ಕನ್ನಡಪ್ರಭ ವಾರ್ತೆ ಜಮಖಂಡಿ

ಜೇಷ್ಠ ಮಾಸದ ಶುಕ್ಷಪಕ್ಷದ ಹುಣ್ಣಿವೆಯ ದಿವಸ ಆಲದ ಮರಕ್ಕೆ ವಿಶೆಷ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ವಟಸಾವಿತ್ರಿ ಪೂಜೆ ಎಂದೇ ಕರೆಯಲ್ಪಡುವ ಈ ವೃತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಸೋಮುವಾರ ನಗರದ ಅರಳಿಕಟ್ಟಿ ಪ್ರದೇಶದ ಆಲದ ಮರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ತನ್ನ ಪತಿಯ ಪ್ರಾಣವನ್ನು ಯಮನೊಂದಿಗೆ ಹೋರಾಡಿ ಮರಳಿ ಪಡೆದ ಸತಿ ಸಾವಿತ್ರಿಯ ನೆನಪಿಗಾಗಿ ಈ ವೃತವನ್ನು ಆಚರಿಸಲಾಗುತ್ತದೆ. ವೃತದ ಆಚರಣೆಯಿಂದ ಪತಿಯ ಆಯಸ್ಸು ಹೆಚ್ಚುತ್ತದೆ ಎಂದು ನಂಬಲಾಗುತ್ತದೆ. ಹಲವು ಮಹಿಳೆಯರು ವಟ ವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಮರಕ್ಕೆ ದಾರ ಸುತ್ತಿ ಹರಕೆ ತೀರಿಸಿದರು.