ಸುಪ್ರೀಂನ ಅಂಗಳದಲ್ಲಿ ಚೆಂಡು । ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ। ನ್ಯಾಯಾಲಯ ಫೈನಲ್ ಮಾಡಿಲ್ಲ
ಸೂಕ್ಷ್ಮ ನಡಿಗೆ ಡೀಮ್ಡ್ ಫಾರೆಸ್ಟ್ ಮೊದಲ ಪಟ್ಟಿಯಲ್ಲಿ ಗುರುತು ಮಾಡಿರುವ ಪ್ರದೇಶವನ್ನು ಪರಿಷ್ಕರಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಯಾವ ಯಾವ ಪ್ರದೇಶವನ್ನು ಕೈಬಿಡಲಾಗಿದೆ ಎಂಬುದನ್ನು ಸಹ ಪಟ್ಟಿ ಮಾಡಿ ಜಿಲ್ಲಾಡಳಿತಕ್ಕೆ ಕಳುಹಿಸಿ ಅಲ್ಲಿಂದ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಅದನ್ನು ಪ್ರಚುರ ಪಡಿಸುವ ಕೆಲಸಕ್ಕೆ ಮುಂದಾಗಿಲ್ಲ. ಹಾಗೆನಾದರೂ ಮುಂದೆ ಹೆಜ್ಜೆ ಇಟ್ಟರೆ ತಲೆ ದಂಡವಾಗಲಿದೆ. ಕಾರಣ, ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಯಾವುದೇ ಅಂತಿಮ ತೀರ್ಮಾನ ಆಗಿಲ್ಲ, ಪರಿಸ್ಥಿತಿ ಹೀಗಿರುವಾಗಲೇ, ತಾವು ಸಲ್ಲಿಸಿರುವ ಪ್ರಮಾಣ ಪತ್ರದ ಆಧಾರದ ಪಟ್ಟಿಯನ್ನು ಪ್ರಕಟಿಸಿದರೆ ತಪ್ಪಾಗುತ್ತದೆ. ಹಾಗಾಗಿ ಆಡಳಿತ ಯಂತ್ರ ಜಾಣ ನಡಿಗೆಯಲ್ಲಿ ಸಾಗುತ್ತಿದೆ. ಅಂದರೆ, ಜನರು ಇನ್ನೂ ನಿರಾಳವಾಗಿಲ್ಲ.
--- ಬಾಕ್ಸ್ --ಡೀಮ್ಡ್ ಫಾರೆಸ್ಟ್ ವಿವಾದ
1995, ಡೀಮ್ಡ್ ಫಾರೆಸ್ಟ್ ವಿವಾದ ಹುಟ್ಟಿಕೊಂಡ ವರ್ಷ. ಅಂದರೆ, ಅದೇ ವರ್ಷದಲ್ಲಿ ಟಿ.ಎನ್. ಗೋಧ ವರ್ಮನ್ ಅವರು ಅರಣ್ಯ ಪ್ರದೇಶದ ವ್ಯಾಖ್ಯಾನ ಹಾಗೂ ವಿಸ್ತೀರ್ಣ ಕುರಿತು ಸುಪ್ರೀಂಕೋರ್ಟ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಾವೆ ಹೂಡಿದರು. ಈ ಸಂಬಂಧ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಂದ ಅರಣ್ಯ ಒಟ್ಟು ಪ್ರದೇಶದ ಮಾಹಿತಿಯನ್ನು ತರಿಸಿ ಕೊಂಡಿತು. ವ್ಯಾಖ್ಯಾನದ ಪ್ರಶ್ನೆ ಬಂದಾಗ ಇಂತಿಷ್ಟು ಪ್ರದೇಶದಲ್ಲಿ ಮರಗಳಿದ್ದರೆ, ಅವುಗಳನ್ನು ಡೀಮ್ಡ್ ಎಂಬುದಾಗಿ ಪರಿಗಣಿಸಿ ವರದಿ ನೀಡುವಂತೆ ಸರ್ಕಾರ ಹೇಳಿದ ಮೇರೆಗೆ ಅರಣ್ಯ ಇಲಾಖೆಗೆ ತಾತ್ಕಾಲಿಕ ವಾಗಿ ಗಿಡಗಳನ್ನು ಬೆಳೆಸಲು ಕೊಟ್ಟಿದ್ದ ನೆಡುತೋಪು, ಗೋಮಾಳ ಪ್ರದೇಶವನ್ನು ಸೇರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 1.44 ಲಕ್ಷ ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಗುರುತು ಮಾಡಲಾಯಿತು. -----