ಕಡ್ಡಾಯ ಮತದಾನದ ದೃಷ್ಟಿಯಲ್ಲಿ ಚುನಾವಣಾ ಆಯೋಗ ಈ ಪ್ರಕ್ರಿಯೆ
ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ಮ್ಯಾಪಿಂಗ್ ಕಾರ್ಯ ಜನವರಿಯಲ್ಲಿ ಆರಂಭಗೊಂಡು ಜೂನ್ 20ಕ್ಕೆ ಶೇ 95.5ರಷ್ಟು ಮುಗಿದಿದೆ ಎಂದು ಶಾಸಕ ಕೆ. ಎಸ್. ಆನಂದ್ ತಿಳಿಸಿದರು.
ಕಡೂರು ಸಮೀಪದ ಮಲ್ಲೇಶ್ವರದ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಎಸ್ ಐ ಆರ್ ಪ್ರಕ್ರಿಯೆ ಮತ್ತು ಬರಲಿರುವ ಗ್ರಾಪಂ ಚುನಾವಣೆಗಳ ಕುರಿತು ಕಾರ್ಯಕರ್ತರು ಮತ್ತು ಮುಖಂಡರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ 2002ರ ಓಟರ್ ಲಿಸ್ಟಿನ ಎಸ್ ಐ ಆರ್ ಆಗಿದ್ದು ನಿಮ್ಮಲ್ಲಿಗೆ ಅಧಿಕಾರಿಗಳು ಬಂದಾಗ ಮಾಹಿತಿ ನೀಡಿ ಫಾರಂ ಭರ್ತಿ ಮಾಡಿ ಕೊಟ್ಟಲ್ಲಿ ಮತದಾನಕ್ಕೆ ಅವಕಾಶ ಸಿಗುತ್ತದೆ. ಜು.29 ರವರೆಗೆ ಈ ಕಾರ್ಯ ನಡೆಯಲಿದೆ.ಹಿಂದೆ ಬಹಳಷ್ಟು ಮತಗಟ್ಟೆಗಳಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರೂ ಶೇಕಡವಾರು ಮತದಾನ ಕಡಿಮೆ ಆಗುವುದನ್ನು ತಪ್ಪಿಸಿ ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂಬ ಹಿತದೃಷ್ಟಿಯಲ್ಲಿ ಚುನಾವಣಾ ಆಯೋಗ ಈ ಪ್ರಕ್ರಿಯೆ ನಡೆಸುತ್ತಿದೆ ಎಂದರು.
ಈ ನಿಟ್ಟಲ್ಲಿ ಬರುವ 2028 ರೊಳಗೆ ಗ್ರಾಪಂ, ಜಿಪ, ತಾಪಂ ಮತ್ತು ವಿಧಾನಸಭಾ ಚುನಾವಣೆ ಬರಲಿವೆ. ಪಕ್ಷದಿಂದ ಈ ಎಸ್ ಆರ್ ಐ ಕುರಿತು ತರಬೇತಿ ಪಡೆದಿದ್ದೇನೆ. ನಾನು ಕ್ಷೇತ್ರದ ಬಿಎಲ್ ಎ 1 ಆಗಿದ್ದು ಅಂತಿಮವಾಗಿ ಕ್ಷೇತ್ರದ ಶೇ 95.5 ಮ್ಯಾಪಿಂಗ್ ಮುಗಿದಿದೆ ಎಂದರು. ಬರುವ ಗಳಲ್ಲಿ ಎಲ್ಲ ಉದ್ದೇಶಗಳಿಗೆ ಮತದಾರರ ಕಾರ್ಡು ಮಾನ್ಯ ಆಗಲಿದೆ. ಈ ನಿಟ್ಟಲ್ಲಿ ಪಕ್ಷದ ಬಿಎಲ್ ಒ ಗಳು 1 ತಿಂಗಳು ಪಕ್ಷದ ಮತಗಳು ಬಿಟ್ಟು ಹೋಗದಂತೆ ಕ್ರಮ ವಹಿಸಬೇಕು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಸಭೆ ಉಧ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಹರಿಪ್ರಸಾದ್ ಸಿದ್ದರಾಮಯ್ವ ನವರ ನೇತೃತ್ವದಲ್ಲಿ ಚುರುಕಾಗುತ್ತಿದೆ. ಮತದಾರ ಪಟ್ಟಿ 8 ಭಾರಿ ಪರಿಷ್ಕರಣೆ ಆಗಿದ್ದು ಇದು ಹೊಸ ಮತದಾರ ಪಟ್ಟಿ ಎಂಬು ದನ್ನು ಅರಿಯಬೇಕು. ಬಿಜೆಪಿ 2019 ರಲ್ಲಿ ಭಯೋತ್ಪಾದನೆ ಮುಂದಿಟ್ಟುಕೊಂಡು ಪಕ್ಷ ಒಡೆವ ಕೆಲಸ ಮಾಡಿದ್ದಾರೆ. ರಾಮನ ಹೆಸರು, ಫುಲ್ವಾಮ ಮತ್ತು ಧಾರ್ಮಿಕ ಭಾವನೆ ಕೆರಳಿಸುತ್ತಿದೆ. ರಾಮನ ಹಣ ಹೊಡೆದವರ ಬಗ್ಗೆ ಚಕಾರವೆತ್ತಿಲ್ಲ. ಇದೀಗ ಎಸ್ ಐ ಐರ್ ನಲ್ಲೂ ಕೈ ಬಿಡುವ ಕೆಲಸ ಆಗದಂತೆ ನಾವು ಕೆಲಸ ಮಾಡಬೇಕು ಎಂದರು.
29ಕೆಕೆಡಿಯು1.1ಎ.