ಧಾರವಾಡ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಇಂದು

KannadaprabhaNewsNetwork |  
Published : Sep 05, 2026, 02:00 AM IST
ಧಾರವಾಡ-ಬೆಳಗಾವಿ ಮಧ್ಯೆ ಕೈಗಾರಿಕಾ ಕಾರಿಡಾರ್ ಸ್ಥಾಪನೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಶಾಲಾ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನವನ್ನು ಸೆ. 5ರಂದು ಮಧ್ಯಾಹ್ನ 3ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೊಜಿಸಿದೆ.

ಧಾರವಾಡ:

ಶಾಲಾ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಸನ್ಮಾನವನ್ನು ಸೆ. 5ರಂದು ಮಧ್ಯಾಹ್ನ 3ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೊಜಿಸಿದೆ.

2026-27ನೇ ಸಾಲಿನ ಧಾರವಾಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕಿರಿಯ ಪ್ರಾಥಮಿಕ ವಿಭಾಗ:

ಧಾರವಾಡ ಶಹರದ ಚಪ್ಪರ ಬಂದ ಕಾಲನಿಯ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಝಡ್‌.ಐ. ಮಲೀಕನವರ, ಧಾರವಾಡ ಗ್ರಾಮೀಣದ ವಿನಯನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಾವಿತ್ರಿ ಪಟಗಾರ, ಹುಬ್ಬಳ್ಳಿ ನಗರದ ಈಶ್ವರ ನಗರದ ಉರ್ದು ಪ್ರಾಥಮಿಕ ಶಾಲೆಯ ಶಬೀನಆರಾ ಮುನಸಿ, ನವನಗರ ಶಿವಾನಂದ ನಗರದ ಚಂದ್ರಪ್ಪ ಚೆನ್ನಗೌಡ್ರ, ಕಲಘಟಗಿಯ ನೆಲ್ಲಿಹರವಿ ತಾಂಡದ ಹೇಮರಡ್ಡಿ ಕರಿರಡ್ಡಿ, ಕುಂದಗೋಳದ ಮತ್ತಿಗಟ್ಟಿ ಉರ್ದು ಪ್ರಾಥಮಿಕ ಶಾಲೆಯ ಮಕ್ತುಮಹುಸೇನ ಸಾಬನವರ, ಅಣ್ಣಿಗೇರಿ ಮಾರುತಿ ಸುಣಗಾರ.

ಹಿರಿಯ ಪ್ರಾಥಮಿಕ ವಿಭಾಗ:

ಧಾರವಾಡದ ಗುಲಗಂಜಿಕೊಪ್ಪದ ಸರ್ಕಾರಿ ಉರ್ದು ಮಾದರಿ ನಂ. 4ರ ಮಂಜುಳ ಎಚ್.ಎಫ್‌., ಹಾರೋಬೆಳವಡಿಯ ಸಂಭಾಜಿ ಜಾಧವ, ಹುಬ್ಬಳ್ಳಿ ತಬೀಬಲ್ಯಾಂಡ್‌, ಸರ್ಕಾರಿ ಮಾದರಿ ಉರ್ದು ಹೆಣ್ಣ ಮಕ್ಕಳ ಶಾಲೆ ನಂ.1ರ ಹೇಮಕ್ಕ ಮೆಣಸಗಿ, ಉಣಕಲ್ಲನ್‌ ಕರ್ನಾಟಕ ಪಬ್ಲಿಕ್‌ ಶಾಲೆಯ ಈಶ್ವರಗೌಡ ಬೊಮ್ಮನಗೌಡ್ರ, ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿಯ ದೈಹಿಕ ಶಿಕ್ಷಣ ಶಿಕ್ಷಕ ಸಂಜೀವ ದಾಸರ, ಕುಂದಗೋಳ ತಾಲೂಕಿನ ಯಲಿವಾಳದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಗೀತಾ ಖಂದಾರೆ, ನವಲಗುಂದ ತಾಲೂಕಿನ ಗುಮ್ಮಗೋಳದ ಎಂ.ಡಿ. ಚುಳಕಿ.

ಪ್ರೌಢ ವಿಭಾಗ:

ಧಾರವಾಡದ ಗುಲಗಂಜಿಕೊಪ್ಪದ ಉರ್ದು ಪ್ರೌಢಶಾಲೆಯ ಕೆ.ಆರ್. ರಕ್ಕಸಗಿ, ಹಳೇ ತೇಗೂರಿನ ಟಿಜಿಟಿ ಶಾಲೆಯ ಶ್ರೀಪಾದ ಗೊಂಬಿ, ಹುಬ್ಬಳ್ಳಿಯ ಪೆಂಡಾರಗಲ್ಲಿ ಶಾಲೆಯ ಶಿವಯೋಗಿ ಕೋಷ್ಟಿ, ಹೆಬಸೂರು ಶಾಲೆಯ ಮುಖ್ಯಶಿಕ್ಷಕ ಪಿ.ಬಿ. ಶಿವಪೂರ, ಕಲಘಟಗಿ ತಾಕೂಕಿನ ಗುರುವಿನಕೊಪ್ಪ ಶಾಲೆಯ ರವಿ ಕುಲಕರ್ಣಿ, ಕುಂದಗೋಳದ ಎಸ್.ಎಸ್. ಬಾಲಿಕಾ ಪ್ರೌಢಶಾಲೆಯ ಮಂಜುಳಾ ದಂಡಿನ, ನವಲಗುಂದ ತಾಲೂಕಿನ ಗುಡಿಸಾಗರ ನಾಗನೂರು ಶಾಲೆಯ ಎಲ್.ವೈ. ರಾಯಪ್ಪನವರ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಲ್ಲಿ ಜಾನಪದ ಒಲವು ಹೆಚ್ಚಳ ಆಶಾದಾಯಕ
ಶ್ರದ್ಧಾ-ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ