ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ನ್ಯಾಯಾಲದ ಸಂಕೀರ್ಣದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಯಾವುದೇ ಪ್ರಕಾರದ ಪ್ರಕರಣಗಳು ನ್ಯಾಯಾಲಯದಲ್ಲಿ ಇರಲಿ. ಇಂತಹ ಪ್ರಕರಣಗಳ ವಾರಸುದಾರರು ಮುಂದೆ ಬಂದು ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಲು ಮನಸ್ಸು ಮಾಡಬೇಕು. ರಾಜೀ ಸಂಧಾನದ ಮೂಲಕ ಬಗೆಹರಿಸಲಾಗುವುದು. ಇಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನರು ವ್ಯಾಜ್ಯಗಳಿಂದ ದೂರವಿರಲು ಪ್ರಯತ್ನಿಸಬೇಕು ಎಂದರು.ಬ್ಯಾಂಕ್ ಗಳಲ್ಲಿ ಸಾಲ ತೆಗೆದು ಕೊಂಡು ಕಟ್ಟದೇ ಇರುವವರು, ಜಮೀನು ವ್ಯಾಜ್ಯಗಳು, ಗಂಡ-ಹೆಂಡಿರ ಜಗಳ, ಗಲಾಟೆ ವ್ಯಾಜ್ಯಗಳೂ ಸೇರಿದಂತೆ ಯಾವುದೇ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವವರು ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದರೆ ಸಾಕು. ಸಂಬಂಧಿಸಿದವರನ್ನು ಕರೆಸಿ ವ್ಯಾಜ್ಯ ಇತ್ಯರ್ಥ ಪಡಿಸಲು ಪ್ರಯತ್ನಿಸಲಾಗುವುದು. ಎದುರಾಳಿ ಕಕ್ಷಿದಾರರು ಒಪ್ಪಿದರೆ ಅನ್ಯ ಜಿಲ್ಲೆಯ ನ್ಯಾಯಾಧೀಶರನ್ನು ನೇಮಿಸಿ ಸಮಸ್ಯೆ ಬಗೆಹರಿಸಲು ಎರಡೂ ಕಡೆಯವರ ಒಪ್ಪಿಗೆ ಮೇರೆಗೆ ಇತ್ಯರ್ಥಗೊಳಿಸಲಾಗುವುದು ಎಂದು ವಿವರಿಸಿದರು.
ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್. ಅಶ್ವತ್ಥ್ ನಾಯಕ ಮಾತನಾಡಿ, ವಕೀಲರು ಜನರ ಸಮಸ್ಯೆ ಇತ್ಯರ್ಥ ಪಡಿಸಲು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ. ರಾಜೀ ಸಂಧಾನದ ಸಮಯದಲ್ಲಿ ಎರಡೂ ಕಡೆಯವರ ವಕೀಲರು ಇರಲಿದ್ದಾರೆ. ಬ್ಯಾಂಕ್ ಗಳ ಸಾಲದ ವಿಷಯದಲ್ಲೂ ರಾಜೀ ಸಂಧಾನ ಮಾಡಿಕೊಳ್ಳಲು ಮುಂದೆ ಬಂದರೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ಅಪರ ಸಿವಿಲ್ ನ್ಯಾಯಾಧೀಶರಾದ ಸಂಘಮಿತ್ರ, ವಕೀಲರ ಸಂಘದ ಉಪಾಧ್ಯಕ್ಷರಾದ ಬಿ.ಟಿ. ಶ್ಯಾಮಲಾ, ಕಾರ್ಯದರ್ಶಿ ಪರಮೇಶ್ವರಪ್ಪ, ಕಾರ್ಯಕಾರಿ ಸದಸ್ಯ ದೊರೆ ನಾಗರಾಜ್ ಇದ್ದರು. ಪೋಟೋ: