ಹೋರಾಟದ ಮೂಲಕ ಬದಲಾವಣೆ ಆಗಲಿ-ಪರಿಮಳ ಜೈನ್

KannadaprabhaNewsNetwork |  
Published : Nov 01, 2025, 02:15 AM IST
31ಎಚ್‌ವಿಆರ್1 | Kannada Prabha

ಸಾರಾಂಶ

ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶದ ಮೂಲಕ ಇವತ್ತು ಹೋರಾಟದ ಹೆಜ್ಜೆಗಳು ಆರಂಭವಾಗಿವೆ. ಮುಂದಿನ ದಿನಮಾನಗಳಲ್ಲಿ ಹೋರಾಟದ ಮೂಲಕ ಬದಲಾವಣೆ ಆಗಲಿ. ಇಲ್ಲಿ ಕೇವಲ ಹಾಸ್ಟೆಲ್ ಸಮಸ್ಯೆ ಅಷ್ಟೇ ಅಲ್ಲ, ಶಿಕ್ಷಣ ವ್ಯವಸ್ಥೆಯ ವಿಷಯಗಳ ಕುರಿತು ಚರ್ಚೆ ಆಗಲಿ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಪರಿಮಳ ಜೈನ್ ಹೇಳಿದರು.

ಹಾವೇರಿ: ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶದ ಮೂಲಕ ಇವತ್ತು ಹೋರಾಟದ ಹೆಜ್ಜೆಗಳು ಆರಂಭವಾಗಿವೆ. ಮುಂದಿನ ದಿನಮಾನಗಳಲ್ಲಿ ಹೋರಾಟದ ಮೂಲಕ ಬದಲಾವಣೆ ಆಗಲಿ. ಇಲ್ಲಿ ಕೇವಲ ಹಾಸ್ಟೆಲ್ ಸಮಸ್ಯೆ ಅಷ್ಟೇ ಅಲ್ಲ, ಶಿಕ್ಷಣ ವ್ಯವಸ್ಥೆಯ ವಿಷಯಗಳ ಕುರಿತು ಚರ್ಚೆ ಆಗಲಿ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರಾದ ಪರಿಮಳ ಜೈನ್ ಹೇಳಿದರು.ಇಲ್ಲಿನ ಗುರು ಭವನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ ಹಾಸ್ಟೆಲ್‌ಗಳ ಬಲವರ್ಧನೆಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶದ ಸಮಾರೋಪದಲ್ಲಿ ಅವರು ಮಾತನಾಡಿದರು.ಇವತ್ತು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹಾಗಾಗಿ ಸಾರ್ವಜನಿಕ ಶಿಕ್ಷಣವಾಗಿ ಉಳಿಯಬೇಕು. ನಾವೆಲ್ಲರೂ ಈ ಕುರಿತು ಬದ್ಧರಾಗಬೇಕು. ಸಮಾಜದ ಸುಧಾರಣೆಯಲ್ಲಿ ನಮ್ಮನ್ನು ತೊಡಗಿಸಿಗೋಳ್ಳೋಣ ಎಂದರು.ಡಿವೈಎಫ್ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ನಮ್ಮ ವಿದ್ಯಾರ್ಥಿ ಚಳವಳಿಗೆ ತವರು ಮನೆ ಹಾಸ್ಟೆಲ್‌ಗಳು. ನಾವೆಲ್ಲರೂ ಹಾಸ್ಟೆಲ್ ನಲ್ಲಿ ಓದಿರುವವರೇ. ಎಸ್‌ಎಫ್‌ಐ ಸಂಘಟನೆ ರಾಜ್ಯದ ಎಲ್ಲ ಜಿಲ್ಲೆಯ ಹಾಸ್ಟೆಲ್ ಸಮಸ್ಯೆಗಳ ಕುರಿತು ಹೋರಾಟ ಮಾಡುತ್ತಲೇ ಬಂದಿದೆ ಎಂದರು.ಕೆಲ ವರ್ಷಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ಸಿಗುತ್ತಿರಲಿಲ್ಲ. ಗುಣಮಟ್ಟದ ಆಹಾರ ಇರಲಿಲ್ಲ. ಅಂದಿನ ಶಾಸಕರು ಹಾಸ್ಟೆಲ್ ಸಮಸ್ಯೆ, ಸೌಲಭ್ಯಗಳನ್ನು ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರ ಹಾಕಿದರು. ಶಾಸಕರ ಮನೆಗೆ ಹೋದಾಗ ಮಾತು ಸೌಜನ್ಯದಿಂದ ಆರಂಭವಾಗಿತ್ತು. ಹೊರ ಹಾಕಿದ ವಿದ್ಯಾರ್ಥಿಗಳನ್ನು ಮತ್ತೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದಾಗ ನಮ್ಮನ್ನು ಜೈಲಿಗೆ ಹಾಕಿದರು ಎಂದು ಮೆಲುಕಿ ಹಾಕಿದರು.ಮರುದಿನ ಜೈಲಿಗೆ ಹಾಕಿದ್ದನ್ನು ಖಂಡಿಸಿ ಹಾವೇರಿಯಲ್ಲಿ ಎಸ್‌ಎಫ್‌ಐ ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆಯಿತು. ಇದರ ಫಲವಾಗಿ ರಾಜ್ಯ ಸರ್ಕಾರ ಮತ್ತು ಶಾಸಕರು ವಿದ್ಯಾರ್ಥಿ ಹೋರಾಟಕ್ಕೆ ಮಣಿದು ಬಿಡುಗಡೆ ಜೊತೆಗೆ ಹೊರ ಹಾಕಿದ ವಿದ್ಯಾರ್ಥಿಗಳನ್ನು ಮತ್ತೆ ಹಾಸ್ಟೆಲ್‌ಗೆ ಸೇರಿಸಲಾಯಿತು. ರಾಣಿಬೆನ್ನೂರಿನಲ್ಲಿ ಹಾಸ್ಟೆಲ್ ವಿದ್ಯಾರ್ಥಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದಾಗ, ಎಸ್‌ಎಫ್‌ಐ ಹೋರಾಟ ಮಾಡಿ, ಆ ವಿದ್ಯಾರ್ಥಿ ಕುಟುಂಬಕ್ಕೆ ಸರ್ಕಾರದಿಂದ 5ಲಕ್ಷ ರೂ ಪರಿಹಾರ ಕೊಡಿಸಲಾಯಿತು ಎಂದರು.ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿ, ಎಸ್‌ಎಫ್‌ಐ ಹೋರಾಟಗಳನ್ನು ಗಮನಿಸುತ್ತ ಬಂದಿರುವ ನಾನು ಬಂಡಾಯ ಸಾಹಿತ್ಯ ಆಶಯಗಳನ್ನು ಒಳಗೊಂಡಿರುವ ಸಂಘಟನೆ ಆಗಿದೆ. ನಿಮ್ಮ ಯಾವುದೇ ಹೋರಾಟಗಳಿಗೆ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂದು ಹೇಳಿದರು.ಸಮಾರಂಭದಲ್ಲಿ ವಕೀಲರಾದ ನಾರಾಯಣ ಕಾಳೆ, ಹರ್ಷ, ರೇಣುಕಾ ಕಹಾರ, ಸತೀಶ ಎಂ.ಬಿ., ಚಕೋರ ವೇದಿಕೆ ಸಂಚಾಲಕರು ಮಾರುತಿ ತಳವಾರ, ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಬ್ಲಿಕರ ಶಿವಪ್ಪ ಎನ್., ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಟಿ.ಎಸ್., ಕೇಂದ್ರ ಸಮಿತಿ ಸದಸ್ಯರಾದ ಸುಜಾತಾ ವೈ, ಡಾ. ಬಸವರಾಜ ಗುಳೇದಾಳ, ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ್, ಜಿಲ್ಲಾಧ್ಯಕ್ಷ ಬಸವರಾಜ ಎಸ್., ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!