ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕಳೆದ ಶುಕ್ರವಾರ ರಾತ್ರಿ ಗುಂಡ್ಲುಪೇಟೆ-ಹಂಗಳ ರಸ್ತೆಯ ಪುರಸಭೆ ವ್ಯಾಪ್ತಿಯಲ್ಲಿ ಹಸುವಿಗೆ ಬೈಕ್ ಸವಾರ ತಾಲೂಕಿನ ವೀರನಪುರ ಗ್ರಾಮದ ಸುರೇಶ್ (55) ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೊಂದಡೆ ಗುಂಡ್ಲುಪೇಟೆ-ಹಂಗಳ ರಸ್ತೆಯ ಬಿಸಿಎಂ ವಿದ್ಯಾರ್ಥಿ ನಿಲಯದ ಮುಂದೆ ಮೂರು ಹಸುಗಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂರು ಹಸುಗಳು ದಾರುಣವಾಗಿ ಸಾವನ್ನಪ್ಪಿವೆ.
ಹೊಣೆ ಯಾರಿಗೆ?:ಪುರಸಭೆ ವ್ಯಾಪ್ತಿಯಲ್ಲಿ ಬೀಡಾಡಿ ದನ, ಕರುಗಳು ಹಾವಳಿ ಬಗ್ಗೆ ಕನ್ನಡಪ್ರಭ ಪತ್ರಿಕೆ ಹಲವು ವರದಿ ಪ್ರಕಟಿಸಿ ಪುರಸಭೆ ಎಚ್ಚರಿಸಿದರೂ ಬೀಡಾಡಿ ದನ, ಕರುಗಳ ಹಾವಳಿಗೆ ಬ್ರೇಕ್ ಹಾಕಿದ್ದರೆ ಓರ್ವನ ಜೀವ ಹಾಗೂ ಮೂರು ಜಾನುವಾರು ಜೀವ ಉಳಿಯುತ್ತಿತ್ತು. ಮೂರು ಹಸುಗಳು ಹಾಗೂ ಓರ್ವನ ಜೀವಕ್ಕೆ ಈಗ ಹೊಣೆ ಯಾರು ಹೊರುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಪುರಸಭೆ ಎಚ್ಚರಿಸಿದ್ದ ಕನ್ನಡಪ್ರಭಪುರಸಭೆ ವ್ಯಾಪ್ತಿಯಲ್ಲಿ ʼಬೀಡಾಡಿ ದನ, ಕರುಗಳ ಹಾವಳಿʼ ಬಗ್ಗೆ ಕಳೆದ ಜೂ.17 ರ ಕನ್ನಡಪ್ರಭ ಪತ್ರಿಕೆಯಲ್ಲಿ ಮೊದಲ ವರದಿ ಪ್ರಕಟಿಸಿ ಪುರಸಭೆ ಎಚ್ಚರಿಸಿತ್ತು. ಕನ್ನಡಪ್ರಭ ವರದಿ ಬಳಿಕ ಪುರಸಭೆ ಎಚ್ಚೆತ್ತು ಹತ್ತಾರು ಬೀಡಾಡಿ ದನ, ಕರುಗಳ ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಕೈ ತೊಳೆದುಕೊಂಡಿದ್ದರು.
ಇದಾದ ಬಳಿಕವೂ ಜು.೧೫ ರ ಕನ್ನಡಪ್ರಭದಲ್ಲಿ ʼಬೀಡಾಡಿ ದನಗಳ ಹಾವಳಿ ನಿಂತಿಲ್ಲʼಎಂದು ವರದಿ ಪ್ರಕಟಿಸಿ ಪುರಸಭೆ ಗಮನ ಸೆಳೆದ ಬಳಿಕ ಪುರಸಭೆ ಬೀಡಾಡಿ ದನ, ಕರುಗಳ ಮಾಲೀಕರಿಗೆ ದಂಡ ಹಾಗೂ ಎಚ್ಚರಿಕೆ ನೀಡಿದರು. ಆದರೂ ಬೀಡಾಡಿ ದನ, ಕರುಗಳ ಹಾವಳಿ ನಿಲ್ಲಲಿಲ್ಲ. ಮೈಸೂರು-ಊಟಿ ರಸ್ತೆ, ಚಾಮರಾಜನಗರ-ಕೇರಳ ರಸ್ತೆಯ ಜಂಕ್ಷನ್ಗಳಲ್ಲಿ ಬೀಡಾಡಿ ದನ, ಕರುಗಳ ಹಾವಳಿಗೆ ಸವಾರರು ರೋಸಿ ಹೋಗಿದ್ದಾರೆ.