ಗಂಗಾವಳಿ ಮಾರ್ಗದಲ್ಲಿ ಅಂಗೋಲಾ-ಗೋಕರ್ಣ ಸಮರ್ಪಕವಾಗಿ ಬಸ್‌ ಬಿಡಲು ಆಗ್ರಹ

KannadaprabhaNewsNetwork |  
Published : Mar 30, 2026, 02:00 AM IST
ಬಸ್ ನಿಲ್ದಾಣದಲ್ಲಿ ನಿಂತ ಅಂಕೋಲಾಕ್ಕೆ ತೆರಳುವ ಬಸ್  | Kannada Prabha

ಸಾರಾಂಶ

ಪ್ರವಾಸಿ ತಾಣದಿಂದ ಗಂಗಾವಳಿ -ಮಂಜುಗುಣಿ ಮಾರ್ಗವಾಗಿ ಅಂಕೋಲಾಕ್ಕೆ ತೆರಳುವ ಬಸ್ ಸಂಚಾರ ವ್ಯವಸ್ಥೆಯಲ್ಲಿ ಜನರಿಗೆ ಅನೂಕೂಲವಾಗುವ ರೀತಿಯಲ್ಲಿರದೆ ತೊಂದರೆಯಾಗುತ್ತಿದ್ದು, ಇದನ್ನ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕರ್ಣ

ಪ್ರವಾಸಿ ತಾಣದಿಂದ ಗಂಗಾವಳಿ -ಮಂಜುಗುಣಿ ಮಾರ್ಗವಾಗಿ ಅಂಕೋಲಾಕ್ಕೆ ತೆರಳುವ ಬಸ್ ಸಂಚಾರ ವ್ಯವಸ್ಥೆಯಲ್ಲಿ ಜನರಿಗೆ ಅನೂಕೂಲವಾಗುವ ರೀತಿಯಲ್ಲಿರದೆ ತೊಂದರೆಯಾಗುತ್ತಿದ್ದು, ಇದನ್ನ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯ ಉದ್ಘಾಟನೆಯಾದ ಹಲವು ದಿನಗಳ ಬಳಿಕ ಬಸ್ ಸಂಚಾರ ಆರಂಭಿಸಲಾಗಿತ್ತು. ಆದರೆ ಕೆಲವು ವೇಗದೂತ ಬಸ್ ಸಂಚಾರ ಈಗಾಗಲೇ ಬಂದ್ ಆಗಿದ್ದು, ಅಂಕೋಲಾ -ಗೋಕರ್ಣ ಬಸ್ ಕೇವಲ ದಿನದ ನಾಲ್ಕು ಬಾರಿ ಸಂಚರಿಸುತ್ತಿದೆ.ತಾಳಮೇಳ ಇಲ್ಲದ ಸೇವೆ:

ಮುಂಜಾನೆ ಕಾರವಾರ, ಅಂಕೋಲಾಕ್ಕೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಅನುಕೂಲವಾಗುವ ಸಮಯವಾದ ೮ ಗಂಟೆಗೆ ಈ ಮಾರ್ಗದಲ್ಲಿ ಬಸ್ ಅವಶ್ಯಕತೆ ಇತ್ತು. ಆದರೆ ಇದರ ಬದಲಾಗಿ ೯.೪೫ಕ್ಕೆ ಇಡಲಾಗಿದೆ. ಮಧ್ಯಾಹ್ನ ಒಂದು ಬಸ್ ಮಾತ್ರ ಸಂಚರಿಸುತ್ತಿದ್ದು, ಸಂಜೆ ವೇಳೆ ಮಾರ್ಗದಲ್ಲಿ ಬಸ್ ಸಂಚರಿಸುತ್ತಿಲ್ಲ. ಶಿರೂರು ಮೂಲಕ ಮಾದನಗೇರಿಯಿಂದ ಸುತ್ತುವರಿದು ಬರುವ ಬಸ್ ಕಾಯ್ದು ಪ್ರಯಾಣಿಕರು ಪ್ರಯಾಸದ ಪ್ರಯಾಣ ಮಾಡುವುದು ಮುಂದುವರಿದಿದ್ದು, ನೂತನ ಸೇತುವೆಯಿಂದ ಹತ್ತಿರದ ಮಾರ್ಗವಾದರೂ ಜನ ಸಾಮಾನ್ಯರ ಬಸ್ ಸಂಚಾರದ ವ್ಯವಸ್ಥೆ ಸಮರ್ಪಕವಾಗದೆ ತೊಂದರೆ ಪಡುವಂತಾಗಿದೆ. ಬೇಕಿದೆ ಸಮನ್ವಯತೆ:

ಹೊಸ ಮಾರ್ಗದಲ್ಲಿ ವಾಹನಗಳ ಸಂಚಾರ ಆರಂಭಿಸಿದ ಬಳಿಕ ರಸ್ತೆಯ ಅಂಚಿನ ಗಿಡಗಂಟೆ ಸ್ವಚ್ಛಗೊಳಿಸುವುದು, ಇಕ್ಕಟ್ಟಾದ ಜಾಗದಲ್ಲಿನ ಸಮಸ್ಯೆ, ಜನರಿಗೆ ಅನುಕೂಲವಾಗುವ ಸಮಯದಲ್ಲಿ ಬಸ್ ಬಿಡುವುದು ಸೇರಿ ವಿವಿಧ ವಿಷಯವನ್ನ ರಸ್ತೆ ಸಾರಿಗೆ ಸಂಸ್ಥೆ, ಲೋಕೋಪಯೋಗಿ ಇಲಾಖೆ, ಪೊಲೀಸ್ ಮತ್ತಿತರ ಇಲಾಖೆಯವರು ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಅಚ್ಚುಕಟ್ಟಿನ ವ್ಯವಸ್ಥೆ ಮಾಡಬಹುದಿತ್ತು ಎಂಬುದು ಜನರ ಅಭಿಪ್ರಾಯವಾಗಿದೆ. ಆದರೆ ಈ ಸಮನ್ವಯತೆಯ ಸಭೆಯ ನಡೆಯದ ಕಾರಣ ಎಲ್ಲವು ಅಸ್ತವ್ಯಸ್ತವಾಗುತ್ತಿದ್ದು, ಈ ಮಾರ್ಗದ ಹಲವು ಕಡೆ ಮರ, ಗಿಡಗಳು ರಸ್ತೆಗೆ ಬಂದಿದ್ದು, ಸಂಚಾರಕ್ಕೆ ತೊಡಕಾಗುತ್ತಿದೆ. ಅಪಾಯಕಾರಿ ತಿರುವಿನಲ್ಲಿ ಸೂಚನಾ ಫಲಕ ಮತ್ತಿತರ ಮುನ್ನೆಚ್ಚರಿಕೆ ಫಲಕ ಸಹ ಅಳವಡಿಸದೆ ಬಿಡಲಾಗಿದೆ. ಈ ಮಾರ್ಗದಲ್ಲಿ ಯಾವ ಸಮಯಕ್ಕೆ ಬಸ್ ಅವಶ್ಯಕತೆ ಇದೆ ಎಂಬುದನ್ನ ಈ ಭಾಗದ ಜನರಿಂದ ಅಹವಾಲು ಪಡೆಯುವ ಕಾರ್ಯ ಆಗಿಲ್ಲ.ವಿಜಯಪುರ ಬಸ್ ಸಂಚಾರ ಸ್ಥಗಿತ:

ಕುಮಟಾದಿಂದ ಸಂಜೆ ೬ ಗಂಟೆಗೆ ಹೊರಟು ೬.೪೫ಕ್ಕೆ ಇಲ್ಲಿಗೆ ಬಂದ ಏಳು ಗಂಟೆಗೆ ಗಂಗಾವಳಿ ಮಾರ್ಗವಾಗಿ ಅಂಕೋಲಾ- ವಿಜಯಪುರ ತೆರಳುವ ಕುಮಟಾ-ಗೋಕರ್ಣ -ವಿಜಯಪುರ ಬಸ್‌ನ್ನ ಕಳೆದ ಮೂರು ದಿನಗಳಿಂದ ಬಂದ್ ಮಾಡಲಾಗಿದೆ. ಇದರಿಂದ ಅಂಕೋಲಾಕ್ಕೆ ತೆಳಲು ಸಂಜೆ ವೇಳೆ ಬಸ್ ಇಲ್ಲವಾಗಿದ್ದು, ಪ್ರವಾಸಿಗೆ ತೀವ್ರ ತೊಂದರೆಯಾಗುತ್ತಿದೆ. ಅಂಕೋಲಾ ಘಟಕದಿಂದಲಾದರೂ ಸಂಜೆ ವೇಳೆ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಆಗ್ರಹ
ಸಂಶೋಧಕರಿಗೆ ಆಳವಾದ ಅಧ್ಯಯನ ಅಗತ್ಯ