ಪ್ರತಿ ಹಂಗಾಮಿನಲ್ಲಿಯೂ ವಿವಿಧ ಬೆಳೆ ಬೆಳೆದು ಮಣ್ಣಿನ ಫಲವತ್ತತೆ ಕಾಪಾಡಿ

KannadaprabhaNewsNetwork | Published : Jun 27, 2025 12:49 AM

ಸಹಕಾರ ಸಿಬ್ಬಂದಿ ವರ್ಗದವರು ಟೆಕ್ನೊ ಏಜೆಂಟ್‌ ರಂತೆ ಕಾರ್ಯನಿರ್ವಹಿಸಬೇಕು. ಸಹಕಾರ ಸಂಘಗಳಿಗೆ ರಸಗೊಬ್ಬರ, ಬಿತ್ತನೆ ಬೀಜ ಖರೀದಿಸಲು ಬಂದ ರೈತರೊಂದಿಗೆ ವೈಜ್ಞಾನಿಕವಾದ ಮಾಹಿತಿ ನೀಡಬೇಕು. ನ್ಯಾನೋ ರಸಗೊಬ್ಬರಗಳು ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳ ಕುರಿತು ರೈತರಿಗೆ ಮಾಹಿತಿ ನೀಡಿ ಅವುಗಳನ ಉಪಯೋಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕು.

ಕನ್ನಡಪ್ರಭ ವಾರ್ತೆ ಸುತ್ತೂರು

ರೈತರು ಏಕಬೆಳೆ ಪದ್ಧತಿಗೆ ಜೋತು ಬೀಳದೆ ಪ್ರತಿ ಹಂಗಾಮಿನಲ್ಲಿಯೂ ಕೂಡ ವಿವಿಧ ಬೆಳೆಗಳನ್ನು ಬೆಳೆದು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವಂತೆ ಬೆಂಗಳೂರಿನ ಕೃಷಿ ವಿವಿಯ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್. ಶಿವಲಿಂಗಯ್ಯ ಹೇಳಿದರು.

ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈದರಾಬಾದ್‌ ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ, ಬೆಂಗಳೂರಿನ ಸಿಬ್ಬಂದಿ ತರಬೇತಿ ಘಟಕ- ಸಮೇತಿ (ದಕ್ಷಿಣ), ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಸಹಕಾರ ಸಂಘಗಳ ಸಿಬ್ಬಂದಿಗೆ ಆಗಸ್ಟ್‌ 2025 ರಿಂದ ಅಕ್ಟೋಬರ್‌ ವರೆಗೆ 3 ತಂಡಗಳಲ್ಲಿ ಒಟ್ಟು 90 ಶಿಬಿರಾರ್ಥಿಗಳಿಗೆ ಸಿಬ್ಬಂದಿ ತರಬೇತಿ ಘಟಕದ ಸರ್ಟಿಫಿಕೇಟ್‌ ಕೋರ್ಸ್ (ಸಿಸಿಐಎನ್‌ಎಂ) ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಡೆದ ಸಹಕಾರ ಸಿಬ್ಬಂದಿ ವರ್ಗದವರು ಟೆಕ್ನೊ ಏಜೆಂಟ್‌ ರಂತೆ ಕಾರ್ಯನಿರ್ವಹಿಸಬೇಕು. ಸಹಕಾರ ಸಂಘಗಳಿಗೆ ರಸಗೊಬ್ಬರ, ಬಿತ್ತನೆ ಬೀಜ ಖರೀದಿಸಲು ಬಂದ ರೈತರೊಂದಿಗೆ ವೈಜ್ಞಾನಿಕವಾದ ಮಾಹಿತಿ ನೀಡಬೇಕು. ನ್ಯಾನೋ ರಸಗೊಬ್ಬರಗಳು ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳ ಕುರಿತು ರೈತರಿಗೆ ಮಾಹಿತಿ ನೀಡಿ ಅವುಗಳನ ಉಪಯೋಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಕೃಷಿ ವಿವಿಯ ಸಂಯೋಜನಾಧಿಕಾರಿ ಸಮೇತಿ (ದಕ್ಷಿಣ) ಹಾಗೂ ರಾಜ್ಯ ನೋಡಲ್‌ ಅಧಿಕಾರಿ (ದೇಸಿ) ಡಾ.ಆರ್. ನಾರಾಯಣರೆಡ್ಡಿ ಮಾತನಾಡಿ, ತರಬೇತಿ ಪಡೆದ ಸಿಬ್ಬಂದಿ ವರ್ಗದವರು ಅರೆಕಾಲಿಕ ಕೃಷಿ ವಿಸ್ತರಣಾಧಿಕಾರಿಗಳಂತೆ ಕಾರ್ಯನಿರ್ವಹಿಸಬೇಕು ಎಂದರು.

ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸಿಂಪಡಿಸುವ ಕುರಿತು ರೈತರಿಗೆ ಸರಿಯಾದ ಮಾಹಿತಿ ನೀಡಬೇಕು. ಅವುಗಳನ್ನು ಸರಿಯಾದ ಸಮಯದಲ್ಲಿ ವಿತರಿಸಬೇಕು, ಇದರಿಂದ ರೈತರ ವೆಚ್ಚವು ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಚಾಮರಾಜನಗರ ಜಿಲ್ಲಾ ಸಹಕಾರ ಸಂಘಗಳ ಉಬಂಧಕಿ ಜ್ಯೋತಿ ಅರಸ್‌ ಮತಾನಾಡಿ, ಸಹಕಾರ ಸಿಬ್ಬಂದಿ ವರ್ಗದವರು ತರಬೇತಿಯಲ್ಲಿ ಪಡೆದಿರುವ ಮಾಹಿತಿಯಲ್ಲದೇ, ಕಾಲ ಕಾಲಕ್ಕೆ ಕೃಷಿ ವಿಜ್ಞಾನಿಗಳನ್ನು ಸಂರ್ಪಕಿಸಿ ಆಯಾಕಾಲಕ್ಕೆ ಹೊಸದಾಗಿ ಮಾರುಕಟ್ಟೆಗೆ ಬರುವ ಸುಧಾರಿತ ಬಿತ್ತನೆ ಬೀಜಗಳು ಹಾಗು ರಸಗೊಬ್ಬರಗಳ ಮಾಹಿತಿಯನ್ನು ರೈತರಿಗೆ ತಿಳಿಸಿಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಬಿ.ಎನ್. ಜ್ಞಾನೇಶ್‌ ಮಾತನಾಡಿ, ಮಣ್ಣು ಕೃಷಿಯ ಕಣ್ಣು, ಆದ್ದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ಸುಸ್ಥಿರ ಮಣ್ಣಿನಿಂದ ಉತ್ತಮ ಬೆಳೆ ಬೆಳೆಯಬಹುದು. ಮಣ್ಣಿನಲ್ಲಿ ಸುಸ್ಥಿರತೆ ಕಾಪಾಡಿಕೊಳ್ಳಲು ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಸೂಡೊಮೊನಾಸ್ ಹಾಗೂ ಸೂಕ್ಷ್ಮಪೋಷಕಾಂಶಗಳನ್ನು ಮಣ್ಣಿಗೆ ನಿಯಮಿತವಾಗಿ ಸೇರಿಸಬೇಕು. ಕಡ್ಡಾಯವಾಗಿ 2 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿ, ಅದರಂತೆ ಪೋಷಕಾಂಶ ನೀಡಬೇಕು. ತರಬೇತಿ ಪಡೆದ ಸಿಬ್ಬಂದಿ ಮಣ್ಣಿನ ಮಹತ್ವ ಹಾಗೂ ಮಣ್ಣು ಪರೀಕ್ಷೆ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ತಿಳಿಸಿದರು.

ಯಾವುದೇ ಸಮಯದಲ್ಲಿ ತರಬೇತಿ ಪಡೆದ ಸಿಬ್ಬಂದಿ ವರ್ಗದವರು ಕೆವಿಕೆಯವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ಶಿಬಿರಾರ್ಥಿಗಳಿಗೆ ತಿಳಿಸಿದರು.

ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ 90 ಶಿಬಿರಾರ್ಥಿಗಳು ಭಾಗಹಿಸಿದ್ದರು. ಅನುವುಗಾರರಾದ ಜೆ.ಜಿ. ರಾಜಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಡಾ. ದೀಪಕ ಸ್ವಾಗತಿಸಿದರು. ಶಾಮರಾಜು ವಂದಿಸಿದರೆ, ಡಾ.ವೈ.ಪಿ. ಪ್ರಸಾದ್‌ ನಿರೂಪಿಸಿದರು.