-ಜಗತ್ ಪ್ರಸೂತಿಕ ಅಲಂಕಾರದಲ್ಲಿ ಕಂಗೊಳಿಸಿದಳು ಅಧಿದೇವತೆ ಶಾರದೆ.ಹರಿದು ಬಂದಿತು ಭಕ್ತ ಸಾಗರ
ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಭಾನುವಾರ ಶರನ್ನವರಾತ್ರಿ ಉತ್ಸವ ವಿಧ್ಯುಕ್ತವಾಗಿ ಆರಂಭಗೊಂಡಿತು. ಮಹಾಲಯ ಅಮಾವಾಸ್ಯೆ ದಿನವಾದ ಭಾನುವಾರ ಬೆಳಿಗ್ಗೆ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಮಹಾಭಿಷೇಕ ನಡೆಯಿತು. ಮಹಾಭಿಷೇಕದ ನಂತರ ಶೃಂಗೇರಿ ವೈಭವದ ದಸರಾಕ್ಕೆ ಅಧಿಕೃತ ಚಾಲನೆ ದೊರೆಯಿತು.
ಮಹಾಲಯ ಅಮಾವಾಸ್ಯೆಯಂದು ಮಹಾಭಿಷೇಕದೊಂದಿಗೆ ಆರಂಭವಾಗುವ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು, ಮತ್ತೆ ಭೂಮಿ ಹುಣ್ಣಿಮೆಯಂದು ಶ್ರೀ ಶಾರದಾಂಬೆಗೆ ಮಹಾಭಿಷೇಕದೊಂದಿಗೆ ಅಂದು ನಡೆಯಲಿರುವ ತೆಪ್ಪೋತ್ಸವದೊಂದಿಗೆ ನವರಾತ್ರಿಯ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತದೆ.ಶಾರದೆಗೆ ಪಂಚಾಮೃತಭಿಷೇಕದ ನಂತರ ಮೂಲ ಬಿಂಬದ ಹರಿದ್ರಾದರ್ಶನ ನೀರಾಂಜನ, ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ನೆರವೇರಿತು. ವಿವಿಧ ರೀತಿ ಫಲ ಪುಷ್ಪ, ಪಂಚಾಮೃತಭಿಷೇಕದಿಂದ ಶಾರದೆಯನ್ನು ಸಂಪ್ರೀತ ಗೊಳಿಸಲಾಯಿತು. 108 ಆವರ್ತಿ ಶ್ರೀ ಸೂಕ್ತ ಪಠಣದಿಂದ ಅಭಿಷೇಕ, ಜಗದ್ಗುರುಗಳ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿತು.ಶಕ್ತಿ ಗಣಪತಿ ಸನ್ನಿದಿಯಲ್ಲಿ ಶಾರದಾಂಬೆ ಪ್ರಧಾನ ಅರ್ಚಕರಿಂದ ವಿಶೇಷ ಪೂಜೆ, ನಂತರ ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ನವರಾತ್ರಿ ವಿಶೇಷ ಪೂಜೆ ನೆರವೇರಿತು. ಶಾರದಾಂಬೆ ಉತ್ಸವ ಮೂರ್ತಿಯಲ್ಲಿ ಸ್ವರ್ಣ ರಥದಲ್ಲಿಟ್ಟು ದೇವಾಲಯದ ಪ್ರಾಂಗಣದಲ್ಲಿ ಸುತ್ತು ಭರಿಸಲಾಯಿತು.
-- ಬಾಕ್ಸ್--
ಶ್ರೀ ಶಾರದಾಂಬೆಗೆ ಮಹಾಭಿಷೇಕದ ನಂತರ ಜಗತ್ ಪ್ರಸೂತಿಕ ಅಲಂಕಾರದಿಂದ ಸಿಂಗರಿಸಲಾಗಿತ್ತು. ನವರಾತ್ರಿ ಉತ್ಸವ ಅಂಗವಾಗಿ ಶ್ರೀ ಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದೆ.
ನವರಾತ್ರಿ ಆರಂಭದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಅಷ್ಟದ್ರವ್ಯ ಗಣಹೋಮ, ಸಪ್ತಶತಿ ಪಾರಾಯಣ, ಶತಚಂಡೀ ಮಹಾಯಾಗ, ದೇಸಿ ಭಾಗವತ ಪಠಣ, ಲಲಿತೋಪಾಖ್ಯಾನ, ಲಕ್ಷ್ಮಿನಾರಾಯಣ ಹೃದಯ, ಸೂತ ಸಂಹಿತೆ,ಮೊದಲಾದ ಗ್ರಂಥಗಳನ್ನು ಪಠಿಸಲಾಗುತ್ತದೆ. ಪ್ರತೀ ದಿನ ಶಾರದಾಂಬೆಯ ಸನ್ನಿದಿಯಲ್ಲಿ ಮಹಾ ಮಂಗಳಾರತಿ, ಲಕ್ಷಾರ್ಚನೆ, ಸಂಜೆ ಬೀದಿ ಉತ್ಸವ,ದಿಂಡೀ ದೀಪಾರಾಧನೆ,ಅಷ್ಟಾವಧಾನ ಸೇವೆ,ಜಗದ್ಗುರುಗಳ ದಸರಾ ದರ್ಬಾರ್ ನಡೆಯಲಿದೆ.
21 ಶ್ರೀ ಚಿತ್ರ 1-ಶೃಂಗೇರಿ ಶಾರದೆಗೆ ಭಾನುವಾರ ಜಗತ್ ಪ್ರಸೂತಿಕ ಅಲಂಕಾರ ಮಾಡಲಾಗಿತ್ತು.