ಮಹಾತ್ಮ ಗಾಂಧೀಜಿ ಮೌಲ್ಯ ಪ್ರತಿಪಾದನೆಯ ಅನುಯಾಯಿ

KannadaprabhaNewsNetwork |  
Published : Oct 03, 2025, 01:07 AM IST
ಚಿಕ್ಕಮಗಳೂರು ನಗರದ ರತ್ನಗಿರಿ ಬೋರಿಯಲ್ಲಿ ಬಿಜೆಪಿ ನಗರ ಮಂಡಲದಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಜಯಂತಿ ಪ್ರಯುಕ್ತ ಪುತ್ತಳಿಗೆ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಪುಷ್ಪಾರ್ಚನೆ ಸಲ್ಲಿಸಿದರು | Kannada Prabha

ಸಾರಾಂಶ

ಚಿಕ್ಕಮಗಳೂರು, ಮಹಾತ್ಮ ಗಾಂಧಿಯವರು ಮೌಲ್ಯ ಪ್ರತಿಪಾದನೆ ಅನುಯಾಯಿ. ಅಹಿಂಸೆ ಪರ ಹಾಗೂ ಸ್ವದೇಶಿ ಅಭಿಯಾನಕ್ಕೆ ಮುನ್ನುಡಿ ಬರೆದವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

- ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಹಾತ್ಮ ಗಾಂಧಿಯವರು ಮೌಲ್ಯ ಪ್ರತಿಪಾದನೆ ಅನುಯಾಯಿ. ಅಹಿಂಸೆ ಪರ ಹಾಗೂ ಸ್ವದೇಶಿ ಅಭಿಯಾನಕ್ಕೆ ಮುನ್ನುಡಿ ಬರೆದವರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ನಗರದ ರತ್ನಗಿರಿ ಬೋರಿಯಲ್ಲಿ ಬಿಜೆಪಿ ನಗರ ಮಂಡಲದಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಪ್ರಯುಕ್ತ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಗಾಂಧೀಜಿ, ಶಾಸ್ತ್ರಿ ಹಾಗೂ ಸ್ವಯಂಸೇವಕ ಸಂಘ ಶತಾಬ್ದಿ ಈ ಮೂರು ವಿಶೇಷ ಆಚರಣೆಗಳು ವಿಜಯ ದಶಮಿ ದಿನ ಕೂಡಿ ಬಂದಿರುವುದು ಸಂತಸದ ಸಂಗತಿ ಎಂದರು.

ಗಾಂಧಿ ಎಂದರೆ ಸತ್ಯದ ಹಾದಿಯಲ್ಲಿ ನಡೆದವರು ಸ್ವಭಾಷಾ, ಸ್ವದೇಶಿ ಮಹತ್ವ ಕೊಟ್ಟು ಭಾರತೀಯರ ಪಾಲಿಗೆ ಶ್ರೇಷ್ಠ ರಾದವರು ಎಂದರು.

ದೈನಂದಿನ ಜೀವನದಲ್ಲಿ ನಾವು ಸ್ವದೇಶಿ ಮತ್ತು ವಿದೇಶಿ ವಸ್ತುಗಳ ಪಟ್ಟಿ ಮಾಡಬೇಕು. ಬಳಿಕ ಒಂದು ಆಂದೋಲನದ ಮೂಲಕ ದಿನ ಸ್ವದೇಶಿ ಬಳಕೆಗಳ ಉತ್ಪನ್ನಗಳಿಗೆ ಒತ್ತು ನೀಡಿದರೆ ದೇಶ ಉದ್ಯೋಗದಲ್ಲಿ ಉನ್ನತಿ ಗಳಿಸಿ, ‌ಕೈಗಾರಿಕಾ ಬೆಳವಣಿಗೆಯತ್ತ ಯಶಸ್ಸು ಪಡೆದು, ಸ್ವಾವಲಂಬಿಯಾಗಿ ಬದುಕಿ ವಿಶ್ವದ ಮುಂದೆ ವೈಭವ ವಾಗಲಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಇಂದು ಶತಾಬ್ದಿ ಆಚರಿಸುತ್ತಿದೆ. ರಾಷ್ಟ್ರಭಕ್ತಿ, ಬ್ರಿಟಿಷ್ ಆಳ್ವಿಕೆ ವಿರುದ್ಧ ಹೋರಾಡಲಿ ಕೇಶವಜೀ ಅವರು ಸಂಘ ಸ್ಥಾಪಿಸಿ ಬ್ರಿಟಿಷ್ ದಾಸ್ಯದಿಂದ ನೊಂದವರನ್ನು ಹೊರತರಲು ಶ್ರಮಿಸಿದವರು ಎಂದರು.

ಸಂಘ ರಾಷ್ಟ್ರಹಿತ, ಬ್ರಿಟಿಷರ ಕಪಿಮುಷ್ಠಿಯಿಂದ ದೇಶದ‌ ಜನರಿಗೆ ಸ್ವಾತಂತ್ರ್ಯ ಕೊಡಿಸಲು ಹೋರಾಡಿದವರು ಎಂದರು.

ಇತ್ತೀಚಿನ ದಿನಗಳಲ್ಲಿ ಗಾಂಧಿ ಹೆಸರನ್ನು ಇಟ್ಟುಕೊಂಡ ವ್ಯಕ್ತಿಗಳು ಗಾಂಧಿ ಸದ್ಗುಣಗಳನ್ನು ಅಳವಡಿಸಿಕೊಂಡಿಲ್ಲ ಇದರ ಬದಲಾಗಿ ರಾಷ್ಟ್ರ ವಿರೋಧಿ ಹಾಗೂ ಸಂವಿಧಾನ ವಿರೋಧಿ ಮಾತುಗಳನ್ನು ಆಡುತ್ತ ಗಾಂಧಿ ಹೆಸರಿಗೆ ಮಸಿ ಬಳಿಯುವಂತ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

ಮುಂದಾದರೂ ಗಾಂಧಿ ಹೆಸರಿನ ವ್ಯಕ್ತಿಗಳು, ಮಹಾತ್ಮ ಗಾಂಧಿಯಂತೆ ದೇಶ ನಿಷ್ಠೆ, ಸ್ವದೇಶಿ ಬಳಕೆ ಸತ್ಯದ ಪ್ರತಿಪಾದನೆ ಹಾಗೂ ಅಹಿಂಸೆ ದಾರಿಯಲ್ಲಿ ನಡೆಯುವ ಜೊತೆಗೆ ಶಿವಾಜಿ ಮಹಾರಾಜ ಹಾಗೂ ರಾಣ ಪ್ರತಾಪ್ ಸಿಂಗ್ ಅವರಂತ ದೇಶಭಕ್ತಿ ಬೆಳೆಸಿಕೊಂಡು ಸಜ್ಜನರಂತೆ ಬಾಳಬೇಕು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ನಗರದ ಅಧ್ಯಕ್ಷ ಪುಷ್ಪರಾಜ್, ನಗರಸಭೆ ಉಪಾಧ್ಯಕ್ಷ ಲಲಿತಾ ರವಿ ನಾಯಕ್, ವಕ್ತರ ಸಿಎಚ್ ಲೋಕೇಶ್ ಮುಖಂಡರಾದ ನಾಗರಾಜ್ ಪ್ರದೀಪ್ ಕೌಶಿಕ್ ಜಯಪ್ರಕಾಶ್ ಮತ್ತಿತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಲ್ಲಿ ರಸ್ತೆ ಅತಿಕ್ರಮಣ ತೆರವು
ಔದ್ಯೋಗಿಕ ಕ್ಷೇತ್ರದಲ್ಲಿ ಕೌಶಲ್ಯಯುಕ್ತ ವ್ಯಕ್ತಿತ್ವ ಅಗತ್ಯ: ಶ್ರೀನಿವಾಸನ್ ವರದರಾಜನ್‌