ರೈತರಿಗೆ ತೂಕದಲ್ಲಿ ಮೋಸ: ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Dec 10, 2025, 12:15 AM IST
ರೈತರಿಗೆ ಮುಂಗಾರು ಭತ್ತದ ಖರೀದಿಸುವಾಗ ತೂಕದಲ್ಲಿ ಜಾಸ್ತಿ ಸೂಟ್ ಕಟ್ ಮಾಡಿ ಮೋಸ ಹೋಗುತ್ತಿದ್ದು, ಎಪಿಎಂಸಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಬೇವಿನಾಳಮಠ ಆಗ್ರಹಿಸಿದರು. | Kannada Prabha

ಸಾರಾಂಶ

Farmers cheated in weighing: Demand for action

ಕನ್ನಡಪ್ರಭ ವಾರ್ತೆ ಹುಣಸಗಿ

ರೈತರಿಗೆ ಮುಂಗಾರು ಭತ್ತದ ಖರೀದಿಸುವಾಗ ತೂಕದಲ್ಲಿ ಜಾಸ್ತಿ ಸೂಟ್ ಕಟ್ ಮಾಡಿ ಮೋಸ ಹೋಗುತ್ತಿದ್ದು, ಎಪಿಎಂಸಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಬೇವಿನಾಳಮಠ ಆಗ್ರಹಿಸಿದರು.

ಪಟ್ಟಣದ ತಾಲೂಕು ತಹಶೀಲ್ ಕಾರ್ಯಾಲಯದಲ್ಲಿ, ತಹಶೀಲ್ದಾರ ಎಂ. ಬಸವರಾಜ್ ಅವರಿಗೆ ತಾಲೂಕು ಘಟಕದಿಂದ ಮನವಿ ಸಲ್ಲಿಸಿ ಮಾತನಾಡಿದ ಅವರು, ನಿಗದಿತ ದರದಲ್ಲಿ ಭತ್ತ ಖರೀದಿಸದೆ ತಮಗೆ ಇಚ್ಚಿಸಿದಂತೆ ರೈತರ ಭತ್ತ ಖರೀದಿಸಲಿದ್ದಾರೆ. ರಸಗೊಬ್ಬರ ದರದ ಬಗ್ಗೆ ಮಾಹಿತಿ ಹಾಕಬೇಕು. ಕಳಪೆ ಗೊಬ್ಬರ ಮಾರಾಟ ತಡೆಯಬೇಕು ಅಲ್ಲದೆ ರೈತರ ಸಮ್ಮುಖದಲ್ಲಿ ಎಲ್ಲ ಗೊಬ್ಬರ ಅಂಗಡಿಗಳ ಮಾಲೀಕರ ಸಭೆ ನಡೆಸಬೇಕು ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಒತ್ತಾಯಿಸಿದರು. ಈ ಸಂದರ್ಭ ಸಿದ್ದನಗೌಡ ಗುರಡ್ಡಿ, ದೊಡ್ಡಪ್ಪ ಕಕ್ಕೇರಿ, ಗೊಲ್ಲಾಳ ಹುಣಸಗಿ, ಬಸವರಾಜ್ ಬೂದಿಹಾಳ, ಗೋವಿಂದ ಪತ್ತಾರ, ರಾಯಪ್ಪ ವಜ್ಜಲ್, ಸೋಮಯ್ಯ ಹಿರೇಮಠ, ಶಿವಲಿಂಗಯ್ಯ ಬೇವಿನಾಳಮಠ ಸೇರಿದಂತೆ ಇತರರಿದ್ದರು.

-

9ವೈಡಿಆರ್‌1 :

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ