ಹರಪನಹಳ್ಳಿ: ನಾವು ಸೇವಿಸುವ ಆಹಾರ ಪದ್ಧತಿಯಲ್ಲಿನ ವ್ಯತ್ಯಾಸದಿಂದ ಇಂದು ವಯಸ್ಸಿನ ಭೇದವಿಲ್ಲದೆ ಬಿಪಿ, ಸಕ್ಕರೆ ಕಾಯಿಲೆ ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂದು ಇಲ್ಲಿಯ ಫುಟ್ ಪಲ್ಸ್ ಥೆರಪಿಯ ಆರೋಗ್ಯ ತಜ್ಞ ರತ್ನಕರ ಶೆಟ್ಟಿ ಹೇಳಿದರು.ಅವರು ಪಟ್ಟಣದ ಬಿಇಒ ಕಚೇರಿ ಸಭಾಂಗಣದಲ್ಲಿ ನಿವೃತ್ತಿ ನೌಕರರ ಸಂಘ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕಂಪಾನಿಯೋ ದಾವಣಗೆರೆ ಸಹಯೋಗದಲ್ಲಿ ಉಚಿತ ಫುಟ್ ಪಲ್ಸ್ ಥೆರಪಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರು ವಾಕಿಂಗ್ ಮತ್ತು ವ್ಯಾಯಾಮಗಳನ್ನು ಮಾಡದೇ ಟಿವಿ, ಮೊಬೈಲ್ಗಳಿಗೆ ದಾಸರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ರೋಗಗಳು ಮನುಷ್ಯನ ಆವರಿಸಿ ಆರೋಗ್ಯ ಹದಗೆಡಲು ಕಾರಣವಾಗಿವೆ ಎಂದು ಹೇಳಿದರು.
ಮನೆಯಲ್ಲಿಯೇ ಹಳೇ ಕಾಲದ ಪದ್ಧತಿಯಂತೆ ಔಷಧಗಳು ಇವೆ. ಅವುಗಳನ್ನು ಪ್ರತಿನಿತ್ಯ ಸೇವನೆ ಮಾಡಿದರೆ, ರೋಗಗಳಿಂದ ದೂರವಿರಲು ಸಾಧ್ಯ ಎಂದು ತಿಳಿಸಿದರು.ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ ನಿವೃತ್ತಿ ನೌಕರ ಸಂಘದವರು ಇಂತಹ ಸಮಾಜ ಕಾರ್ಯಗಳು ಮಾಡುತ್ತಾ ಬಂದಿದ್ದಾರೆ. ಇವರ ಸೇವೆಗೆ ನಮ್ಮ ಇಲಾಖೆಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ. ಕಳೆದ 18ರಿಂದ ಈ ಕಾರ್ಯಾಗಾರ ನಡೆಯುತ್ತಿದ್ದು, ಇದರ ಸದುಪಯೋಗವನ್ನು ಇನ್ನು ಹೆಚ್ಚಿನ ಜನತೆ ಪಡೆಯಬೇಕೆಂಬುದು ನಮ್ಮ ಆಸೆ ಎಂದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಡಿ.ರಾಮನಮಲಿ, ಕ್ಷೇತ್ರಸಮನ್ವಯ ಅಧಿಕಾರಿ ಹೊನ್ನೆತ್ತಪ್ಪ,ತರಬೇತುದಾರರಾದ ನಾಗರಾಜ, ಪ್ರಕಾಶ್, ಪಕ್ಕೀರಪ್ಪ, ಹೊಳಗುಂದಿ ಮಂಜಣ್ಣ ಇದ್ದರು.