ಪರವಾನಗಿಯಿಲ್ಲದೇ ಪಟಾಕಿ ಸಂಗ್ರಹ: ಗೋದಾಮು ಸೀಜ್

KannadaprabhaNewsNetwork |  
Published : Oct 14, 2023, 01:01 AM ISTUpdated : Oct 14, 2023, 01:02 AM IST
ಫೋಟೊ ಶೀರ್ಷಿಕೆ: 13ಆರ್‌ಎನ್‌ಆರ್7ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ಅಧಿಕಾರಿಗಳು ಪಟಾಕಿ ಗೋದಾಮ್ ಸೀಜ್ ಮಾಡಿರುವುದು. | Kannada Prabha

ಸಾರಾಂಶ

ಪರವಾನಗಿಯಿಲ್ಲದೇ ಪಟಾಕಿ ಮಾರಾಟ, ಸಂಗ್ರಹದ ಗೋದಾಮಿನಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಗೋದಾಮು ಸೀಜ್ ಮಾಡುವ ಜೊತೆಗೆ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿದ ಘಟನೆ ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಪರವಾನಗಿಯಿಲ್ಲದೇ ಪಟಾಕಿ ಮಾರಾಟ, ಸಂಗ್ರಹದ ಗೋದಾಮಿನಿ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಗೋದಾಮು ಸೀಜ್ ಮಾಡುವ ಜೊತೆಗೆ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿದ ಘಟನೆ ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿ ನಡೆದಿದೆ.

ಇತ್ತೀಚೆಗೆ ತಾಪಂ ಇಒ ಸುಮಲತಾ ಎಸ್.ಪಿ. ನೇತೃತ್ವದ ಅಧಿಕಾರಿಗಳ ತಂಡ ಗ್ರಾಮದಲ್ಲಿ ಪಟಾಕಿ ಮಾರಾಟ ಮಾಡುವವರ ಅಂಗಡಿಗಳನ್ನು ಪರಿಶೀಲನೆ ನಡೆಸಿದ ವೇಳೆ ಅಂಗಡಿಯೊಂದರಲ್ಲಿ ಮಹಮ್ಮದ್ ಸಿಕ್ಕಲಗಾರ, ಅಜಗರಸಾಬ ಸಿಕ್ಕಲಗಾರ ಎಂಬವರು ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ 50 ಕೆಜಿಯಷ್ಟು ಪಟಾಕಿ ಮಾರಾಟ ಮಾಡಿರುವುದು ಕಂಡುಬಂದಿತು. ಕೂಡಲೇ ಎಚ್ಚೆತ್ತುಕೊಂಡ ತಂಡ ಗೋದಾಮಿಗೆ ತೆರಳಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡ 465 ಕೆಜಿಯಷ್ಟು ಪಟಾಕಿಯನ್ನು ಸೀಜ್ ಮಾಡಿದೆ. ಈ ಕುರಿತು ಗ್ರಾಮ ಪಂಚಾಯಿತಿ ಪಿಡಿಒ ಪ್ರಕಾಶ ಎಂ.ಕೆ. ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ