ಬಯಲಾಟದ ಸಾಧನೆಗಾಗಿ ಗುಂಡೂರಾವ್‌ ಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

KannadaprabhaNewsNetwork |  
Published : Oct 31, 2025, 02:00 AM IST
3ಚೆಚ್‌ಎಸ್ಎನ್20ಅ | Kannada Prabha

ಸಾರಾಂಶ

ಬಯಲಾಟದಲ್ಲಿನ ಸಾಧನೆಗಾಗಿ ಗುಂಡೂರಾವ್ ಅವರಿಗೆ 2025ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿದೆ.

ಹಾಸನ ಜಿಲ್ಲೆ, ಹಾಸನ ತಾಲೂಕಿನ ಹೂವಿನಹಳ್ಳಿ ಕಾವಲಿನ ಗುಂಡೂರಾವ್‌ ಅವರು ಜನಿಸಿದ್ದು 1959 ರಲ್ಲಿ. ರಾಮಯ್ಯ ಹಾಗೂ ಹನುಮಮ್ಮ ದಂಪತಿ ಮಗನಾದ ಇವರು ಬಾಲ್ಯದಿಂದಲೇ ತೊಗಲು ಬೊಂಬೆ ಆಟವನ್ನು ಕಣ್ಣಾರೆ ಕಂಡು ಅನುಭವಿಸಿದವರು. ಏಕೆಂದರೆ ಇವರ ಕುಟುಂಬವೇ ಇದರಲ್ಲಿ ತೊಡಗಿಕೊಂಡಿತ್ತು. ಹಾಗಾಗಿ ಗುಂಡೂರಾವ್‌ ಅವರಿಗೂ ಈ ಕಲೆ ವಂಶಪಾರಂಪರ್ಯವಾಗಿ ಬಂದಿದೆ. ತಮ್ಮ ಪೋಷಕರ ನಂತರ ಈ ಕಲೆಯನ್ನು ಮುಂದುವರೆಸಿಕೊಂಡು ಬಂದ ಇವರು ಬಯಲಾಟದ ಮೂಲಕ ಸರ್ಕಾರಿ ಯೋಜನೆಗಳನ್ನು ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಾ ಬಂದಿದ್ದಾರೆ. ಬಯಲಾಟದಲ್ಲಿನ ಸಾಧನೆಗಾಗಿ ಗುಂಡೂರಾವ್ ಅವರಿಗೆ 2025ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಜ್ಞಾನವನ್ನು ಓಡಿಸಿ ಜ್ಞಾನ ಬೆಳಗುವ ಗುರುವಿಗೆ ಗುಲಾಮರಾಗಿ: ಡಿ.ನಾರಾಯಣಪ್ಪ
ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ