ಕನ್ನಡಪ್ರಭ ವಾರ್ತೆ ಬೆಳಗಾವಿ
ಕೆಎಲ್ಇ ಸಂಸ್ಥೆ, ಅಖಿಲ ಭಾರತ ವೀರಶೈವ ಮಹಾಸಭೆ ಸಹಯೋಗದಲ್ಲಿ ಶನಿವಾರ ನಗರದ ಜೀರಗೆ ಭವನದಲ್ಲಿ ಜರುಗಿದ ವೀರಶೈವ ವಧು-ವರರ ಅನ್ವೇಷಣೆ ಕೇಂದ್ರದ 60ನೇ ವಧು-ವರರ, ಪಾಲಕರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ವೀರಶೈವ ಲಿಂಗಾಯತ ಸಮುದಾಯದ ವಧು-ವರರ ಕಲ್ಯಾಣ ಮಹೋತ್ಸವ ಸುಲಭವಾಗಿ, ಸಕಾಲದಲ್ಲಿ ಜರುಗಿ ದಾಂಪತ್ಯ ಜೀವನ ಸುಖಮಯವಾಗಲಿ ಎನ್ನುವ ಸದುದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.ಅಖಿಲ ಭಾರತ ವೀರ ಶೈವ ಮಹಾಸಭೆ ಅಧ್ಯಕ್ಷೆ ಶರಣೆ ರತ್ನ ಪ್ರಭಾ ಬೆಲ್ಲದ ಮಾತನಾಡಿ, ಮಹಾಸಭೆ ಜಿಲ್ಲಾ ಘಟಕ ಲಿಂಗಾಯತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಎಲ್ಲ ಸೌಕರ್ಯ ಕಲ್ಪಿಸುತ್ತಿದೆ. ಬಡ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರಿಗಾಗಿ ಬೆಳಗಾವಿಯ ಸುಭಾಸ ನಗರದಲ್ಲಿ ಉಚಿತ ವಸತಿ ನಿಲಯ ಪ್ರಾರಂಭಿಸಲಾಗುತ್ತಿದೆ. ಸಮಾಜ ಬಂಧುಗಳು ಈ ಕೈಂಕರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೇಂದ್ರದ ನಿರ್ದೇಶಕ ಪ್ರಕಾಶ ಬಾಳೇ ಕುಂದ್ರಿ ವೇದಿಕೆಯ ಮೇಲಿದ್ದರು. ಗೌರವ ಕಾರ್ಯದರ್ಶಿ ಡಾ ಗುರುದೇವಿ ಹುಲೆಪ್ಪ ನವರ ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾ ಯಮಕನಮರಡಿ ವಚನ ಪ್ರಾರ್ಥನೆ ಮಾಡಿ, ನಿರೂಪಿಸಿದರು. ಅಂಗಡಿ ವೀರಭದ್ರಪ್ಪ ವಧು-ವರರ ಪರಿಚಯ ಮಾಡಿದರು. ಜ್ಯೋತಿ ಬಾದಾಮಿ ವಂದಿಸಿದರು. ಸುಮಾರು 600ಕ್ಕೂ ಅಧಿಕ ವಧು-ವರರ ಪಾಲಕರು ಪಾಲ್ಗೊಂಡಿದ್ದರು.