ಮಂಗಳೂರು: ಪ್ರಭಾಕರ ಕಾಮತ್ ಅವರು ಯಕ್ಷಗಾನ ಸೇವೆಯಿಂದ ಭಗವಂತನ ಸಾಕ್ಷಾತ್ಕಾರ ಪಡೆದವರು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ವಾರದ ಕೂಟ ನಡೆಸುವ ಹಲವು ಯಕ್ಷಗಾನ ಸಂಘಗಳಲ್ಲಿ ಹಲವು ದಶಕಗಳಿಂದ ನಿರಂತರವಾಗಿ ತೊಡಗಿಸಿಕೊಂಡು ಸಾರ್ಥಕ ಜೀವನವನ್ನು ನಡೆಸಿದವರು ಎಂದು ಅವರು ನುಡಿ ನಮನ ಸಲ್ಲಿಸಿದರು.
ಪ್ರಭಾಕರ ಯಕ್ಷ ನಮನ ಶೀರ್ಷಿಕೆಯಲ್ಲಿ ಶ್ರೀ ಜಗದಂಬಾ ಯಕ್ಷಗಾನ ಮಂಡಳಿಯವರಿಂದ ವಾಲಿ ಮೋಕ್ಷ, ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ವತಿಯಿಂದ ಅತಿಕಾಯ ಮೋಕ್ಷ ಹಾಗೂ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯವರಿಂದ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ಕೂಟಗಳು ನಡೆಯಿತು.ಸಂಜಯರಾವ್, ಶ್ರೀನಾಥ ಪ್ರಭು, ಸಿ.ಎಸ್.ಭಂಡಾರಿ, ಪ್ರಫುಲ್ಲಾ ನಾಯಕ್ , ಅರ್ಚಕ ವೇದಮೂರ್ತಿ ವಾಸುದೇವ ಭಟ್ ಶಿವಪ್ರಸಾದ ಪ್ರಭು, ಶೋಭಾ ಐತಾಳ, ಅಶೋಕ ಬೋಳೂರು, ಯೋಗೀಶ ಕುಮಾರ್ ಜೆಪ್ಪು, ಜಯರಾಮ ಅಂಚನ್, ಶಿವರಾಮ ಪಣಂಬೂರು, ಸಂಘದ ಕಲಾವಿದರು ಹಾಗೂ ಪ್ರಭಾಕರ ಕಾಮತ್ ಕುಟುಂಬದ ಸದಸ್ಯರು ಇದ್ದರು.