ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕೇರಂ ಸಂಸ್ಥೆಯಿಂದ ಮಾನ್ಯತೆ ಪಡೆದ ದಾವಣಗೆರೆ ಜಿಲ್ಲಾ ಕೇರಂ ಸಂಸ್ಥೆಯಿಂದ ನಡೆಯುವ ಪಂದ್ಯಾವಳಿಯಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ ಸ್ಪರ್ಧಿಗಳು ಅಂತರ ಜಿಲ್ಲಾಮಟ್ಟದ ಕೇರಂ ಪಂದ್ಯಾವಳಿಯಲ್ಲಿ ಭಾಗವಹಿಸುವರು ಎಂದರು.
ಪ್ರವೇಶ ಶುಲ್ಕ ಸಿಂಗಲ್ಸ್ಗೆ ₹300, ಡಬಲ್ಸ್ಗೆ ₹400, ಸೀನಿಯರ್ಸ್ಗೆ ₹400 ನಿಗದಿಪಡಿಸಿದೆ. ಆಸಕ್ತ ಸ್ಪರ್ಧಿಗಳು ಹೆಸರು ನೋಂದಾಯಿಸಲು ಜೂ.12 ಕಡೆಯ ದಿನವಾಗಿದೆ. ಸಿಂಗಲ್ಸ್ನಲ್ಲಿ ಪ್ರಥಮ ಸ್ಥಾನಕ್ಕೆ ₹10 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ₹6 ಸಾವಿರ ನಗದು, ಆಕರ್ಷಕ ಟ್ರೋಫಿ ಹಾಗೂ ತೃತೀಯ ಬಹುಮಾನ ₹3 ಸಾವಿರ ಮತ್ತು ಟ್ರೋಫಿ ನೀಡಲಾಗುವುದು ಎಂದು ಹೇಳಿದರು.ಡಬಲ್ಸ್ ವಿಭಾಗದ ಪ್ರಥಮ ಬಹುಮಾನ ₹6 ಸಾವಿರ ನಗದು, ಟ್ರೋಫಿ, ದ್ವಿತೀಯ ಬಹುಮಾನ ₹3 ಸಾವಿರ ಮತ್ತು ಟ್ರೋಫಿ, ತೃತೀಯ ಬಹುಮಾನ ಆಕರ್ಷಕ ಟ್ರೋಫಿ, ಸೀನಿಯರ್ಸ್ ವಿಭಾಗದ ಪ್ರಥಮ ಸ್ಥಾನಕ್ಕೆ ₹3 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನಕ್ಕೆ ₹2 ಸಾವಿರ ನಗದು ಮತ್ತು ಟ್ರೋಫಿ, ತೃತೀಯ ಬಹುಮಾನ ಟ್ರೋಫಿ ನೀಡಲಾಗುವುದು. ಮಹಿಳಾ ವಿಭಾಗದ ಸಿಂಗಲ್ಸ್ ಪಂದ್ಯಾವಳಿ ಜೂ.15ರಂದು ನಡೆಯಲಿದೆ. ಪ್ರಥಮ ಮೂರು ಬಹುಮಾನಕ್ಕೆ ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ವಿವರಿಸಿದರು.
ಕೇರಂ ಸಂಸ್ಥೆಯ ಕೇರಂ ವಿ. ಗಣೇಶ, ವಿಜಯಕುಮಾರ, ಅಂಬರೀಶ, ಸುನಿಲ್ ಗುಂಡ, ಸಾಗರ್ ಇತರರು ಇದ್ದರು.
- - --11ಕೆಡಿವಿಜಿ5.ಜೆಪಿಜಿ:
ಕೇರಂ ಪಂದ್ಯಾವಳಿಯ ಪೋಸ್ಟರನ್ನು ಬಿಡುಗಡೆ ಮಾಡಲಾಯಿತು.