ರಾಣಿಬೆನ್ನೂರಿನಲ್ಲಿ ಅದ್ಧೂರಿ ಆರ್‌ಎಸ್‌ಎಸ್ ಪಥಸಂಚಲನ

KannadaprabhaNewsNetwork |  
Published : Oct 27, 2025, 12:30 AM IST
ಫೋಟೊ ಶೀರ್ಷಿಕೆ: 26ಆರ್‌ಎನ್‌ಆರ್1, 1ಎ:ರಾಣಿಬೆನ್ನೂರು ನಗರದ ಪ್ರಮುಖ ಬೀದಿಗಳಲ್ಲಿ ಗಣವೇಷಧಾರಿ ಸ್ವಯಂಸೇವಕರು ಪಥಸಂಚಲನ ನಡೆಸಿದರು. | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸಂಘದ ಶತಮಾನೋತ್ಸವ ಪ್ರಯುಕ್ತ ನಗರದಲ್ಲಿ ಭಾನುವಾರ ಸಂಜೆ ೪ ಗಂಟೆಗೆ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಪಥಸಂಚಲನ ನಗರದಲ್ಲಿ ಅದ್ಧೂರಿಯಾಗಿ ಜರುಗಿತು.

ರಾಣಿಬೆನ್ನೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸಂಘದ ಶತಮಾನೋತ್ಸವ ಪ್ರಯುಕ್ತ ನಗರದಲ್ಲಿ ಭಾನುವಾರ ಸಂಜೆ ೪ ಗಂಟೆಗೆ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಪಥಸಂಚಲನ ನಗರದಲ್ಲಿ ಅದ್ಧೂರಿಯಾಗಿ ಜರುಗಿತು.ಇಲ್ಲಿನ ಅಶೋಕ ಸರ್ಕಲ್ ಬಳಿಯಿಂದ ಹೊರಟ ಪಥಸಂಚಲನ ರೈಲ್ವೆ ಸ್ಟೇಷನ್, ಸಂಗಮ್ ಸರ್ಕಲ್‌ಗೆ ಬಂದು ಎರಡು ತಂಡಗಳಾಗಿ ವಿಭಜನೆಗೊಂಡು ಒಂದು ತಂಡ ಗಾಂಧಿಗಲ್ಲಿ ಸಮುದಾಯ ಭವನ, ಚೌಡೇಶ್ವರಿ ಮಹಾದ್ವಾರ, ಅಂಬಾಭವಾನಿ ದೇವಸ್ಥಾನ, ಸುಭಾಷ ಸರ್ಕಲ್, ಮಹಾವೀರ ರಸ್ತೆ, ಚಲವಾದಿ ಸರ್ಕಲ್, ಬಸವೇಶ್ವರ ದೇವಸ್ಥಾನ, ಗುತ್ತಲ ಸ್ಟ್ಯಾಂಡ್, ತುಳಜಾಭವಾನಿ ದೇವಸ್ಥಾನದಿಂದ ದುರ್ಗಾ ಸರ್ಕಲ್ ಬಂದಿತು. ಇನ್ನೊಂದು ತಂಡ ಸಂಗಮ್ ಸರ್ಕಲ್‌ನಿಂದ ಪೋಸ್ಟ್ ಸರ್ಕಲ್, ಕೆಎಂಪಿ ಸರ್ಕಲ್, ಅಪ್ಪು ಸರ್ಕಲ್, ಎಡಿಬಿ ರಸ್ತೆ, ಚಕ್ಕಿಮಕ್ಕಿ ಸರ್ಕಲ್, ಎಂ.ಜಿ. ರಸ್ತೆಯಿಂದ ದುರ್ಗಾ ಸರ್ಕಲ್ ಬಂದು ತಲುಪಿತು. ಆನಂತರ ಎರಡೂ ತಂಡಗಳು ಒಂದಾಗಿ ಅಲ್ಲಿಂದ ಹಳೇ ಸರ್ಕಾರಿ ಆಸ್ಪತ್ರೆ ರಸ್ತೆ, ಗ್ರಾಮೀಣ ಪೊಲೀಸ್ ಠಾಣೆಯ ಕ್ರಾಸ್, ಕುರುಬಗೇರಿ ಕ್ರಾಸ್, ಹಳೇ ಪಿ.ಬಿ. ರಸ್ತೆಯಿಂದ ನಗರಸಭೆ ಕ್ರೀಡಾಂಗಣಕ್ಕೆ ಬಂದು ತಲುಪಿತು.ದಾರಿಯುದ್ದಕ್ಕೂ ಜನರು ರಸ್ತೆಗೆ ನೀರು ಸಿಂಪಡಿಸಿ ವಿವಿಧ ಬಗ್ಗೆಯ ರಂಗೋಲಿ ಹಾಕಿ ಗಣವೇಷಧಾರಿಗಳ ಮೇಲೆ ಪುಷ್ಟವೃಷ್ಟಿ ಸುರಿಸುವ ಮೂಲಕ ಪಥಸಂಚಲನಕ್ಕೆ ಸ್ವಾಗತ ಕೋರಿದರು. ಜೆಸಿಬಿ ವಾಹನಗಳ ಮೇಲೆ ನಿಂತು ಪುಷ್ಟವೃಷ್ಟಿ ಸುರಿಸಿ ಭಗವಾ ಧ್ವಜಕ್ಕೆ ಜನರು ನಮಸ್ಕರಿಸಿದರು. ಪಥಸಂಚಲನಲ್ಲಿ ಪಾಲ್ಗೊಂಡಿದ್ದ ಗಣವೇಷಧಾರಿ ಮಕ್ಕಳು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಕಂದು ಬಣ್ಣದ ಪ್ಯಾಂಟ್, ಬಿಳಿ ಅಂಗಿ, ಕರಿಬಣ್ಣದ ಟೋಪಿ ಧರಿಸಿ ಕೈಯಲ್ಲಿ ದಂಡ ಹಿಡಿದು ಅತ್ಯಂತ ಶಿಸ್ತುಬದ್ಧ ಸಾಗುತ್ತಿದ್ದ ಸ್ವಯಂ ಸೇವಕರು ಎಲ್ಲರ ಗಮನ ಸೆಳೆದರು. ಜಿಲ್ಲಾ ಸಂಘ ಚಾಲಕ ಈಶ್ವರ ಹಾವನೂರ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಪ್ರಕಾಶ ಬುರಡಿಕಟ್ಟಿ, ಕೆ. ಶಿವಲಿಂಗಪ್ಪ, ಡಾ. ಬಸವರಾಜ ಕೇಲಗಾರ, ಶ್ರೀನಿವಾಸ ನಾಡಗೇರ, ಕೆ.ಎನ್. ಷಣ್ಮುಖ, ರಾಮಕೃಷ್ಣ ತಾಂಬೆ, ಎ.ಬಿ. ಪಾಟೀಲ, ಅಜಯ ಮಠದ, ರಾಜೇಂದ್ರ ಬಾಕಳೆ, ಶಿವಕುಮಾರ ಹರ್ಕನಾಳ, ಸುನೀಲ ಮಿಸ್ಕಿನ್, ಭೋಜರಾಜ ಧಲಬಂಜನ್, ದತ್ತಾತ್ರೇಯ ರೇವಣಕರ, ಮಂಜಯ್ಯ ಚಾವಡಿ, ಗದಿಗೆಪ್ಪ ಹೊಟ್ಟಿಗೌಡ್ರ, ಸಿದ್ದಣ್ಣ ಚಿಕ್ಕಬಿದರಿ, ಗಣೇಶ ಪವಾರ, ಅಮೋಘ ಬಾದಾಮಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಡಾ. ಬಸವರಾಜ ಕೇಲಗಾರ, ಪೃಥ್ವಿರಾಜ ಜೈನ್, ಪಾಂಡುರಂಗ ಪೂಜಾರ, ಶ್ರೀನಿವಾಸ ಏಕಬೋಟೆ, ವಿನಯ ಬಾಳನಗೌಡ್ರ, ಶಿವರಾಜ ಲೇಪೊಜಿ, ಮಲ್ಲಿಕಾರ್ಜುನ ಅಂಗಡಿ, ನಾಗರಾಜ ಕುಲಕರ್ಣಿ, ಸಂತೋಷ ತೆವರಿ, ಜಗದೀಶ ಎಲಿಗಾರ, ಸುನೀಲ ಭೂತೆ, ಭರಮಪ್ಪ ಉರ್ಮಿ, ನಾಗರಾಜ ಪಾಟೀಲ, ಪ್ರಭು ಮುಂಡಾಸದ, ಮೌನೇಶ ತಳವಾರ, ಡಾ. ಚಂದ್ರಶೇಖರ ಕೇಲಗಾರ, ಜಗದೀಶ ಅಂಕಲಕೋಟೆ, ನಾಗರಾಜ ಪಾಟೀಲ, ಸಂಜೀವ ಶಿರಹಟ್ಟಿ, ಮಂಜುನಾಥ ಗೌಡಶಿವಣ್ಣನವರ, ನಾಗರಾಜ ಸೊಪ್ಪಿನ, ಯಲಲಿಂಗ, ಯುವರಾಜ ಬ್ಯಾಡಗಿ, ಯುವರಾಜ ಬಾರಟಕ್ಕೆ, ಪ್ರಕಾಶ ಪೂಜಾರ ಸೇರಿದಂತೆ ಸಹಸ್ರಾರು ಗಣವೇಷಧಾರಿಗಳು ಭಾಗವಹಿಸಿದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ