ರೂಢಿ ನೆಪದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಕಡೆಗಣಿಸದಿರಿ: ಪ್ರೊ.ಗುರುಲಿಂಗಯ್ಯ

KannadaprabhaNewsNetwork |  
Published : Jun 17, 2024, 01:32 AM ISTUpdated : Jun 17, 2024, 01:33 AM IST
ಬೆಂಗಳೂರಿನ ವಿಶಿಷ್ಟ ಕಲಾವಿದರಿಂದ ತಲ್ಕಿ ನಾಟಕ ಪ್ರದರ್ಶನ ನಡೆಯಿತು. | Kannada Prabha

ಸಾರಾಂಶ

ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಿಂಗ ಪಕ್ಷಪಾತತೆ, ಲಿಂಗ ಸಂವೇದನಾಶೀಲತೆ ಕುರಿತ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಮಾಜದಲ್ಲಿ ಹೆಚ್ಚಾಗಿರುವ ಲಿಂಗ ಅಸಮಾನತೆ, ತಾರತಮ್ಯ ಹೋಗಲಾಡಿಸಬೇಕು. ಸಂಪ್ರದಾಯ ಕಟ್ಟಳೆಯ ನೆಪದಲ್ಲಿ ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜ ಕಾಣುವ ದೃಷ್ಟಿಕೋನ ಬದಲಾಗಬೇಕಾಗಿದೆ ಎಂದು ಕುವೆಂಪು ವಿವಿ ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಗುರುಲಿಂಗಯ್ಯ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶ, ಸಮಾಜ ವಿಜ್ಞಾನ ವಿಭಾಗ, ಸ್ಪಂದನಾ ವೇದಿಕೆ, ಮಹಿಳಾ ಸಬಲೀಕರಣ ಕೋಶ ಮತ್ತು ಪೋಷ್, ಪಯಣ (ರಿ) ಸಂಸ್ಥೆ ಬೆಂಗಳೂರು ವತಿಯಿಂದ ಕಾಲೇಜಿನ ಜಿ.ಎಸ್. ಶಿವರುದ್ರಪ್ಪ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಲಿಂಗ ಪಕ್ಷಪಾತತೆ ಮತ್ತು ಲಿಂಗ ಸಂವೇದನಾಶೀಲತೆ ಕುರಿತು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲಿಂಗತ್ವ ಸಮಾನತೆ ಬಗ್ಗೆ ಸಮಾಜದಲ್ಲಿ ಆಗಾಗ ಚರ್ಚೆ ನಡೆಯುತ್ತಿರುತ್ತದೆ. ಎಲ್ಲರ ರೀತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಸಹಜವಾಗಿ ಬದುಕಲು ಅವಕಾಶ ನೀಡಬೇಕು ಎಂಬುದು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗುತ್ತಿದೆ ಪೋಷಕರು ಅಂಗವೈಕಲ್ಯ, ಬುದ್ಧಿಮಾಂದ್ಯ ಮಕ್ಕಳನ್ನು ಒಪ್ಪಿಕೊಳ್ಳುತ್ತಿದ್ದು, ಲಿಂಗತ್ವ ಅಲ್ಪಸಂಖ್ಯಾತರನ್ನು ಒಪ್ಪಿಕೊಳ್ಳದಿರು ವುದು ದುರಾದೃಷ್ಟಕರ ಎಂದು ವಿಷಾದಿಸಿದ ಅವರು, ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜ ಕಾಣುವ ದೃಷ್ಟಿಕೋನ ಬದಲಾಗಬೇಕಾಗಿದೆ ಎಂದು ತಿಳಿಸಿದರು.

ಸಂಪ್ರದಾಯ ಕಟ್ಟಳೆ ರೂಢಿ ನೆಪದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಬಗೆಗಿನ ಲಿಂಗ ಪಕ್ಷಪಾತತೆ, ಅಸಮಾನತೆ ಹೋಗಲಾಡಿಸಬೇಕಾಗಿದೆ ಲಿಂಗತ್ವ ತಾರತಮ್ಯ ಕೊನೆಗಾಣಿಸಲು ಕುಟುಂಬದಿಂದಲೇ ಸಂವೇದನಾಶೀಲತೆ ಆರಂಭವಾದಾಗ ಮಾತ್ರ ಎಲ್ಲರ ಜತೆ ಸಮಾಜದಲ್ಲಿ ಸಹಜವಾಗಿ ಬದುಕಲು ಸಾದ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಮಾನವ ಹಕ್ಕುಗಳ ಹೋರಾಟಗಾರ್ತಿ,ಲೇಖಕಿ,ಪಯಣ ಸಂಸ್ಥೆಯ ರೇವತಿ ಮಾತನಾಡಿ,ಲಿಂಗತ್ವ ಅಲ್ಪಸಂಖ್ಯಾತರು ಸ್ವತಂತ್ರವಾಗಿ ಸಮಾಜದಲ್ಲಿ ಬದುಕುವುದು ಕಷ್ಟಸಾದ್ಯವಾಗಿದೆ ಜೀವನ ನಿರ್ವಹಣೆಗಾಗಿ ಸೇವೆ ಸಲ್ಲಿಸುವ ಕಚೇರಿ ಮತ್ತಿತರ ಕಡೆಗಳಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ ಈ ಸಂದರ್ಬದಲ್ಲಿ ಹಲವು ನೋವು ಅಪಮಾನಗಳನ್ನು ಎದುರಿಸಬೇಕಾಗಿದೆ ಎಂದ ಅವರು ಸಮಾಜದಲ್ಲಿ ಸಹಜವಾಗಿ ಬದುಕುವ ಅವಕಾಶವಿಲ್ಲವಾಗಿದೆ ಲಿಂಗತ್ವ ಅಲ್ಪಸಂಖ್ಯಾತರಿಗೆ ಸೆಕ್ಸ್ ವರ್ಕ,ಬಿಕ್ಷಾಟನೆ ಅನಿವಾರ್ಯವಾಗಿದೆ ನಾನು ಯಾರು ಎಂಬ ಪ್ರಶ್ನೆ ಎದುರಾದಾಗ ಸಮಾಜದ ದೃಷ್ಟಿಕೋನ ಬದಲಾಗಿ ಎಲ್ಲರ ರೀತಿ ಗೌರವ ನಮಗೂ ದೊರೆಯಬೇಕು ಈ ಬಗ್ಗೆ ಸಂಸ್ಥೆ ಹೆಚ್ಚಿನ ಗಮನಹರಿಸಿ ಶ್ರಮವಹಿಸಿದೆ ಎಂದು ತಿಳಿಸಿದರು.

ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಮಂಜುಳಾ ಪ್ರಾಸ್ಥಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಾನವ ಹಕ್ಕುಗಳ ಹೋರಾಟಗಾರ್ತಿ, ಲೇಖಕಿ ಪಯಣ ಸಂಸ್ಥೆಯ ಚಾಂದನಿ ಹಾಗೂ ಮೈಸೂರು ಮಾನಸ ಗಂಗೋತ್ರಿಯ ಸಂಶೋಧನಾ ವಿದ್ಯಾರ್ಥಿನಿ ಎಚ್.ಜಿ. ದೀಪಾ ಬುದ್ದೆ ಮಾತನಾಡಿದರು.

ವೇದಿಕೆಯಲ್ಲಿ ಮಹಿಳಾ ಸಬಲೀಕರಣ ಕೋಶದ ಸಂಯೋಜಕಿ ಎಸ್.ಸುಮ,ಆಂತರಿಕ ಗುಣಮಟ್ಟ ಭರವಸೆ ಕೋಶದ ಡಾ.ಅಜಯಕುಮಾರ್,ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾದ್ಯಾಪಕಿ ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.

ನಂತರದಲ್ಲಿ ಬೆಂಗಳೂರಿನ ವಿಶಿಷ್ಟ ಕಲಾವಿದರಿಂದ ತಲ್ಕಿ ನಾಟಕ ಪ್ರದರ್ಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳದಿ ಮಾರ್ಗ: 9 ಮೆಟ್ರೋ ನಿಲ್ದಾಣ ಬಳಿ ಹೊಸ ಬಿಎಂಟಿಸಿ ನಿಲ್ದಾಣ
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌