ಕನಕಗಿರಿಯಲ್ಲಿ ಶೇ. 73.24ರಷ್ಟು ಮತದಾನ

KannadaprabhaNewsNetwork |  
Published : May 08, 2024, 01:00 AM IST
7ಕೆಎನ್ಕೆ-1ಕನಕಗಿರಿ ಪಟ್ಟಣದ ಮಾದರಿ ಮತದಾನ ಕೇಂದ್ರದಲ್ಲಿ ಮಹಿಳೆಯರು ಸಾಲಾಗಿ ಬಂದು ಮತದಾನ ಮಾಡಿದರು.       | Kannada Prabha

ಸಾರಾಂಶ

ಲೋಕಸಭಾ ಚುನಾವಣೆ ಹಿನ್ನೆಲೆ ನಡೆದ ಮತದಾನದ ಪೈಕಿ ಕ್ಷೇತ್ರದಲ್ಲಿ ಶೇ. 73.24ರಷ್ಟು ಮತದಾನವಾಗಿದೆ.ಕನಕಗಿರಿ ಕ್ಷೇತ್ರ ವ್ಯಾಪ್ತಿಯ 266 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.

ಕನ್ನಡಪ್ರಭ ವಾರ್ತೆ ಕನಕಗಿರಿ

ಲೋಕಸಭಾ ಚುನಾವಣೆ ಹಿನ್ನೆಲೆ ನಡೆದ ಮತದಾನದ ಪೈಕಿ ಕ್ಷೇತ್ರದಲ್ಲಿ ಶೇ. 73.24ರಷ್ಟು ಮತದಾನವಾಗಿದೆ.

ಕನಕಗಿರಿ ಕ್ಷೇತ್ರ ವ್ಯಾಪ್ತಿಯ 266 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.

ತಾಪಮಾನ ಹೆಚ್ಚಾಗಿರುವುದರಿಂದ ಮಹಿಳೆಯರು, ವಯೋವೃದ್ಧರು ಬೆಳಗಿನ ಸಮಯದಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಿದರು. ಇನ್ನೂ ವಿವಿಧ ಬೂತ್ ಗಳಲ್ಲಿ ವೀಲ್ ಚೇರ್‌ ಗಳಲ್ಲಿ ತೆರಳಿ ಮತ ಹಾಕಿದರು. ಯುವ ಮತದಾರರು ಮಧ್ಯಾಹ್ನದ ಅವಧಿಯಲ್ಲಿ ಮತ ಹಾಕಿದರು. ಮತದಾರರಿಗೆ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ನಾನಾ ಸೌಲಭ್ಯ ಕಲ್ಪಿಸಲಾಗಿತ್ತು. ಮತಗಟ್ಟೆ ಪರಿಶೀಲನೆ: ಪಟ್ಟಣದ ನಾನಾ ಮತಗಟ್ಟೆಗಳಿಗೆ ಸಾಮಾನ್ಯ ವೀಕ್ಷಕಿ ಹೇಮಾಪುಷ್ಪ ಶರ್ಮಾ, ಸಹಾಯಕ ಚುನಾವಣಾಧಿಕಾರಿ ಮಲ್ಲಪ್ಪ ತೊದಲಬಾಗಿ, ತಹಸೀಲ್ದಾರ ವಿಶ್ವನಾಥ ಮುರುಡಿ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಎಲ್. ವೀರೇಂದ್ರಕುಮಾರ ಸೇರಿದಂತೆ ಚುನಾವಣಾ ವಿಭಾಗದ ವಿವಿಧ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಫೇಕ್ ಮತ ಚಲಾವಣೆಗೆ ವಿರೋಧ:

ಪಟ್ಟಣದ ಇಂದಿರಾನಗರದ (ಮತಗಟ್ಟೆ ಸಂಖ್ಯೆ:67)ರಲ್ಲಿ ಫೇಕ್ ಮತದಾನವಾಗಿರುವುದು ಕಂಡು ಬಂದಿದ್ದು, ಕೆಲ ಸಮಯ ಮತದಾನ ಸ್ಥಗಿತಗೊಂಡಿತ್ತು. ನಂತರ ಮತಗಟ್ಟೆಯ ಅಧಿಕಾರಿ ಮತದಾರನಿಂದ ಟೆಂಡರ್ ಮತ ಪಡೆಯುವುದಾಗಿ ತಿಳಿಸಿದ್ದರಿಂದ 20 ನಿಮಿಷಗಳ ನಂತರ ಮತದಾನ ಆರಂಭಗೊಂಡಿತು. ಮಹಿಳಾ ಮತದಾರರೊಬ್ಬರ ಹೆಸರಿನಲ್ಲಿ ಎರಡು ಬಾರಿ ಮತಚಲಾವಣೆಗೆ ಅವಕಾಶ ನೀಡಬಾರದು ಎಂದು ಬಿಜೆಪಿ ಮುಖಂಡ ಹನುಮಂತರೆಡ್ಡಿ, ರವಿ ತಿಮ್ಮಾಪೂರ ಆಗ್ರಹಿಸಿದರು. ಈ ಬಗ್ಗೆ ಪರಿಶೀಲಿಸಿ, ಮೇಲಾಧಿಕಾರಿಗಳ ಸಲಹೆ ಪಡೆದು ಮತದಾನಕ್ಕೆ ಅವಕಾಶ ನೀಡಲಾಯಿತು. ಅಲ್ಲದೇ ಬೆಳಗ್ಗೆ ಮತದಾನ ಆರಂಭವಾದಾಗಿನಿಂದಲೂ ಮತಯಂತ್ರ ಸಮಸ್ಯೆ ಉಂಟಾಗಿದ್ದರಿಂದ ಮತದಾನಕ್ಕೆ ತೊಂದರೆ ಉಂಟಾಯಿತು.ದುಬೈನಿಂದ ಬಂದು ದಂಪತಿ ಮತದಾನ:

ಹಲವು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಪಟ್ಟಣದ ಕುಮಾರಸ್ವಾಮಿ ಕಲುಬಾಗಿಲಮಠ ಹಾಗೂ ಅವರ ಪತ್ನಿ ಪಲ್ಲವಿ ದುಬೈನಿಂದ ಬಂದು ಹಕ್ಕು ಚಲಾಯಿಸಿದರು. ೭ನೇ ವಾರ್ಡಿನ ನಿವಾಸಿಯಾಗಿರುವ ಕುಮಾರಸ್ವಾಮಿ ಕಲುಬಾಗಿಲಮಠ ಹಾಗೂ ಪತ್ನಿ ಪಲ್ಲವಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. 2020ರ ಮೇ 21ರಂದು ಕುಮಾರಸ್ವಾಮಿ ತಂದೆ-ತಾಯಿ ಒಂದೇ ದಿನ ನಿಧನರಾಗಿದ್ದರು. ಆದರೆ ಕೊರೋನಾ ಹಿನ್ನೆಲೆ ತಂದೆ-ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿರಲಿಲ್ಲ. ಇದೀಗ ಲೋಕಸಭಾ ಚುನಾವಣೆ ನಿಮಿತ್ತ ಪಟ್ಟಣಕ್ಕೆ ಆಗಮಿಸಿ ಹಕ್ಕನ್ನು ಚಲಾಯಿಸಿದ್ದಾರೆ.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ