ಲಿಂಗದಹಳ್ಳಿ ಗ್ರಾಪಂನಲ್ಲಿ ಪ್ರಜಾ ಸೇವಾ ಅಂದೋಲನ ಸಭೆಗೆ ಚಾಲನೆ ಕಾರ್ಯಕ್ರಮ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಹೊಸದಾಗಿ ಸ್ತಾಪಿಸಿರುವ ಪ್ರಜಾ ಸೇವಾ ಇಲಾಖೆಯಿಂದ ರಾಜ್ಯಾದ್ಯಾದಂತ ಜನಸಾಮನ್ಯರ ಸಮಸ್ಯೆಗಳ ಪರಿಹಾರಕ್ಕೆ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದರು.
ಲಿಂಗದಹಳ್ಳಿ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ತರೀಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರಜಾ ಸೇವಾ ಆಂದೋಲನ ಪ್ರಥಮ ಸಭೆ ಉದ್ಘಾಟಿಸಿ ಮಾತನಾಡಿದರು ಲಿಂಗದಹಳ್ಳಿ ಸೇರಿದಂತೆ ತರೀಕೆರೆ ವಿಧಾನ ಸಭಾ ಕ್ಷೇತ್ರದಾದ್ಯಂತ ಅನೇಕ ಜನ ಸ್ಪಂದನ ಕಾರ್ಯ ಕ್ರಮ ನಡೆಸಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ. ಪ್ರಜಾ ಸೇವಾ ಇಲಾಖೆಯಿಂದ ಲಿಂಗದಹಳ್ಳಿಯಲ್ಲಿ ಇಂದು 60 ಸಮಸ್ಯೆಗಳ ಅರ್ಜಿಗಳನ್ನು ಸ್ವೀಕರಿಸಿ ಅವುಗಳಲ್ಲಿ ಸ್ಥಳದಲ್ಲಿಯೇ ಪರಿಹರಿಸುವಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದು ಬಾಕಿ ಉಳಿದ ಅರ್ಜಿಗಳನ್ನು ಮುಂಬರುವ ಬುಧವಾರ ತಾಲೂಕು ಮಟ್ಟದ ಅಧಿಕಾರಿಗಳೆಲ್ಲರೂ ಸಭೆ ಸೇರಿ ಆಯಾ ಇಲಾಖೆಯಿಂದ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.ಲಿಂಗದಹಳ್ಳಿ ಹೋಬಳಿಯಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿದ್ದು ಕಲ್ಲಾಳು ಮತ್ತು ಸಹ್ಯಾದ್ರಿಪುರದಲ್ಲಿ ನಿರಾಶ್ರಿ ತರಿಗೆ ನೀಡಲಾದ ನಿವೇಶನಗಳ ಸರ್ವೆ ನಂಬರ್ಗಳ ಖಾತಾಗಳು ಬದಲಾಗಿದ್ದು ಮುಂಬರುವ ದಿನಗಳಲ್ಲಿ ಅವುಗಳನ್ನು ಸರಿಪಡಿಸಲಾಗುವುದು. ಹೋಬಳಿಯಾದ್ಯಂತ ಬರಗಾಲ ಆವರಿಸಿದ್ದು ಈ ಭಾಗದ ಕೆರೆಗಳಿಗೆ ನಾಳೆಯಿಂದಲೇ ನೀರು ತುಂಬಿಸಲಾಗುವುದು. ಇದಕ್ಕೂ ಕೆಲವು ಸಮಸ್ಯೆಗಳಿದ್ದು ಆ ಸಮಸ್ಯೆಗಳನ್ನು ಬಗೆಹರಿಸಿ ನೀರು ಹರಿಸಲಾಗುವುದು ಎಂದು ಹೇಳಿದರು.
ಇತ್ತೀಚೆಗೆ ರಾಜ್ಯ ಸರ್ಕಾರ ಗ್ರಾಮಸ್ಥರ ವಾರ್ಷಿಕ ತಲಾ ಆದಾಯ ಏರಿಕೆ ಮಾಡಿದ್ದು ಅದರ ಅಂಗವಾಗಿ ಕಳೆದ ಕೆಲ ತಿಂಗಳಿಂದ ನಿಂತು ಹೋಗಿದ್ದ ವಿವಿಧ ಮಾಸಾಶನಗಳ ಪೈಕಿ 600 ಕ್ಕೂ ಅಧಿಕ ಮಾಸಾಶನಗಳಿಗೆ ಮರು ಜೀವ ನೀಡಲಾಗಿದೆ. ಬಾಕಿ ಉಳಿದವು ಪ್ರಗತಿಯಲ್ಲಿದೆ ಎಂದು ಹೇಳಿದರು.
-
ಲಿಂಗದಹಳ್ಳಿಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಪ್ರಜಾ ಸೇವಾ ಆಂದೋಲನ ಪ್ರಥಮ ಸಭೆ ಉದ್ಘಾಟನೆ ನೆರವೇರಿಸಿದರು. ತಹಸೀಲ್ದಾರ್ ರಶ್ಮಿ ಎಚ್.ಜೆ. ಮತ್ತಿತರರು ಇದ್ದರು.