ಕನ್ನಡ ಪ್ರಭ ವಾರ್ತೆ ಕುಣಿಗಲ್ ತಾಲೂಕಿನ ಶಾಲೆಗಳಲ್ಲಿ ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶ ಶೇ.90ರಷ್ಟು ಬಂದರೆ ಶಿಕ್ಷಕರ ಪಾದಪೂಜೆ ಮಾಡುವುದಾಗಿ ಶಾಸಕ ಡಾ. ರಂಗನಾಥ್ ಘೋಷಣೆ ಮಾಡಿದ್ದಾರೆ.
ಶಿಕ್ಷಕರ ಮೇಲೆ ಬಿಸಿಯೂಟ ಒತ್ತಡ ಕಡಿಮೆ ಮಾಡುವ ಬೇಡಿಕೆಗೆ ಸರ್ಕಾರದ ಮಟ್ಟದಲ್ಲಿ ಶ್ರಮಿಸುತ್ತೇನೆ. ಅತಿಥಿ ಶಿಕ್ಷಕರ ವೇತನ ಏರಿಕೆಗೂ ಸರ್ಕಾರದ ಮಟ್ಟದಲ್ಲಿ ಶ್ರಮ ಹಾಕುತ್ತೇನೆ ಎಂದರು . ಒಳಮೀಸಲಾತಿ ಜಾರಿಯಾದ ನಂತರ 20 ಸಾವಿರ ಶಿಕ್ಷಕರ ನೇಮಕವಾಗಲಿದ್ದು ತಾಲೂಕಿನ ಶಿಕ್ಷಕರ ಕೊರತೆ ನೀಗಲಿದೆ ಎಂದರು.
ಪ್ರಧಾನ ಭಾಷಣ ಮಾಡಿದ ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಕನ್ನಡಭಾಷೆ ಉಳಿಸಿ, ಬೆಳೆಸಿ, ಅಭಿವೃದ್ಧಿಗೊಳಿಸುವ ಮಹತ್ತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ, ಬೋಧನ ಅವಧಿಯಲ್ಲಿ ಒಗಟು, ರಾಮಾಯಣ, ಮಹಾಭಾರತ ಕಿರುಕಥೆ, ಕಥೆಗಳನ್ನು ಅಳವಡಿಸಿಕೊಂಡು ಬೋಧನೆ ಮಾಡುವ ಮಕ್ಕಳಲ್ಲಿ ಕಲಿಕೆ, ಸಂಸ್ಕಾರ ವೃದ್ಧಿಸಬೇಕು. ಪ್ರತಿಯೊಬ್ಬ ಶಿಕ್ಷಕರಲ್ಲೂ ವಿಶೇಷ ಜ್ಞಾನ, ಅದ್ಭುತ ಶಕ್ತಿ ಇದೆ, ಇದನ್ನು ಬಳಸಿಕೊಂಡು ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಮಾಡುವ ಮೂಲಕ ಮಕ್ಕಳ ಸರ್ವತೋಮುಖವಾಗಿ ಜ್ಞಾನ ಗ್ರಹಿಸಿ ಪ್ರಶ್ನೆ ಮಾಡುವ ರೀತಿಯಲ್ಲಿ ಸಿದ್ಧಗೊಳಿಸಬೇಕಿದೆ. ಶಿಕ್ಷಕರು ಉತ್ತಮ ಸಮಾಜ ನಿರ್ಮಾಣ ಮಾಡುವ ಹೊಣೆಗಾರಿಕೆ ಇದೆ ಎಂಬುದ ಮರೆಯಬಾರದು ಎಂದರು. ಉತ್ತಮ ಸಾಧನೆ ಮಾಡಿದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಿಇಒ ಬೋರೇ ಗೌಡ, ಪುರಸಭೆ ಸದಸ್ಯರಾದ ಮಂಜುಳಮ್ಮ, ಜಯಲಕ್ಷ್ಮೀ, ಕಸಾಪ ಅಧ್ಯಕ್ಷ ಡಾ.ಕಪನಿಪಾಳ್ಯ ರಮೇಶ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಣ್ಣ, ಪ್ರಾಥಮಿಕ, ಪ್ರೌಢಶಾಲಾ ವಿವಿಧ ಶಿಕ್ಷಕ ಸಂಘದ ಪದಾಧಿಕಾರಿಗಳು ಇತರರು ಹಾಜರಿದ್ದರು.