ಇಂಡಿ: ಸಿದ್ಧಗಂಗಾ ಶ್ರೀಗಳ ಹೆಸರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾದದ್ದು ಎಂದು ಕೂಡಲ ಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ:
ಸಿದ್ಧಗಂಗಾ ಶ್ರೀಗಳ ಹೆಸರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾದದ್ದು ಎಂದು ಕೂಡಲ ಸಂಗಮ ಪಂಚಮಸಾಲಿ ಲಿಂಗಾಯತ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇಂಡಿ ತಾಲೂಕಿನ ಸಾತಲಗಾಂವ ಪಿಐ ಗ್ರಾಮದ ಡಾ. ಶಿವಕುಮಾರ ಸ್ವಾಮೀಜಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 19ನೇ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯವಹಿಸಿ ಅವರು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ರಮೇಶ ಬಿರಾದಾರ, ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಹೆಸರಿನಲ್ಲಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.ವಿ.ಎಚ್.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಡಾ.ರಾಜೇಶ ತುಪ್ಪದ. ಶ್ರೀಶೈಲ ಮಾಲಗಾರ,ಆನಂದ ಪಾರಶೆಟ್ಟಿ, ಶಿವಗೊಂಡಪ್ಪ ಬಿರಾದಾರ, ಸಂಗಮೇಶ ಹೊಸೂರು, ನೀಲಕಂಠಗೌಡ ಬಿರಾದಾರ, ಸಂಸ್ಥೆಯ ಅಧ್ಯಕ್ಷ ರಮೇಶ ಬಿರಾದಾರ, ಶಿಕ್ಷಕಿ ಮಯೂರಿ ಪಾತಾಳಿ ,ಮನೋಲ ಶಹಾ, ಆರತಿ ಶಾವರಿ, ಕವಿತಾ ವಾಘ್ಮೋರೆ, ಭೀಮಾಶಂಕರ ಕಲ್ಯಾಣಿ ಇದ್ದರು. ಡಾ.ರಾಜಶೇಖರ ಮಠಪತಿ, ಧಾನಯ್ಯ ಮಠಪತಿ, ಸಿದ್ರಾಮಯ್ಯ ಮಠ, ಶಿವಾನಂದ ಹಿರೇಮಠ, ಗೌಡಪ್ಪಗೌಡ ಪಾಟೀಲ, ಶಂಕರಗೌಡ ಬಿರಾದಾರ, ಸಿದ್ದಾರಾಮಗೌಡ ಬಿರಾದಾರ, ಶಿವಯೋಗೆಪ್ಪ ಖಣದಾಳ, ಶಿವಣ್ಣ ಗುಂಜ್ಜೆಟ್ಟಿ, ಮಾದೇವಪ್ಪ ಬಿರಾದಾರ, ಬಸಣ್ಣ ಪಾತಾಳಿ, ಮಲ್ಕಣ್ಣ ಮಸಳಿ, ಕಾಂತು ಲಿಂಗದಳ್ಳಿ, ಮಲ್ಲು ಸಗರಗೊಂಡ, ರೇವಣಸಿದ್ಧ ಬಿರಾದಾರ, ಶಿವಕುಮಾರ ಬಿರಾದಾರ, ನೀಲಕಂಠ ನಂದಗೊಂಡ, ರಮೇಶ ಕೆಂಗೇರಿ, ಮುಕುಂದ ಬೇಡರ, ವಿಠೋಬಾ ಬಂಗಲಿ, ರಾಜು ಕಾಮಗೊಂಡ, ಮಲ್ಲು ನಿಂಬರಗಿ, ಶ್ರೀಮಂತ ಮಸಳಿ, ಧರ್ಮರಾಯ ಖಣದಾಳ, ಮೈಬುಸಾಬ ಕಾರಜೋಳ, ಲಾಲು ಸೈಯದ್, ಶ್ರೀಶೈಲ ಸರೂರ, ರಮೇಶ್ ಭಜಂತ್ರಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.