ಕೆ.ಎಂ.ದೊಡ್ಡಿ:
ಕ್ಯಾತಘಟ್ಟ ಗ್ರಾಮದಲ್ಲಿ ಅಣ್ಣಾಜಿಯವರ ವರದರಾಜು ಅವರು ತಮ್ಮ ಮನೆಯ ಬಳಿ ಕಟ್ಟಿ ಹಾಕಿದ್ದ ಮೇಕೆ ಮೇಲೆ ದಾಳಿ ಮಾಡಿ ರಕ್ತ ಹೀರಿ ಮೇಕೆ ಮರಿಗಳನ್ನು ಹೊತ್ತೊಯ್ದಿದೆ. ಅದೇ ರೀತಿ ಗುರುದೇವರಹಳ್ಳಿಯ ಜಿ.ಎಂ.ಪ್ರತಾಪ್ ಅವರಿಗೆ ಸೇರಿದ ಸಾಕು ನಾಯಿ ಹಾಗೂ ಬಿಳಿಜೋಗಿ ಮಾದಣ್ಣರ ಮೇಕೆಯನ್ನು ಬಲಿ ಪಡೆದಿದೆ. ಮೇಕೆಗಳನ್ನು ಕಳೆದುಕೊಂಡ ವರದರಾಜು, ಬಿಳಿಜೋಗಿ ಮಾದಣ್ಣರಿಗೆ ಸಾವಿರಾರು ನಷ್ಟ ಸಂಭವಿಸಿದೆ.
ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿಯಿಂದ ಎರಡು ಗ್ರಾಮಸ್ಥರು ಹಾಗೂ ಸುತ್ತಮತ್ತಲ ಗ್ರಾಮಗಳ ಜನರಲ್ಲಿ ಆತಂಕ ಉಂಟಾಗಿದೆ. ತಮ್ಮ ಜಮೀನುಗಳಿಗೆ ಹೋಗಲು ಎದುರುವಂತಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆ ಬಂದು ಹೋಗಿರುವ ಚಲನವಲನಗಳನ್ನು ಪರಿಶೀಲಿಸಿ ಗುರುದೇವರಹಳ್ಳಿ ಸಮೀಪ ಬೋನ್ ಇಟ್ಟು ಸೆರೆಗೆ ಮಂದಾಗಿದ್ದಾರೆ.
ಗುರುದೇವರಹಳ್ಳಿಯಲ್ಲಿ ಚಿರತೆ ಸೆರೆಗೆ ಬೋನ್ ಇಟ್ಟಿರುವ ಅರಣ್ಯಾಧಿಕಾರಿಗಳು.ಜಿಂಕೆ ನುಂಗಿದ್ದ ಬೃಹತ್ ಗಾತ್ರದ ಹೆಬ್ಬಾವು ಸೆರೆ
ಜಿಂಕೆಯನ್ನು ನುಂಗಿ ಮುಂದೆ ಹೋಗಲಾರದೆ ತಾಲೂಕಿನ ನೆಟ್ಕಲ್ ಗ್ರಾಮದ ಪೈಪ್ ಲೈನ್ ಬಳಿ ಕಾಣಿಸಿಕೊಂಡಿದ್ದ ಹೆಬ್ಬಾವನ್ನು ಸೆರೆ ಹಿಡಿದು ಮುತ್ತತ್ತಿ ಅರಣ್ಯಕ್ಕೆ ಬಿಡಲಾಯಿತು.
ಸ್ಥಳೀಯರ ಮಾಹಿತಿಯಿಂದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಉರಗ ತಜ್ಞರಿಂದ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ ಮಾಡಿದರು. 10 ಅಡಿ ಉದ್ಧ 30 ಕೆಜಿಗೂ ಹೆಚ್ಚು ತೂಕವಿದ್ದ ಭಾರೀ ಗಾತ್ರದ ಹೆಬ್ಬಾವವನ್ನು ಅರಣ್ಯ ಇಲಾಖೆ ಸಹಕಾರದೊಂದಿಗೆ ಸೆರೆ ಹಿಡಿದು ಮುತ್ತತ್ತಿ ಅರಣ್ಯಕ್ಕೆ ಕೊಂಡೊಯ್ದು ಬಿಡಲಾಯಿತು.