ಕಡೂರಿನಲ್ಲಿ ಶ್ರೀ ಮಂಜು ವೆಂಕಟೇಶ್ವರ ಇನ್ಸೈಟ್ ಎಜುಕೇಶನ್ ಟ್ರಸ್ಟ್ ನಿಂದ ಬಚ್ಪನ್ ಪ್ಲೇ ಸ್ಕೂಲ್ ಉದ್ಘಾಟನೆ
ಆಧುನಿಕ ವ್ಯವಸ್ಥೆಯೊಂದಿಗೆ ಪುಟಾಣಿ ಮಕ್ಕಳಿಗೆ ಆಟೋಟದ ಜೊತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಅವರು ಪಟ್ಟಣದ ರೈಲ್ವೆ ಗೇಟ್ ಬಳಿ ಶ್ರೀ ಮಂಜು ವೆಂಕಟೇಶ್ವರ ಇನ್ಸೈಟ್ ಎಜುಕೇಶನ್ ಟ್ರಸ್ಟಿನಿಂದ ನೂತನವಾಗಿ ಆರಂಭಗೊಂಡ ಪ್ಲೇ ಸ್ಕೂಲನ್ನು ದೀಪ ಬೆಳಗಿಸಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಟ್ರಸ್ಟಿನ ಶೈಕ್ಷಣಿಕ ಕಾಳಜಿಯನ್ನು ಶ್ಲಾಘಿಸಿ, ಕಡೂರಿಗೆ ಗುಣಮಟ್ಟದ ಬಾಲ್ಯದ ಶಿಕ್ಷಣ ತಂದಿರುವುದು ಅಭಿನಂದನಾರ್ಹ. ಬಚ್ಪನ್ ಶಾಲೆಯಲ್ಲಿ ಚಟುವಟಿಕೆ ಆಧಾರಿತ ಕಲಿಕೆ, ಸ್ಮಾರ್ಟ್ ಕ್ಲಾಸ್ ಮತ್ತು ಸುರಕ್ಷಿತ ವಾತಾವರಣ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.ಟ್ರಸ್ಟಿನ ಆಡಳಿತ ಮಂಡಳಿ ಸ್ಪೀಕ್-ಓ-ಪೆನ್ ತಂತ್ರಜ್ಞಾನ, ವರ್ಣಮಯ ತರಗತಿಗಳು ಹಾಗೂ ಮಕ್ಕಳ ಸ್ನೇಹಿ ಪಠ್ಯಕ್ರಮದ ಬಗ್ಗೆ ವಿವರಿಸಿದ ಶಾಸಕರು, ಆಟದ ಪ್ರದೇಶ ಮತ್ತು ತರಗತಿಗಳಿಗೆ ಭೇಟಿ ನೀಡಿ ಪುಟಾಣಿಗಳನ್ನು ಮಾತನಾಡಿಸಿ ಅವರೊಂದಿಗೆ ಕೆಲ ಕಾಲ ಕಳೆದರು. ಭಾರತದ ಪ್ರಮುಖ ಪ್ಲೇ ಸ್ಕೂಲ್ ಸರಪಳಿಯಾದ ಬಚ್ಪನ್, ಮಂಜು ವೆಂಕಟೇಶ್ವರ ಇನ್ಸೈಟ್ ಎಜುಕೇಶನ್ ಟ್ರಸ್ಟ್ ಸಹಯೋಗದಲ್ಲಿ ಕಡೂರಿನಲ್ಲಿ ವಿಶ್ವ ದರ್ಜೆಯ ಬಾಲ್ಯದ ಶಿಕ್ಷಣವನ್ನು ಆರಂಭಿಸಿದೆ. ಟ್ರಸ್ಟಿನಿಂದ ಆರಂಭವಾಗಿರುವ ಬಚ್ಪನ್ ಪ್ಲೇ ಸ್ಕೂಲ್, ಕಡೂರಿನ ಪುಟಾಣಿಗಳಿಗೆ ಸಂತಸದಾಯಕ ಕಲಿಕೆ, ಸುರಕ್ಷಿತ ವಾತಾವರಣ ಮತ್ತು ಉಜ್ವಲ ಭವಿಷ್ಯದ ಭರವಸೆ ನೀಡಲಿದೆ. ಪೋಷಕರ ಸಹಕಾರ ಮತ್ತು ಸಮಾಜದ ಹಾರೈಕೆಯೊಂದಿಗೆ ಈ ಶೈಕ್ಷಣಿಕ ಪಯಣ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
22ಕೆಕೆಡಿಯು1.