ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ವಿದ್ಯಾಪ್ರಚಾರದ ವಿಜಯ ಕಾಲೇಜಿನಲ್ಲಿ ನಡೆದ ‘ಮರಳಿ ಮನಕೆ -ಗಾಂಧಿ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿಂತನೆಗಳ ಪ್ರಸ್ತುತಿ’ ಎರಡು ದಿನದ ವಿಚಾರ ಸಂಕಿರಣದ’ ಗಾಂಧೀಜಿ ಪರಿಕಲ್ಪನೆಯ ಗ್ರಾಮ ಸ್ವರಾಜ್ಯ’ ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಾಂಧೀಜಿ ಭಜನೆ ಮಾಡುವುದನ್ನು ಬಿಟ್ಟು ಗ್ರಾಮೀಣರಿಗೆ, ಮಕ್ಕಳ ಮನಸ್ಸಿನ ಅಂಗಳಕ್ಕೆ ಗಾಂಧಿ, ಅಂಬೇಡ್ಕರ್, ಬುದ್ಧ, ಬಸವ ಅವರ ವಿಚಾರಧಾರೆ ತಲುಪಿಸಬೇಕಿದೆ. ಇದರ ಜತೆಗೆ ಮಕ್ಕಳಿಗೆ ಲೋಕಜ್ಞಾನದ ಅರಿವು ಮೂಡಿಸಬೇಕು ಎಂದರು.ಹಳ್ಳಿಗಳ ಸುಧಾರಣೆಗೆ ಯಾರು ಮನಸ್ಸು ಮಾಡುತ್ತಿಲ್ಲ. ಭ್ರಷ್ಟಾಚಾರ ಶಾಪ, ಕಳಂಕ ಎನ್ನುವುದನ್ನು ನಮ್ಮ ಯಾವ ನಾಯಕರು ತೋರಿಸುವ ಕೆಲಸ ಮಾಡುತ್ತಿಲ್ಲ. ಬದಲಾಗಿ ಅವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಾಯಕರಿಗೆ ಸಾರ್ವಜನಿಕ ಲಜ್ಜೆ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಹಣಕಾಸು ಆಯೋಗದ ನಿವೃತ್ತ ನಿರ್ದೇಶಕ ಎಂ.ಕೆ.ಕೆಂಪೇಗೌಡ ಮಾತನಾಡಿ, ಗಾಂಧಿ ಅವರ ಗ್ರಾಮಸ್ವರಾಜ್ಯದ ಕಲ್ಪನೆ ಸಹಕಾರಗೊಳಿಸುವ ನಿಟ್ಟಿನಲ್ಲಿ ಸರ್ಕಾರಗಳು ಪಂಚಾಯಿತ್ ರಾಜ್ಯ ವ್ಯವಸ್ಥೆಯಡಿ ಕೆಲಸ ಮಾಡುತ್ತಿದೆ. ಅಧಿಕಾರ ವಿಕೇಂದ್ರೀಕರದಡಿ ತಳಮಟ್ಟದಿಂದ ಅಧಿಕಾರಕೊಟ್ಟು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಯುವ ಸಮುದಾಯದ ಇದರ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.
ಗಾಂಧೀಜಿ ಅಧಿಕಾರದಿಂದ ದೂರ ಉಳಿದವರು. ನಾಲ್ವಡಿಯವರು ಸಿಕ್ಕ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜದ ಸುಧಾರಣೆಗೆ ಶ್ರಮಿಸಿದರು. ಅಧಿಕಾರ ಅಹಂಕಾರ ಮತ್ತು ಸ್ವಾರ್ಥಕ್ಕಾಗಿ ಬಳಕೆಯಾಗಬಾರದು. ಜನ, ಸಮಾಜದ ಹಿತಕಾಯಬೇಕು ಇದಕ್ಕೆ ನಾಲ್ವಡಿಯವರು ಉದಾಹರಣೆಯಾಗಿದ್ದಾರೆ ಎಂದರು.
ಸರ್ಕಾರಗಳು ಪುಸ್ತಕದ ಸಂಸ್ಕೃತಿಯನ್ನು ನಾಶ ಮಾಡುತ್ತಿವೆ. ಮಕ್ಕಳು ಪುಸ್ತಕ ಓದುವ ಸಂಸ್ಕೃತಿಯಲ್ಲಿ ತೊಡಗಿಸಿಕೊಳ್ಳಬೇಕು. ಒಳ್ಳೆಯ ತನಕ್ಕೆ ಮಹತ್ವ ಇಲ್ಲದ ಸಂದರ್ಭದಲ್ಲಿ ಕೆಟ್ಟದ್ದು ರಾರಾಜಿಸುತ್ತದೆ. ಮಾಧ್ಯಮಗಳು ಕೆಟ್ಟದ್ದನ್ನು ವೈಭವಿಕರಿಸುತ್ತಿವೆ. ಏಕೆಂದರೆ ಕೆಟ್ಟದ್ದು ಸಮಾಜವನ್ನು ಆಕರ್ಷಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.