್ಲೋರೈಡ್, ನೈಟ್ರೆಟ್, ಐರಾನ್ ಮತ್ತು ನೀರಿನಲ್ಲಿ ಗಡಸುತನದ ಪ್ರಮಾಣ ಎಷ್ಟು ಇದೆ ಎಂಬುದನ್ನು ಪ್ರಾಥಮಿಕ ಹಂತದಲ್ಲಿ ಖಚಿತಪಡಿಸಿಕೊಳ್ಳಲು ರಸಾಯನಿಕ ಪರಿಕರಗಳ ಕಿಟ್ ಅತ್ಯಂತ ಮಹತ್ವದ್ದಾಗಿದೆ. ಎಲ್ಲ ವಾಟರ್ ಮ್ಯಾನಗಳು ಕಿಟ್ ಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ತಾಪಂ ವಿಷಯ ನಿರ್ವಾಹಕ ಅಶ್ವತ್ ಕುಮಾರ ಮಾತನಾಡಿ, ಪ್ರತಿಯೊಂದು ಗ್ರಾಪಂ ನೀರುಗಂಟಿಗಳು ಅತ್ಯಂತ ಕಾಳಜಿ ವಹಿಸಿ ನೈರ್ಮಲ್ಯತೆ ಕಾಪಾಡುವಲ್ಲಿ ಮುತುವರ್ಜಿವಹಿಸಿ ಕಾರ್ಯ ನಿರ್ವಹಿಸಬೇಕೆಂದು ಸೂಚಿಸಿದರು.

ಈ ಪ್ರಾತ್ಯತಕ್ಷಿಕೆಯ ಕಾರ್ಯಾಗಾರದಲ್ಲಿ ಗ್ರಾಪಂ ನೀರು ಗಂಟಿಗಳು ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಕೆಮಿಕಲ್‌ ಫ್ಯಾಕ್ಟರಿಗಳ ಮೇಲೀಗ ಪೊಲೀಸರಿಂದ ಅಲರ್ಟ್‌
2000 ಬೋಧಕ ಹುದ್ದೆ ಭರ್ತಿಗೆ ಅಸ್ತು : ನೇರ ನೇಮಮಾತಿ ಮೂಲಕ ಭರ್ತಿ