ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಡಾ.ಪರ್ವೀಜ್‌ ಷರೀಪ್‌ಗೆ ಪ್ರಶಸ್ತಿ

KannadaprabhaNewsNetwork |  
Published : Sep 19, 2025, 01:02 AM IST
3 ನಿಮಿಷಗಳ ಥೀಸಿಸ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ನಿಟ್ಟೆ ಸಹಾಯಕ ಪ್ರಾಧ್ಯಾಪಕರಿಗೆ ಎರಡನೇ ಬ3 ನಿಮಿಷಗಳ ಥೀಸಿಸ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ನಿಟ್ಟೆ ಸಹಾಯಕ ಪ್ರಾಧ್ಯಾಪಕರಿಗೆ ಎರಡನೇ ಬಹುಮಾನಹುಮಾನ | Kannada Prabha

ಸಾರಾಂಶ

ಡಾ. ಪರ್ವೀಜ್ ಷರೀಫ್ ಬಿ.ಜಿ. ಅಂತಾರಾಷ್ಟ್ರೀಯ ಮೈಕ್ರೋವೇವ್ ವಿಶ್ವ ನಾಯಕರ ಸಮ್ಮೇಳನ (ಐಎಂಡಬ್ಲ್ಯುಎಲ್‌ಸಿ) 2025ರಲ್ಲಿ ನಡೆದ ಪ್ರತಿಷ್ಠಿತ ಮೂರು ನಿಮಿಷಗಳ ಥೀಸಿಸ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ (ಎಡ್ವಾನ್ಸ್ಡ್ ಕಮ್ಯೂನಿಕೇಶನ್ ಟೆಕ್ನಾಲಜಿ) ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪರ್ವೀಜ್ ಷರೀಫ್ ಬಿ.ಜಿ. ಅಂತಾರಾಷ್ಟ್ರೀಯ ಮೈಕ್ರೋವೇವ್ ವಿಶ್ವ ನಾಯಕರ ಸಮ್ಮೇಳನ (ಐಎಂಡಬ್ಲ್ಯುಎಲ್‌ಸಿ) 2025ರಲ್ಲಿ ನಡೆದ ಪ್ರತಿಷ್ಠಿತ ಮೂರು ನಿಮಿಷಗಳ ಥೀಸಿಸ್ ಪ್ರೆಸೆಂಟೇಶನ್ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ಗಳಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಮೂರು ನಿಮಿಷಗಳ ಅವಧಿಯಲ್ಲಿ ತಮ್ಮ ಸಂಶೋಧನಾ ವಿಚಾರಗಳನ್ನು ಸಂಕ್ಷಿಪ್ತ ಮತ್ತು ಆಕರ್ಷಕವಾಗಿ ಮಂಡಿಸಲು ಅವಕಾಶ ಕಲ್ಪಿಸುವ ಈ ಸ್ಪರ್ಧೆ, ಕಠಿಣ ಮಾನದಂಡಗಳಿಗೆ ಹೆಸರುವಾಸಿಯಾಗಿದೆ. ಡಾ. ಷರೀಫ್ ಅವರ ಪ್ರಸ್ತುತಿಯನ್ನು ಅತ್ಯುತ್ತಮ ಕೌಶಲ್ಯ, ಚಿಂತನೆಯ ಸ್ಪಷ್ಟತೆ ಮತ್ತು ಸಂಶೋಧನಾ ಕಲ್ಪನೆಯನ್ನು ಪರಿಣಾಮಕಾರಿಯಾಗಿ ಸಂವಹನ ಮಾಡಿದ ಸಾಮರ್ಥ್ಯಕ್ಕಾಗಿ ವಿಶೇಷವಾಗಿ ಗುರುತಿಸಲಾಯಿತು.ಐಇಇಇ, ಎಂಟಿಟಿ-ಎಸ್, ಎಪಿಎಸ್ ಸೊಸೈಟಿಗಳು, ಐಇಇಇ ಕೇರಳ, ಐಇಇಇ ಬೆಂಗಳೂರು ವಿಭಾಗ ಮತ್ತು ಎಇಎಸ್ಎಸ್ ಬೆಂಗಳೂರು ಚಾಪ್ಟರ್‌ನಡಿ ಆಯೋಜಿಸಲಾದ ಈ ಸಮ್ಮೇಳನವು ಮೈಕ್ರೋವೇವ್ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಉದಯೋನ್ಮುಖ ಸಂಶೋಧಕರು ಹಾಗೂ ವೃತ್ತಿಪರರಿಗೆ ಪ್ರಮುಖ ವೇದಿಕೆಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?