ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಕಾವೇರಿ ಹೊರಹರಿವು ಹೆಚ್ಚಳ; ಹೊಗೇನಕಲ್‌ನಲ್ಲಿ ಕಾವೇರಿ ನರ್ತನ

KannadaprabhaNewsNetwork | Published : Jul 19, 2024 12:48 AM

ಕಾವೇರಿ ನದಿ ಹೊರಹರಿವು ಹೆಚ್ಚಳವಾಗಿದ್ದು, ಹೊಗೇನಕಲ್ ಜಲಪಾತ ರುದ್ರರಮಣೀಯ ವೈಭವದೊಂದಿಗೆ ಕಾವೇರಿ ಹರಿಯುತ್ತಿದ್ದಾಳೆ. ಹನೂರು ತಾಲೂಕಿನ ಕರ್ನಾಟಕ-ತಮಿಳುನಾಡು ಗಡಿ ಹೊಗೇನಕಲ್‌ ಜಲಪಾತ ಮೈದುಂಬಿದ್ದು ರುದ್ರರಮಣೀಯ ನೋಟ ಕಂಡು ಬಂದಿದೆ.

ಕನ್ನಡಪ್ರಭ ವಾರ್ತೆ ಹನೂರು ಕಾವೇರಿ ನದಿ ಹೊರಹರಿವು ಹೆಚ್ಚಳವಾಗಿದ್ದು, ಹೊಗೇನಕಲ್ ಜಲಪಾತ ರುದ್ರರಮಣೀಯ ವೈಭವದೊಂದಿಗೆ ಕಾವೇರಿ ಹರಿಯುತ್ತಿದ್ದಾಳೆ. ಹನೂರು ತಾಲೂಕಿನ ಕರ್ನಾಟಕ-ತಮಿಳುನಾಡು ಗಡಿ ಹೊಗೇನಕಲ್‌ ಜಲಪಾತ ಮೈದುಂಬಿದ್ದು ರುದ್ರರಮಣೀಯ ನೋಟ ಕಂಡು ಬಂದಿದೆ.

ಕಲ್ಲು ಬಂಡೆಗಳ ನಡುವೆ ವಯ್ಯಾರ: ಕಾವೇರಿ ಕೊಳ್ಳದಲ್ಲಿ ಹೆಚ್ಚು ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ನದಿಯ ಒಳ ಹರಿವು ಹೆಚ್ಚಾಗಿರುವುದರಿಂದ ಹೊಗೇನಕಲ್ ಜಲಪಾತಕ್ಕೆ ಅಪಾರ ಪ್ರಮಾಣದ ನೀರು ಕಾವೇರಿ ನದಿಯ ಮೂಲಕ ಹರಿದು ಬರುತ್ತಿದ್ದು, ಕಲ್ಲು ಬಂಡೆಗಳ ನಡುವೆ ಜಲ ವೈಯಾರ ದೃಶ್ಯವು ನೋಡುಗರ ಕಣ್ಮನ ಸೆಳೆಯುವಂತೆ ಸೃಷ್ಟಿಯಾಗಿದೆ.

ಜಲವೈಭವ ಅದ್ಭುತ ನೋಟ: ಕಳೆದ ವರ್ಷ ಬರದಿಂದ ತತ್ತರಿಸಿ ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿತ್ತು. ಆದರೆ ಈ ಬಾರಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಗೇನಕಲ್ ಜಲಪಾತದಲ್ಲಿ ಮತ್ತೆ ಜಲವೈಭವ ಮರುಕಳಿಸಿದೆ. ನೀರಿನ ಪ್ರಮಾಣ ಏರುಗತಿ ಇರುವುದರಿಂದ ತಮಿಳುನಾಡು ಮತ್ತು ಕರ್ನಾಟಕ ಎರಡು ಭಾಗದಲ್ಲೂ ಕಲ್ಲು ಬಂಡೆಗಳ ನಡುವೆ ಜಲಪಾತ ವೈಭವದಿಂದ ಕೂಡಿದೆ.

ಕರ್ನಾಟಕದ ನಯಾಗರ ಪ್ರಖ್ಯಾತಿ: ಹನೂರು ತಾಲೂಕಿನ ಗಡಿಯಂಚಿನಲ್ಲಿರುವ ಹೊಗೇನಕಲ್ ಜಲಪಾತದಲ್ಲಿ ತಮಿಳುನಾಡು-ಕರ್ನಾಟಕದ ಭಾಗದಲ್ಲಿ ಪ್ರವಾಸಿಗರಿಲ್ಲದೆ ಈ ಸ್ಥಳ ಬಣಗುಡುತ್ತಿದೆ. ಹೊಗೇನಕಲ್ ಜಲಪಾತವು ಕರ್ನಾಟಕದ ನಯಾಗರ ಎಂದು ಪ್ರಖ್ಯಾತಿ ಪಡೆದಿದ್ದು ನಮ್ಮ ರಾಜ್ಯದ ನದಿಯ ತಟದಲ್ಲಿ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿ ತಾಣದಲ್ಲಿ ಪ್ರವಾಸಿಗರಿಗೆ ಮೂಲ ಸೌಲಭ್ಯಗಳು ಇಲ್ಲದೆ ಇರುವುದರಿಂದ ಈ ಭಾಗದಲ್ಲಿ ರಜಾ, ವಿಶೇಷ ದಿನ ಹಾಗೂ ಇನ್ನಿತರ ದಿನಗಳಲ್ಲಿ ಪ್ರವಾಸಿಗರಿಲ್ಲದೆ ಬಣಗುಡುವಂತಾಗಿದೆ. ಜನಪ್ರತಿನಿಧಿ ಹಾಗೂ ಇಲ್ಲಿನ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಈ ಸ್ಥಳ ಪಾಳು ಕೊಂಪೆಯಾಗಿದೆ.

ತಮಿಳುನಾಡಿಗೆ ನೀರು: ಕಾವೇರಿ ಹೊರಹರಿವು ಹೆಚ್ಚಳ ಹಾಗೂ ಕಾವೇರಿ ಕೊಳ್ಳದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೊಗೇನಕಲ್ ಜಲಪಾತದ ಮೂಲಕ ಅಪಾರ ಪ್ರಮಾಣದಲ್ಲಿ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ.ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ಕರ್ನಾಟಕದ ನಮ್ಮ ಭಾಗದಲ್ಲಿ ಪ್ರವಾಸಿಗರಿಗೆ ಯಾವುದೇ ಸೌಲಭ್ಯ ಇಲ್ಲದೆ ಇರುವುದರಿಂದ ಹೊಗೇನಕಲ್ ಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.-ಮಣಿ, ಗೋಪಿನಾಥಂ.