ಹೆಮ್ಮಾಡಿ ಜನತಾ ಪಿಯು ಕಾಲೇಜ್‌ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

KannadaprabhaNewsNetwork |  
Published : Apr 16, 2026, 02:45 AM IST
ಪ್ರಾಂಶುಪಾಲ ಗಣೇಶ ಮೊಗವೀರ | Kannada Prabha

ಸಾರಾಂಶ

2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 45ರಿಂದ ಶೇ. 60 ಅಂಕ ಪಡೆದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡುವಂತೆ ತರಬೇತುದೊಳಿಸುತ್ತಿದೆ.

ಕುಂದಾಪುರ: 2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕುಂದಾಪುರದ ಪ್ರತಿಷ್ಠಿತ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 45ರಿಂದ ಶೇ. 60 ಅಂಕ ಪಡೆದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡುವಂತೆ ತರಬೇತುದೊಳಿಸುತ್ತಿದೆ. ಈ ಕಾಲೇಜು ಪ್ರಾರಂಭದಿಂದ ಸತತ 4ನೇ ವರ್ಷವೂ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದೆ. 15 ವಿದ್ಯಾರ್ಥಿಗಳು ಅತ್ಯಧಿಕ ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡಿದ್ದಾರೆ. ಟಾಪ್ 10 ರ‍್ಯಾಂಕ್‌ಗಳಲ್ಲಿ 178 ವಿದ್ಯಾರ್ಥಿಗಳು: ಈ ಕಾಲೇಜಿನ ರಶ್ಮಿ ಪೈ 598 ಅಂಕ ಗಳಿಸಿ ರಾಜ್ಯಕ್ಕೆ 2ನೇ ರ‍್ಯಾಂಕ್ ಗಳಿಸಿದ್ದರೆ, ಶ್ರಾವ್ಯ ದೇವಾಡಿಗ (597) 3ನೇ, ಶಮ್ಯ ಶೆಟ್ಟಿ (597) ಮತ್ತು ಅಕ್ಷತಾ ವೀರಣ್ಣ (596) 4ನೇ, ಪ್ರಥಮ ಕಾಂಚನ್ (596) 5ನೇ, ಪ್ರಜ್ಞಾ ಎಸ್. ಪೂಜಾರಿ (594) 6ನೇ, ಸುಚಿತ್ರ (595 ) 6ನೇ, ಇಂಚರಾ ಅಶೋಕ್ (594) 6ನೇ, ಅನ್ವಿತಾ (594) 7ನೇ, ಸಾನಿಕಾ (593) 8ನೇ, ಮಾನ್ಯ (592 ) 8ನೇ, ಕಲ್ಪಿತಾ (592) 9ನೇ, ಹಿರಣ್ಮಯ್ (592) 9ನೇ, ಪ್ರಸಾದ್ ಪೂಜಾರಿ (591) 9ನೇ, ಪ್ರೀತನ್ (591), ಸ್ಮೃತಿಕಾ (590) ಮತ್ತು ಧನ್ಯ ಬಿಲ್ಲವ (590) 10ನೇ ರ‍್ಯಾಂಕ್ ಗಳಿಸಿದ್ದಾರೆ. 585ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು: ಪ್ರೀತಿಕಾ 589, ದೀಕ್ಷಾ 589, ಸನ್ಮಿತಾ 589, ತನ್ವಿ ಲವ 588, ಮರಿಯಾ ವಿಯೋಲಾ 588, ಸಾಕ್ಷಿ ಎಸ್. ಪೂಜಾರಿ 588, ಪೂರ್ವಿ 587, ಸಿಂಚನಾ 586, ಶ್ರದ್ಧಾ ಎಸ್. 586, ತನ್ವಿತಾ 586, ಶ್ರೇಷ್ಠ ಆರ್. 586, ಶ್ರೀರಾಮ 586, ಸಿಂಚನಾ ಎಸ್. 586, ದೀಕ್ಷಾ 585, ನಿಖಿತಾ 585, ಪಲ್ಲವಿ ಆರ್. 585, ಗೀತಾ ಪೈ 585, ಹೇಮಂತ್ 585, ಪಾವನಿ ಎ.ವಿ. 585, ರಿತೇಶ್ ಎಂ. 585, ರೋಹಿತ್ 585 ಅಂಕ ಗಳಿಸಿ ರಾಜ್ಯ ಮಟ್ಟದಲ್ಲೇ ವಿಶೇಷ ಸಾಧನೆ ಮಾಡಿದ್ದಾರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಈ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಾಂಶುಪಾಲ ಗಣೇಶ್ ಮೊಗವೀರರ ಸಾರಥ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಅನುಭವಿ ಉಪನ್ಯಾಸಕ ವೃಂದದವರ ಸತತ ಪರಿಶ್ರಮದಿಂದ ವಿದ್ಯಾರ್ಥಿಗಳು ದಾಖಲೆಯ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಗ್ರಾಮೀಣ ಭಾಗದ, 10ನೇ ತರಗತಿಯಲ್ಲಿ ಶೇ. 40 ಅಂಕ ಪಡೆದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ಶೇ. 85ಕ್ಕೂ ಹೆಚ್ಚು ಅಂಕ ಗಳಿಸಿರುವುದು ಜನತಾ ಕಾಲೇಜಿನ ಸಾಧನೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾಯ ದೇವಳಕ್ಕೆ ನೂತನ ಬ್ರಹ್ಮರಥ ಪುರಪ್ರವೇಶ
11 ಕೋಟಿ ರು. ವೆಚ್ಚದಲ್ಲಿ ಕೈಗಾರಿಕಾ ಪ್ರದೇಶ ಹೆದ್ದಾರಿ ಸಂಪರ್ಕ ರಸ್ತೆ ಅಭಿವೃದ್ಧಿ