ಕುಷ್ಟಗಿ: ಪ್ರತಿಯೊಬ್ಬರು ಜಾತ್ರೆಯಲ್ಲಿ ಭಾಗವಹಿಸಿ ಮಾನಸಿಕ ನೆಮ್ಮದಿ ಪಡೆಯಬೇಕು, ಬಂಧು ಬಳಗ ಒಟ್ಟುಗೂಡಿಸಲು ಜಾತ್ರೆಗಳು ಸಹಾಯವಾಗಿವೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳ ಗವಿಮಠ ಜಾತ್ರೆ ದಕ್ಷಿಣ ಭಾರತ ಎರಡನೇ ಕುಂಭಮೇಳವಾದರೆ ದೋಟಿಹಾಳ ಶುಕಮುನಿ ಶ್ರೀಗಳ ಜಾತ್ರೆಯು ಕೊಪ್ಪಳ ಜಿಲ್ಲೆ ಎರಡನೇಯ ಕುಂಭ ಮೇಳ ಎನ್ನಬಹುದಾಗಿದೆ ಎಂದರು.
ಯುವಮುಖಂಡ ಲಾಡ್ಲೆಮಷಾಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಸಾಹಿತಿ ಕೆ.ವೈ.ಕಂದಕೂರು ಶ್ರೀಅವಧೂತ ಶುಕಮುನಿ ಶ್ರೀಗಳ ಚರಿತ್ರೆ ಕುರಿತು ಬರೆದಿರುವ ಪುಸ್ತಕ ಬಿಡುಗಡೆಯಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರಗೌಡ ಮಾಲಿ ಪಾಟೀಲ್, ಬಸಪ್ಪ ಚೌಡ್ಕಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು,ಈ ಸಂದರ್ಭದಲ್ಲಿ ಚಂದ್ರಶೇಖರ ದೇವರು ಸಾನ್ನಿಧ್ಯ ವಹಿಸಿದ್ದರು, ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಮಾಜಿ ಸಂಸದ ಸಂಗಣ್ಣ ಕರಡಿ, ಗೋಪಾಲರಾವ್ ಕುಲಕರ್ಣಿ,ಶಂಕರಗೌಡ ಪಾಟೀಲ, ಪ್ರಭುರಾಜ ಪಾಟೀಲ, ಶೇಖರಗೌಡ ಮಾಲಿಪಾಟೀಲ, ಶಿವಶಂಕರಗೌಡ ಕಡೂರು, ದೊಡ್ಡಬಸವನಗೌಡ ಬಯ್ಯಾಪುರ, ಲಾಡ್ಲೆಮಷಾಕ ದೋಟಿಹಾಳ,
ಎಸ್.ಆರ್.ರಸೂಲ್,ಶರಣಪ್ಪ ಗೋತಗಿ, ಮಾಲತಿ ನಾಯಕ, ಚಂದ್ರಶೇಖರ ನಾಲತವಾಡ, ಮಹೇಶ ಕಾಳಗಿ, ಅಬಕಾರಿ ಎಸ್ಪಿ ಹನಮಂತ ಭಜಂತ್ರಿ, ಹನಮಂತರಾವ್ ದೇಸಾಯಿ, ಡಾ.ಅರ್ಷದ್, ಮಾನಪ್ಪ ತಳವಾರ, ಬಸವರಾಜ ಶೆಟ್ಟರ್, ಬಂದೇನವಾಜ್, ಆದಪ್ಪ ಸಾಲವಾಡಗಿ, ಶ್ರೀನಿವಾಸ ಕಂಟ್ಲಿ, ಉಮೇಶ ಮಡಿವಾಳರ, ಶುಖಮುನಿ ಇಳಗೇರ, ಪ್ರಕಾಶ ರಾಠೋಡ್, ಶಾಹಿದ್ ಗಚ್ಚಿನಮನಿ ಸೇರಿದಂತೆ ಅನೇಕರು ಇದ್ದರು.ಜಾನಪದ ಕಲಾವಿದ ಜೀವನಸಾಬ್ ಬಿನ್ನಾಳ ನಿರೂಪಿಸಿದರು. ಗಾಯಕರಿಂದ ಸಂಗೀತ ಕಾರ್ಯಕ್ರಮ ನಡೆದವು. ಸಿಪಿಐ ಆಂಜನೇಯ, ಪಿಎಸೈ ಹನಮಂತಪ್ಪ ತಳವಾರ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.