ಕಲಾದಗಿ: ಪ್ರಸಿದ್ಧ ಪವಮಾನ ಕ್ಷೇತ್ರವಾದ ತುಳಸಿಗೇರಿ ಶ್ರೀ ಹನುಮಂತದೇವರ ಕಾರ್ತಿಕೋತ್ಸವದೊಂದಿಗೆ ಶನಿವಾರ ಜಾತ್ರಾಮಹೋತ್ಸವ ಆರಂಭಗೊಂಡಿತು. ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ಪೂಜಾರ ಬಳಗದವರಿಂದ ಕಳಸಾರೋಹಣ ನೆರವೇರಿಸಿದ ನಂತರ ಜಾತ್ರಾಮಹೋತ್ಸವಕ್ಕೆ ಚಾಲನೆ ದೊರೆಯಿತು.
ಕನ್ನಡಪ್ರಭ ವಾರ್ತೆ ಕಲಾದಗಿ
ಪ್ರಸಿದ್ಧ ಪವಮಾನ ಕ್ಷೇತ್ರವಾದ ತುಳಸಿಗಿರಿ ಶ್ರೀ ಹನುಮಂತದೇವರ ಕಾರ್ತಿಕೋತ್ಸವದೊಂದಿಗೆ ಶನಿವಾರ ಜಾತ್ರಾಮಹೋತ್ಸವ ಆರಂಭಗೊಂಡಿತು.
ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ಪೂಜಾರ ಬಳಗದವರಿಂದ ಕಳಸಾರೋಹಣ ನೆರವೇರಿಸಿದ ನಂತರ ಜಾತ್ರಾಮಹೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರಿಂದ ಗೊವಿಂದಾ... ಗೊವಿಂದಾ... ಎಂದು ಹರ್ಷೋದ್ಘಾರವಾಯಿತು. ಕಾರ್ತಿಕೋತ್ಸವದಲ್ಲಿ ಸ್ಥಳಿಯರು, ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಭಕ್ತರು ದೇವರಿಗೆ ನೈವೇದ್ಯ ಸಮರ್ಪಿಸಿ ಗೋಪಾಳ ತುಂಬಿಸಿ ಭಕ್ತಿ ಸಮರ್ಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.